ಹೊಸದಿಲ್ಲಿ: ಮೆಟ್ರೋ ರೈಲು ನಿಲ್ದಾಣದ ಆವರಣ ಗೋಡೆ ಕುಸಿದು ಒಬ್ಬ ಮೃತ್ಯು ೫೩ ವರ್ಷ ವಯಸ್ಸಿನ ವ್ಯಕ್ತಿ ಮೃತಪಟ್ಟು ನಾಲ್ವರಿಗೆ ಗಾಯಗೊಂಡಿರುವ ಬಗ್ಗೆ ಇಂದು ವರದಿಯಾಗಿದೆ.
ಘಟನೆ ಹಿನ್ನೆಲೆಯಲ್ಲಿ ಮೆಟ್ರೊ ವ್ಯವಸ್ಥಾಪಕರು ಹಾಗೂ ಕಿರಿಯ ಇಂಜಿನಿಯರ್ ಒಬ್ಬರನ್ನು ಅಮಾನತು ಮಾಡಲಾಗಿದ್ದು, ತನಿಖೆ ಆರಂಭಿಸಲಾಗಿದೆ. ತುರಾತುರಿಯ ಕ್ರಮ ಹಾಗೂ ನಿರ್ಲಕ್ಷ್ಯದ ಕಾರಣದಿಂದ ಉಂಟಾದ ಸಾವಿನ ಪ್ರಕರಣವನ್ನು ಮೆಟ್ರೋ ಗುತ್ತಿಗೆದಾರರ ವಿರುದ್ಧ ಪೊಲೀಸರು ದಾಖಲಿಸಿದ್ದಾರೆ. ಮೃತ ವಿನೋದ್ ಕುಮಾರ್ ಪಾಂಡೆಯವರು ಕಾರವಲ್ ನಗರ ನಿವಾಸಿಯಾಗಿದ್ದು, ಮೂಲತಃ ಉತ್ತರಪ್ರದೇಶದ ಸುಲ್ತಾನಪುರದವರು. ಅಕ್ಕಿ ಪೂರೈಕೆದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.