Wednesday, May 21, 2025
Google search engine

Homeಸ್ಥಳೀಯಮೈಸೂರು: ಹುಲಿ ದಾಳಿ- ರೈತನಿಗೆ ಗಂಭೀರ ಗಾಯ

ಮೈಸೂರು: ಹುಲಿ ದಾಳಿ- ರೈತನಿಗೆ ಗಂಭೀರ ಗಾಯ

ಮೈಸೂರು:  ಹುಲಿ ದಾಳಿಯಿಂದಾಗಿ ದನಗಾಹಿ ರೈತ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಮುದ್ದನಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ರಮೇಶ್ (40) ಹುಲಿ ದಾಳಿಗೊಳಗಾದ ವ್ಯಕ್ತಿ.

ನಾಗರಹೊಳೆ ವನ್ಯಜೀವಿ ವಿಭಾಗದ ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮದ ಕಾಡಂಚಿನಲ್ಲಿ ದನ ಮೇಯಿಸಲು ಹೋಗಿದ್ದಾಗ ಹಸುವಿನ ಮೇಲೆ ಹುಲಿ ದಾಳಿ ಮಾಡುತ್ತಿರುವುದನ್ನು ಕಂಡ ರೈತ ರಕ್ಷಿಸಲು ಹೋಗಿದ್ದು,  ಈ ವೇಳೆ ಹುಲಿ ರೈತನ ಮೇಲೆ ದಾಳಿ ಮಾಡಿದೆ.

ಗಾಯಾಳು ರಮೇಶ್ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಸದ್ಯ ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular