Tuesday, June 17, 2025
Google search engine

Homeಸ್ಥಳೀಯವಿದ್ಯುತ್ ದುಷ್ಟಪರಿಣಾಮ ಕುರಿತು ಬೀದಿ ನಾಟಕ , ಸಾಕ್ಷ್ಯಚಿತ್ರಗಳ ಅರಿವು ಕಾರ್ಯಕ್ರಮ

ವಿದ್ಯುತ್ ದುಷ್ಟಪರಿಣಾಮ ಕುರಿತು ಬೀದಿ ನಾಟಕ , ಸಾಕ್ಷ್ಯಚಿತ್ರಗಳ ಅರಿವು ಕಾರ್ಯಕ್ರಮ

ಮೈಸೂರು: ನಿರಂತರ, ಬದಲಾವಣೆಗಳಿಗೆ ಹೊಂದಿಕೊಳ್ಳುವುದರೊಂದಿಗೆ, ಪರಂಪರೆಯ ಸೊಗಡನ್ನೂ ಮರೆಯದೆ, ಪ್ರಚಲಿತ ಸನ್ನಿವೇಶಗಳಲ್ಲಿ ರಂಗಭೂಮಿಯನ್ನು ಮಾಧ್ಯಮವಾಗಿಸಿಕೊಂಡು ಮುಖಾಮುಖಿಯಾಗುತ್ತಿದೆ. ಮನುಷ್ಯನಿರುವಿಕೆಯ ಅನೇಕ ರಂಗಗಳು ಆಗಾಗ ಜಡತ್ವದ ಮೋರೆ ಹೋಗುವ ಸಂದರ್ಭಗಳು ಎದುರಾಗುತ್ತಿವೆ. ಈ ಜಡತ್ವದ ನಿವಾರಣೆಗೆ, ಅದರೊಂದಿಗೆ ಸದಾಒಡನಾಟದಲ್ಲಿರುವ ಮನುಷ್ಯನನ್ನು ಸಂವೇದನೀಯಗೊಳಿಸಬೇಕು. ಈ ಕೆಲಸ ರಂಗಭೂಮಿಯಿಂದ ಬಹುಪಾಲು ಸಾಧ್ಯ. ಆದ್ದರಿಂದ ಈ ಕಾರ್ಯಕ್ಕೋಸ್ಕ ರರಂಗಭೂಮಿಯನ್ನು ನಿರಂತರವಾಗಿ ಬಳಸಿಕೊಳ್ಳುತ್ತಿದೆ. ಈ ಕಳೆದ ಇಪ್ಪತ್ತೈದು ವರ್ಷಗಳಿಂದ ಹಲವು ಯಶಸ್ವಿ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಹೀಗೆ ಸ್ಪಷ್ಟವಾದ ಈ ಮಾದರಿ ಚಾಮಲಾಪುರ ಉದ್ದೇಶ ವಿದ್ಯುತ್ ಸ್ಥಾವರ ಯೋಜನೆಯ ದುಷ್ಟಪರಿಣಾಮಗಳ ಕುರಿತು ಬೀದಿ ನಾಟಕ ಹಾಗೂ ಸಾಕ್ಷ್ಯಚಿತ್ರಗಳ ಮೂಲಕ ಜನರಲ್ಲಿ ಅರಿವು ಮೂಡಿಸಿದೆ. ಬಾಗಲಕೋಟೆಜಿಲ್ಲೆಯಲ್ಲಿ ನಡೆದಕರ್ನಾಟಕದ ಮೊತ್ತ ಮೊದಲ ಮಳೆ ನೀರು ಸಂಗ್ರಹಣೆಕುರಿತಾದಜಲಜಾಥ ಹಾಗೂ ಕರ್ನಾಟಕಾದ್ಯಂತ ಬಸವಣ್ಣನವರ ವಚನಗಳನ್ನಾಧರಿಸಿದ ಕೂಡಲಸಂಗಮದೃಶ್ಯರೂಪಕದ ೧೬೦ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಲಾಗಿದೆ.

ಪ್ರತಿವ ನಿರಂತರರಂಗಉತ್ಸವವನ್ನು ಹಮ್ಮಿಕೊಂಡು ಬರುತ್ತಿದೆ. ಜನಪದ ಮಹಾಕಾವ್ಯಜುಂಜಪ್ಪ ವಾಚನಾಭಿನಯ, ಡಾ. ಚಂದ್ರಶೇಖರಕಂಬಾರ “ಶಿವರಾತ್ರಿ” ನಾಟಕವನ್ನು ಮುಂಬೈನ ಮೈಸೂರು ಅಸೋಸಿಯೇಶನ್, ಭೂಪಾಲದ “ಭಾರತರಂಗ ಮಂಡಲ” ಹಾಗೂ ದೆಹಲಿಯಲ್ಲಿರಾಷ್ಟ್ರೀಯ ನಾಟಕ ಶಾಲೆ ನಡೆಸುತ್ತಿದ್ದ “೧೫ನೇ ಭಾರತರಂಗ ಮಹೋತ್ಸವ”ದಲ್ಲಿ ಹಾಗೂ ೨೧೫ರ ಸಂಗೀತ ನಾಟಕ ಅಕಾಡೆಮಿಯಉತ್ಸವದ ಪ್ರದರ್ಶನವನ್ನು ನೀಡಿದೆ. ಟಿ.ಕೆ.ದಯಾನಂದ್ ಪುಸ್ತಕ ಆಧಾರಿತ “ರಸ್ತೆ ನಕ್ಷತ್ರ”ವನ್ನು ರಂಗಾಯಣ ನಡೆಸಿದ್ದ “ಬಹುರೂಪಿ ಬಹುಭಾ” ಅಂತರಾಷ್ಟ್ರೀಯರಂಗೋತ್ಸವ ೨೦೧೭” ರಲ್ಲಿ ಪ್ರರ್ದಶನ ನೀಡಿದೆ.

ಜಯರಾಮರಾಯಪುರರಚನೆಯ ನಾಟಕ ‘ವಾರಸುದಾರ’ವನ್ನು ನಿರಂತರದ ಪ್ರಸಾದ್‌ಕುಂದೂರುರವರ ನಿರ್ದೇಶನದಲ್ಲಿ ಅಭಿನಯಿಸಲಾಯಿತು, ವರಕವಿ ದ. ರಾ ಬೇಂದ್ರೆಯವರ ‘ಸಾಯೋ ಆಟ’ ನಾಟಕವನ್ನು ನಿರಂತರದ ಹಿರಿಯ ಗೆಳೆಯರೇ ನಿರ್ದೇಶಿಸಿ ಹಲವು ಕಾಲೇಜಿನಲ್ಲಿ ಅಭಿನಯಿಸಿದರು, ನಿರಂತರ ಫೌಂಡೇಶನ್‌ಗೊರೂರುರಾಮಸ್ವಾಮಿಅಯ್ಯಂಗಾರ್ ಅವರ ಮನಮೋಹಕ ಉಪಾಖ್ಯಾನಗಳನ್ನು ಆಧರಿಸಿ ಹೊಸ ನಾಟಕವನ್ನು ರಚಿಸಿದ್ದಾರೆ, ಇದು ಕನ್ನಡ ಸಾಹಿತ್ಯದ ಹೆಚ್ಚಿನ ಉತ್ಸಾಹಿಗಳಿಗೆ ನಿಸ್ಸಂದೇಹವಾಗಿಅನುರಣಿಸುತ್ತದೆ. ನಾಟಕವುಗೊರೂರಿನ ಮೋದಿಮಾಡುವಜಗತ್ತನ್ನು ಪರಿಶೀಲಿಸುತ್ತದೆ, ಪ್ರತಿವಕಾಲೇಜು ವಿದ್ಯಾರ್ಥಿಗಳಿಗೆ ಸಹಜರಂಗತರಬೇತಿ ಶಿಬಿರವನ್ನು ನಡೆಸಿಕೊಂಡು ಬರುತ್ತಿದೆ. ನಿರಂತರರಂಗತಂಡವು ೪೦ಕ್ಕೂ ಹೆಚ್ಚು ನಾಟಕಗಳನ್ನು ನಿರ್ಮಿಸಿದೆ, ಸಾವಿರಾರು ರಂಗತರಬೇತಿ ನೀಡಿದೆ ಮತ್ತು ರಂಗಭೂಮಿಯನ್ನುಜನರಿಗೆ ತಿಳಿಸಲು ಅಸಂಖ್ಯಾತ ಸಂಕೀರ್ಣಗಳು, ಕಾರ್ಯಾಗಾರಗಳು ಮತ್ತು ಶಿಬಿರಗಳನ್ನು ನಡೆಸುತ್ತಿದೆ.

ನಿರಂತರರಂಗ ಉತ್ಸವ – ೨೦೨೩-೨೪: ಎಂ.ಎಸ್.ಐ.ಎಲ್ ಬೆಂಗಳೂರು ಇವರ ಸಹಪ್ರಾಯೋಜಕತ್ವದ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಮತ್ತು ಸಂಸ್ಕೃತಿ ಸಂಸ್ಥೆ ಇತ್ತೀಚೆಗೆ ಇವರ ಆಶ್ರಯದಲ್ಲಿ, ನಿರಂತರ ಫೌಂಡೇಶನ್ ಮೈಸೂರು ನಡೆಯುತ್ತಿರುವ ನಿರಂತರ ರಂಗಉತ್ಸವ – ೨೦೨೩ ೨೦೨೩ರ ಡಿಸೆಂಬರ್ ೨೧ರಿಂದ೨೫ರವರಗೆ, ಸ್ಥಳ : ಕಿರು ರಂಗ ಮಂದಿರ ಕಲಾಮಂದಿರದ ಆವರಣ ಮೈಸೂರು.

RELATED ARTICLES
- Advertisment -
Google search engine

Most Popular