ಮಂಗಳೂರು ದಕ್ಷಿಣ ಕನ್ನಡ: ಮಂಗಳೂರು ನಗರದ ಹೊರವಲಯದ ಕೊಣಾಜೆ ಮುಡಿಪು ಜಂಕ್ಷನ್ನಲ್ಲಿ ಶುಕ್ರವಾರ ಸಂಜೆ ರಿಕ್ಷಾ ಚಾಲಕರ ಆಟೋ ರಾಜಕನ್ಮಾರ್ ದ.ಕ ಜಿಲ್ಲೆ ಆಯೋಜಿಸಿದ ಸೌಹಾರ್ದ ಇಫ್ತಾರ್ ಸಂಗಮದಲ್ಲಿ ಎಲ್ಲಾ ಧರ್ಮದ ನೂರಕ್ಕೂ ಅಧಿಕ ಮಂದಿ ಭಾಗವಹಿಸಿ ಸಹಭೋಜನ ನಡೆಸಿದರು.
ಇದೀಗ ಡಬಲ್ ರೋಡ್ ಆಗಿರೋ ಇಲ್ಲಿನ ಒಂದು ರೋಡನ್ನು ಬ್ಲಾಕ್ ಮಾಡಿ ರಸ್ತೆಯಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗ್ತಿದೆ. ಇದು ರಾಷ್ಟ್ರೀಯ ಹೆದ್ದಾರಿ ಅಲ್ಲ. ಇದು ಮಂಗಳೂರು ಕೊಣಾಜೆ ಯುನಿವರ್ಸಿಟಿಗೆ ಹೋಗುವ ಮೂಲಕ ಮಂಗಳೂರು ನಗರಕ್ಕೆ ಹೋಗೋ ದಾರಿ. ಇದು ಡಬಲ್ ರೋಡ್ ಆಗಿದ್ದು ಪ್ರತಿವರ್ಷ ಇಲ್ಲಿ ಇಫ್ತಾರ್ ಮಾತ್ರವಲ್ಲ, ಬೇರೆ ಬೇರೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡಾ ನಡೆಯುತ್ತದೆ.
ಅನುಮತಿ ಪಡೆದು ಸೌಹಾರ್ದಯತವಾಗಿ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮೀಯರು ಭಾಗವಹಿಸಿದ್ದರು. ಮುಡಿಪುವಿನಲ್ಲಿ ಎಲ್ಲಾ ಧರ್ಮೀಯರು ಸೇರಿಕೊಂಡು ಆಚರಿಸಿದ ದೊಡ್ಡ ಕಾರ್ಯಕ್ರಮ ಇದಾಗಿದೆ.