ಹನೂರು: 2017 ರಲ್ಲಿ ನಿರಂತರ ಬರದಿಂದ ತೀವ್ರ ಸಂಕಷ್ಟದಲ್ಲಿದ್ದ ಜಾನುವಾರುಗಳಿಗೆ ಗೋಶಾಲೆ ತೆರೆಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕೆ ವಿ ದೊಡ್ಡಿ ಗ್ರಾಮದ ಸಿದ್ದಪ್ಪರವರಿಗೆ ರಾಮಚಂದ್ರಪುರ ಮಠದ ವತಿಯಿಂದ ಸುಮಾರು 1 ಲಕ್ಷ ರೂ. ನೀಡಿ ಸನ್ಮಾನಿಸಿ ಗೌರವಿಸಲಾಗಿದೆ.
2017ರಲ್ಲಿ ತೀವ್ರ ಬರಗಾಲದ ಹಿನ್ನಲೆ ರಾಮಚಂದ್ರಪುರ ಮಠ ಹಾಗೂ ಜಾನ್ ಫೌಂಡೇಶನ್ ವತಿಯಿಂದ ಹನೂರು ತಾಲ್ಲೂಕಿನ ಹಲವಡೆ ಗೋಶಾಲೆಗಳನ್ನು ತೆರೆದು ಜಾನುವಾರುಗಳಿಗೆ ಮೇವನ್ನು ಒದಗಿಸಲಾಗಿತ್ತು.
ಈ ಗೋಶಾಲೆಗಳನ್ನು ತೆರೆಯಲು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಗಲು ಇರಳು ಎನ್ನದೇ ಸುತ್ತಿ ಜಾನುವಾರಗಳ ಗಣತಿ ಮಾಡಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲು ಹಾಗೂ ಗೋಶಾಲೆ ತೆರೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ರೈತ ಮುಖಂಡ ಸಿದ್ದಪ್ಪರವರ ಪಾತ್ರ ಪ್ರಮುಖವಾಗಿತ್ತು.
ಈ ದಿಸೆಯಲ್ಲಿ ಶುಕ್ರವಾರದಂದು ರಾಮಚಂದ್ರಪುರ ಮಠದ ಮಂಜುನಾಥ್ ಹೆಗ್ಡೆ ಇವರ ಕಾರ್ಯವನ್ನು ಮೆಚ್ಚಿ ಸುಮಾರು ಒಂದು ಲಕ್ಷ ರೂ ಬಹುಮಾನವನ್ನಾಗಿ ನೀಡಿ ಗೌರವಿಸಿದ್ದಾರೆ.