ಮದ್ದೂರು: ಪಟ್ಟಣದ ಶಿವಪುರದ ಪೂರ್ಣಪ್ರಜ್ಞ ಶಾಲೆಯ ಆವರಣದಲ್ಲಿ ನೂತನ ವರ್ಷದ ಸ್ವಾಗತಕ್ಕೆ ವಿದ್ಯಾರ್ಥಿಗಳೇ ಬಗೆಬಗೆಯ ತಿಂಡಿ ತಿನಿಸುಗಳನ್ನ ಮಾಡಿ ತಂದು ಪ್ರದರ್ಶಿಸುವುದರ ಜೊತೆಗೆ ಶಾಲೆಯ ಆವರಣವನ್ನು ಆಹಾರದ ಸಂತೆಯಂತೆ ಬಿಂಬಿಸಲಾಗಿತ್ತು.
ಇದೇ ಸಂದರ್ಭದಲ್ಲಿ ನೂತನ ವರ್ಷದ ದಿನದರ್ಶಿಕೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಾಳಿರಯ್ಯ ಬಿಡುಗಡೆಗೊಳಿಸಿ ಮಾತನಾಡಿದರು.

ಪೂರ್ಣಪ್ರಜ್ಞಶಾಲಿಯ ಅಧ್ಯಕ್ಷರಾದ ಕಸ್ತೂರಿ ಅನಂತಗೌಡ ಹಾಗೂ ಮುಖ್ಯ ಶಿಕ್ಷಕರದ ಅನಂತಗೌಡರ ವಿಭಿನ್ನ ಪರಿಕಲ್ಪನೆಯಿಂದ ಈ ರೀತಿಯಾದಂತಹ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಿ ಮಾಡಿಕೊಂಡು ಬರುತ್ತಿರುವುದು ಸಂತಸದ ವಿಷಯ ಎಂದು ತಿಳಿಸಿದರು.
ಆಹಾರ ಮೇಳ ಕಾರ್ಯಕ್ರಮಕ್ಕೆ ಪುರಸಭಾ ಮಾಜಿ ಅಧ್ಯಕ್ಷರಾದ ಸೌಭಾಗ್ಯ ಮಹಾದೇವ ಚಾಲನೆ ನೀಡಿದರು.
ದಿನನಿತ್ಯದ ನಮ್ಮ ಜೀವನದಲ್ಲಿ ಬಳಸುವ ಹಲವು ಆಹಾರ ಪದಾರ್ಥಗಳನ್ನು ಸಿಹಿ ತಿಂಡಿಗಳನ್ನ ವಿದ್ಯಾರ್ಥಿಗಳು ತಯಾರಿಸಿಕೊಂಡು ಬಂದು ಪ್ರದರ್ಶಿಸಿದರು.

ಇದೇ ಸಂದರ್ಭದಲ್ಲಿ ಪೂರ್ಣಪ್ರಜ್ಞಾ ಶಾಲೆಯ ವಿದ್ಯಾರ್ಥಿನಿ ಸಹನಾ ಕನ್ನಡ ಭಾಷಣ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವ ಹಿನ್ನೆಲೆ ಗಣ್ಯರು ಅಭಿನಂದಿಸಿದರು.
ಈ ವೇಳೆ ನಿವೃತ್ತ ಪ್ರಾಂಶುಪಾಲರಾದ ಕೃಷ್ಣೇಗೌಡ, ಸೇರಿದಂತೆ ಸಾಲ ಶಿಕ್ಷಕರು ಹಾಜರಿದ್ದರು.