Wednesday, June 25, 2025
Google search engine

Homeರಾಜ್ಯಸುದ್ದಿಜಾಲಮದ್ದೂರು ಕೆನರಾ ಬ್ಯಾಂಕ್ ಮಾಂಬಳ್ಳಿಗೆ ವಿಲೀನ ಸಾರ್ವಜನಿಕರ ಪ್ರತಿಭಟನೆ

ಮದ್ದೂರು ಕೆನರಾ ಬ್ಯಾಂಕ್ ಮಾಂಬಳ್ಳಿಗೆ ವಿಲೀನ ಸಾರ್ವಜನಿಕರ ಪ್ರತಿಭಟನೆ

ಯಳಂದೂರು: ತಾಲೂಕಿನ ಮದ್ದೂರು ಗ್ರಾಮದಲ್ಲಿ ಕಳೆದ ೧೨ ವರ್ಷಗಳಿಂದಲೂ ಕಾರ್ಯ ನಿರ್ವಹಿಸುತ್ತಿದ್ದ ಕೆನರಾ ಬ್ಯಾಂಕ್ ಶಾಖೆಯನ್ನು ಮಾಂಬಳ್ಳಿ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್‌ಗೆ ವಿಲೀನಗೊಳಿಸುತ್ತಿರುವ ಕ್ರಮವನ್ನು ಖಂಡಿಸಿ ಗ್ರಾಮಸ್ಥರು ಶನಿವಾರ ಬ್ಯಾಂಕಿನ ಬಳಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು.

ಈ ಬ್ಯಾಂಕ್ ಕಳೆದ ೧೨ ವರ್ಷಗಳ ಹಿಂದೆ ನಮ್ಮ ಗ್ರಾಮದಲ್ಲಿ ಶಾಖೆಯನ್ನು ತೆರೆದಿತ್ತು. ಈ ಗ್ರಾಮವೂ ಸೇರಿದಂತೆ ಇದರ ಸುತ್ತಮುತ್ತಲಿನ ಆಲ್ಕೆರೆ ಅಗ್ರಹಾರ, ಬೂದಿತಿಟ್ಟು, ಯರಿಯೂರು ಸೇರಿದಂತೆ ಅನೇಕ ಗ್ರಾಮಗಳ ಜನರಿಗೆ ಇದರಿಂದ ಅನುಕೂಲವಾಗುತ್ತಿತ್ತು. ಇಲ್ಲಿ ೨೦೦೦ ಕ್ಕೂ ಅಧಿಕ ಜನರು ತಮ್ಮ ಖಾತೆಗಳನ್ನು ತೆರೆದಿದ್ದರು. ಸಾಮಾಜಿಕ ಪಿಂಚಣಿ ಯೋಜನೆಗಳ ಲಾಭವನ್ನು ಅನೇಕರು ಪಡೆದುಕೊಳ್ಳುತ್ತಿದ್ದರು. ವಯಸ್ಸಾದವರು, ವಿಕಲಚೇತರಿಗೆ ಇದರಿಂದ ಹೆಚ್ಚಿನ ಅನುಕೂಲವಾಗುತ್ತಿತ್ತು. ಆದರೆ ಈಗ ಏಕಾಏಕಿ ಬ್ಯಾಂಕಿನ ಶಾಖೆಯನ್ನು ಮಾಂಬಳ್ಳಿ ಗ್ರಾಮಕ್ಕೆ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಬ್ಯಾಂಕಿನ ಅಧಿಕಾರಿಗಳು ನಡೆಸುತ್ತಿದ್ದಾರೆ. ಈ ಗ್ರಾಮದಿಂದ ಹಲವು ಕಿ.ಮಿ. ದೂರದಲ್ಲಿರುವ ಮಾಂಬಳ್ಳಿ ಗ್ರಾಮಕ್ಕೆ ತೆರಳಲು ಕಷ್ಟವಾಗುತ್ತದೆ ಹಾಗಾಗಿ ಇದನ್ನು ಇಲ್ಲೇ ಉಳಿಸಿಕೊಳ್ಳಬೇಕು ಎಂದು ಪ್ರತಿಭಟಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ಪ್ರದ್ಯುಗ್ನ ಗ್ರಾಮಸ್ಥರ ಮನವಿಯನ್ನು ಸ್ವೀಕರಿಸಿ ಮಾತನಾಡಿ, ಬ್ಯಾಂಕಿನ ನಿಯಮಗಳಿಗೆ ಅನುಸಾರವಾಗಿ ಪ್ರತಿ ೩ ಕಿ.ಮಿ.ಗೆ ಒಂದರಂತೆ ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್ ಇರಬೇಕೆಂಬ ನಿಯಮವಿದೆ. ಆದರೆ ಈಗಾಗಲೇ ಯರಿಯೂರು ಗ್ರಾಮದಲ್ಲಿ ಬ್ಯಾಂಕ್ ಇರುವುದರಿಂದ ಇದನ್ನು ಮಾಂಬಳ್ಳಿಗೆ ಬ್ಯಾಂಕ್ ವಿಲೀನಗೊಳಿಸಬೇಕೆಂದು ನಮ್ಮ ಉನ್ನತ ಮಟ್ಟದ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಆದರೆ ಈಗ ಗ್ರಾಮಸ್ಥರು ಇದು ವಿಲೀನ ಮಾಡುವುದು ಬೇಡ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತಂದು ಸೂಕ್ತ ಕ್ರಮ ವಹಿಸುವಂತೆ ಮನವಿ ಮಾಡಲಾಗುವುದು ಎಂದರು.

ಮದ್ದೂರು ವಿರೂಪಾಕ್ಷ, ಶ್ರೀಕಂಠ, ಬೂದಿತಿಟ್ಟು ಜಗದೀಶ್, ಮಲ್ಲಿಗೆಹಳ್ಳಿ ಸುರೇಶ್, ಮಹಾದೇವ್, ಯೋಗೇಶ್, ನಟರಾಜು ಸೇರಿದಂತೆ ಅನೇಕ ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು. ೩೦ವೈಎಲ್‌ಡಿ ಚಿತ್ರ೦೧ ಯಳಂದೂರು ತಾಲೂಕಿನ ಮದ್ದೂರು ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯನ್ನು ಮಾಂಬಳ್ಳಿ ಗ್ರಾಮದ ಬ್ಯಾಂಕಿಗೆ ವಿಲೀನಗೊಳಿಸುತ್ತಿರುವ ಕ್ರಮವನ್ನು ಖಂಡಿಸಿ ಶನಿವಾರ ಗ್ರಾಮಸ್ಥರು ಪ್ರತಿಭಟನೆಯನ್ನು ನಡೆಸಿದರು.

RELATED ARTICLES
- Advertisment -
Google search engine

Most Popular