Thursday, June 25, 2026
Google search engine

Homeರಾಜಕೀಯಇಡಿ ದಾಳಿ ರಾಜಕೀಯ ಪ್ರೇರಿತ : ಕೇಂದ್ರದ ಕೈಗೊಂಬೆಗಳಾದ ತನಿಖಾ ಸಂಸ್ಥೆಗಳು : ಪ್ರಿಯಾಂಕ್ ಖರ್ಗೆ

ಇಡಿ ದಾಳಿ ರಾಜಕೀಯ ಪ್ರೇರಿತ : ಕೇಂದ್ರದ ಕೈಗೊಂಬೆಗಳಾದ ತನಿಖಾ ಸಂಸ್ಥೆಗಳು : ಪ್ರಿಯಾಂಕ್ ಖರ್ಗೆ

ಬೆಂಗಳೂರು :  ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿ ಹಾಗೂ ಬೆಳಗಾವಿ ವಿಭಾಗದ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್  ಅವರ ನಿವಾಸದ ಮೇಲೆ ಇಡಿ ದಾಳಿ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ,  ಇದು ರಾಜಕೀಯ ಪ್ರೇರಿತ ದಾಳಿಯಾಗಿದೆ ನಮ್ಮ ಮೇಲೂ ಮುಂದೆ ಇಡಿ, ಐಟಿ ದಾಳಿಗಳಾಗಬಹುದು ಎಂದು ತಿಳಿಸಿದ್ದಾರೆ.

ತನಿಖಾ ಸಂಸ್ಥೆಗಳು  ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿವೆ.  ನಮ್ಮನ್ನು ಸಹ ಎಷ್ಟು ದಿನ ಬಿಡುತ್ತಾರೋ ಗೊತ್ತಿಲ್ಲ. ಐಟಿ ಇಡಿ ಅಂತಲ್ಲ ನಮ್ಮ ಮೇಲೂ ಏನಾದಾರೂ ದಾಳಿ ಆಗಬಹುದು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular