ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ರಾಜಕೀಯ ಅಖಾಡ ರಂಗೇರಿದ್ದು, ಇಂದು ಮಂಡ್ಯದ ಕಾಳಿಕಾಂಬ ಸಮುದಾಯ ಭವನದಲ್ಲಿ ಬೆಂಬಲಿಗರ ಸಭೆ ನಡೆಸಿ ಸಂಸದೆ ಸುಮಲತಾ ರಾಜಕೀಯ ನಿರ್ಧಾರ ಪ್ರಕಟಿಸಲಿದ್ದಾರೆ.
ಪಕ್ಷೇತರ ಸ್ಪರ್ಧೆಯೋ ಇಲ್ಲ. ಮೈತ್ರಿ ಬೆಂಬಲವೋ ಇಲ್ಲ ತಟಸ್ಥ ನೀತಿಯೋ ಇಂದು ಪ್ರಕಟ ಮಾಡಲಿದ್ದಾರೆ. ಇಂದಿನ ಸುಮಲತಾ ನಿರ್ಧಾರದಿಂದ ಜಿಲ್ಲೆಯ ರಾಜಕೀಯ ಲೆಕ್ಕಾಚಾರ ಅದಲು ಬದಲಾಗಲಿದೆ.
ಇಂದಿನ ಸಭೆಯಲ್ಲಿ ನಟ ದರ್ಶನ್, ಪುತ್ರ ಅಭಿಷೇಕ್, ಸೇರಿ ಬೆಂಬಲಿಗರು ಭಾಗಿಯಾಗಲಿದ್ದಾರೆ. ಮೈತ್ರಿ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಅವರು ಈಗಾಗಲೇ ಸಂಸದೆ ಸುಮಲತಾ ಬೆಂಬಲ ಕೋರಿದ್ದಾರೆ.
ಹೆಚ್ ಡಿಕೆ ಮಣಿಸಲು ಸಂಸದೆ ಸುಮಲತಾರನ್ನು ಪಕ್ಷೇತರವಾಗಿ ಸ್ಪರ್ಧೆಗೆ ಇಳಿಯುವಂತೆ ಜಿಲ್ಲೆಯ ಕೈ ನಾಯಕರು ಒತ್ತಡ ಹಾಕುತ್ತಿದ್ದಾರೆ.
ಮಂಡ್ಯದ ಚಾಮುಂಡೇಶ್ವರಿ ನಗರದ ಮನೆಗೆ ಸುಮಲತಾ ಆಗಮಿಸಿದ್ದು, ಕೆಲಕಾಲ ವಿಶ್ರಾಂತಿ ಪಡೆದು ಸಭೆ ಕಾಳಿಕಾಂಭ ದೇವಾಲಯದತ್ತ ಸುಮಲತಾ ಹೊರಟಿದ್ದಾರೆ. ಈ ವೇಳೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಲು ಸುಮಲತಾ ನಿರಾಕರಿಸಿದ್ದು, ನನ್ನ ನಿರ್ಧಾರವನ್ನ ಸಭೆಯಲ್ಲೇ ಹೇಳ್ತೀನಿ. ನೀವು ಎಷ್ಟೇ ಒತ್ತಡ ಹಾಕಿದ್ರು, ಪ್ರಶ್ನೆ ಮಾಡಿದ್ರೂ ನಾನು ಈಗ ಏನೂ ಹೇಳಲ್ಲ ಎಂದು ಮಂಡ್ಯದ ನಿವಾಸದ ಬಳಿ ಸುಮಲತಾ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
ಸುಮಲತಾ ಮನೆಗೆ ಒಂದೇ ಕಾರಿನಲ್ಲಿ ಒಟ್ಟಿಗೆ ಪುತ್ರ ಅಭಿಷೇಕ್ ಅಂಬರೀಶ್, ನಟ ದರ್ಶನ್ ಆಗಮಿಸಿದ್ದಾರೆ.