ವರದಿ: ಶಂಶೀರ್ ಬುಡೋಳಿ, ಮಂಗಳೂರು
ಮಂಗಳೂರು(ದಕ್ಷಿಣ ಕನ್ನಡ): ಸೈಕಲ್ ನಲ್ಲಿ ಸವಾರಿ ಮಾಡೋದೇ ಬೇರೆ. ಆದ್ರೆ ಸಿಂಗಲ್ ಟೈರ್ ನಲ್ಲಿ ಸೈಕಲ್ ಸವಾರಿ ಮಾಡೋದೇ ಬೇರೆ. ಇಲ್ಲೊಬ್ಬ ಯುವಕ ಸೈಕಲ್ ನ ಒಂದೇ ಟೈರ್ ನಲ್ಲಿ ಕಾಶ್ಮೀರಕ್ಕೆ ಪಯಣ ಬೆಳೆಸಿದ್ದಾರೆ. ಇದ್ರ ಹಿಂದಿನ ಉದ್ದೇಶ ಏನು.? ಎಂದು ತಿಳಿಯಲು ಈ ಸುದ್ದಿ ಓದಿ..
ಎರಡು ಚಕ್ರದ ಸೈಕಲ್ ಸವಾರಿಯೇ ಮಾಡೋದೇ ಕಷ್ಟ. ಅಂಥದ್ರಲ್ಲಿ ಒಂದು ಚಕ್ರದ ಸೈಕಲ್ ಮೂಲಕ ಕನ್ಯಾಕುಮಾರಿ ಯಿಂದ ಕಾಶ್ಮೀರ ಕಣಿವೆಯಲ್ಲಿ ಪ್ರಯಾಣ ಅಂದ್ರೆ ನಂಬಲಸಾಧ್ಯ. ಹೌದು. ಕೇರಳ ಮೂಲದ ಸನೀದ್ ಮತ್ತು ಅವರ ಸ್ನೇಹಿತರ ತಂಡವು ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಭಿನ್ನ ಪ್ರಯತ್ನವೊಂದಕ್ಕೆ ಮುಂದಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದ ಲೇಹ್ ಲಡಕ್ ಗೆ ಒಂದು ಚಕ್ರದ ಸೈಕಲ್ ಮೂಲಕ ಪ್ರಯಾಣ ಬೆಳೆಸಲು ಮುಂದಾಗಿದ್ದಾರೆ. ಈಗಾಗಲೇ ಕೇರಳದ ಕಾಸರಗೋಡಿನಿಂದ ಕನ್ಯಾಕುಮಾರಿಗೆ ಪ್ರಯಾಣಿಸಿ ಕನ್ಯಾಕುಮಾರಿಯಿಂದ ಮಂಗಳೂರಿಗೆ ಬಂದು ತಲುಪಿದ್ದಾರೆ.

ನಿತ್ಯ ನಿರಂತರವಾಗಿ ನೋಡ್ತಾ ಇರುವಂತೆ ದೇಶಾದ್ಯಂತ ಮಾದಕ ವ್ಯಸನ ಡ್ರಗ್ಸ್ ಗಾಂಜಾ ಇತರ ಅಫೀಮು ಪದಾರ್ಥಗಳಿಗೆ ಯುವ ಜನತೆ ಹೆಚ್ಚಾಗಿ ಬಲಿಯಾಗುತ್ತಿದೆ. ಇದ್ರ ವಿರುದ್ಧ ತನ್ನಿಂದಾದ ಕೊಡುಗೆ ನೀಡಬೇಕೆಂದು ತನಗೆ ತಿಳಿಸಿರುವ ಕಲೆ ಫ್ರಂಟ್ ವೀಲ್ ಸೈಕ್ಲಿಂಗ್ ಈ ಮೂಲಕ ಪ್ರಯಾಣ ಮಾಡಿ ಜನ್ರಿಗೆ ವಿಭಿನ್ನವಾಗಿ ಜಾಗೃತಿ ಮೂಡಿಸಬೇಕೆಂದು ಕನಸು ಕಂಡಿದ್ದಾರೆ. ಅದ್ರಂತೆ ಈಗಾಗಲೇ ತಮ್ಮ ಸೈಕಲ್ ಮೂಲಕ ಮೂವರು ಸ್ನೇಹಿತರು ಸೇರಿ ಎರಡು ತಿಂಗಳ ಅವಧಿಯಲ್ಲಿ ೨ ಸಾವಿರ ಕಿ.ಮಿ ಪ್ರಯಾಣ ಬೆಳೆಸಿ ಮಂಗಳೂರು ತಲುಪಿದ್ದು ಕರ್ನಾಟಕದಲ್ಲಿ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಲಭ್ಯವಾಗಿದೆ ಅಂತಾರೆ ಸಾನಿಧ್.
ಇನ್ನೂ ಮಂಗಳೂರಿಗೆ ಆಗಮಿಸಿದ ಈ ಮೂರು ಯುವಕರ ತಂಡದೊಂದಿಗೆ ಜರ್ಮನಿಯಿಂದ ಹದಿನೈದು ದೇಶ ಮಣ್ಣು ರಕ್ಷಿಸಿ ಎಂಬ ಘೋಷದೊಂದಿಗೆ ಭಾರತಕ್ಕೆ ಬಂದ ಯುವಕ ಜೊತೆಯಾಗಿದ್ದಾರೆ. ಈ ತಂಡಕ್ಕೆ ಮಂಗಳೂರಿನ ಎಂಎಸ್ ಸ್ಪೋರ್ಟ್ಸ್ ವೇರ್, ಹೋಪ್ ಫೌಂಡೇಶನ್, ಒಲಿಂಪಿಕ್ ಸ್ಪೋರ್ಟ್ಸ್,ಎಂ ಎಸ್ ಸ್ಪೋರ್ಟ್ಸ್ ಹೀಗೆ ಜಿಲ್ಲೆಯ ಹತ್ತು ಹಲವು ಸಂಘ ಸಂಸ್ಥೆಗಳು ಅದ್ದೂರಿಯಾಗಿ ಸ್ವಾಗತಿಸಿ ಪ್ರೋತ್ಸಾಹ ನೀಡಿದ್ದಾರೆ.
ಒಟ್ಟಿನಲ್ಲಿ ಮಾಧಕ ವ್ಯಸನದ ವಿರುದ್ಧ ಜಾಗೃತಿಗಾಗಿ ಸಾನಿಧ್ ಮತ್ತವರ ಸ್ನೇಹಿತರು ಕೈಗೊಂಡ ಫ್ರಂಟ್ ವೀಲ್ ಸೈಕ್ಲಿಂಗ್ ಯಾತ್ರೆ ಯಶಸ್ವಿಯಾಗಲಿ.