ಮಂಡ್ಯ: ಬೆಂ-ಮೈ ಹೆದ್ದಾರಿ ತಡೆದು ರೈತ ಹಿತರಕ್ಷಣಾ ಸಮಿತಿ ಹೋರಾಟ ಅಖಿಲ ಭಾರತ ಕ್ರೈಸ್ತ ಮಹಾಸಭಾ ಅಧ್ಯಕ್ಷ ಹೊಯ್ಸಳ ರಾಜ್ ನೇತೃತ್ವದಲ್ಲಿ ಪ್ರತಿಭಟನೆ ನೆಡೆಸಿದರು.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರಸ್ತೆ ತಡೆದು ಆಕ್ರೋಶ. ಅಖಿಲ ಭಾರತ ಕ್ರೈಸ್ತ ಮಹಾಸಭಾ ಅಧ್ಯಕ್ಷ ಹೊಯ್ಸಳರಾಜ್ ನೇತೃತ್ವದಲ್ಲಿ ಬೆಂಬಲ. ಕಾವೇರಿ ನೀರು ನಿಯಂತ್ರಣ ಸಮಿತಿ ವಿರುದ್ದ ಘೋಷಣೆ ಕೂಗಿ ಆಕ್ರೋಶ. ನೀರು ಬಿಡದಂತ ನಿರ್ಧಾರವನ್ನ ಕೈಗೊಳ್ಳಲು ಒತ್ತಾಯ. ಶಾಸಕರು, ಕೃಷಿ ಸಚಿವ, ಸಂಸದರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಎಲ್ಲಾ ಜನಪ್ರತಿನಿಧಿಗಳು, ಸಂಸದರು ಧ್ವನಿ ಎತ್ತುವಂತೆ ಆಗ್ರಹಿಸಿ ಸುಪ್ರೀಂ ಕೋರ್ಟ್ ತೀರ್ಪಿನದವರೆಗೂ ನಮ್ಮ ಹೋರಾಟ ಎಂದು ಎಚ್ಚರಿಕೆ ನೀಡಿದರು.