ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಪವಿತ್ರ ರಂಜಾನ್ ಹಬ್ಬ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಯನ್ನು ಮಾಡುವಂತಹ ಸ್ಥಳ ಈದ್ಗಾ ಮೈದಾನದಲ್ಲಿ ಬೆಳದು ನಿಂತಿರುವ ಕಸ, ಕಡ್ಡಿ ಹಾಗೂ ಇನ್ನಿತರ ತ್ಯಾಜ್ಯಗಳನ್ನು ವಸ್ತುಗಳನ್ನು ಸಾಮೂಹಿಕ ಪ್ರಾರ್ಥನೆಗೆ ಬರುವಂತಹ ಮುಸ್ಲಿಂ ಬಾಂದವರಿಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಸ್ಚಚ್ಚ ಮಾಡಲಾಗುತ್ತಿದೆ ಎಂದು ಪುರಸಭಾ ಸದಸ್ಯ ಜಾವೀದ್ ಪಾಷ ಹೇಳಿದರು.
ಪಟ್ಟಣದ ಕಾಳೇನಹಳ್ಳಿ ರಸ್ತೆಯಲ್ಲಿರುವ ಈದ್ಗಾ ಮೈದಾನವನ್ನು ಪುರಸಭೆಯ ಸಹಯೋಗದಲ್ಲಿ ಸ್ವಚ್ಚತ ಕಾರ್ಯಕ್ಕೆ ಅದ್ಯತೆಕೊಟ್ಟು ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವು ಕೊಡ ಪವಿತ್ರ ರಂಜಾನ್ ಹಬ್ಬಕ್ಕೆ ಸಾಮೂಹಿಕ ಪ್ರಾರ್ಥನೆಯನ್ನು ಮಾಡುವ ಸಲುವಾಗಿ ಅಕ್ಕ-ಪಕ್ಕದ ಗ್ರಾಮಗಳಿಂದ ಪಟ್ಟಣದ ಈದ್ಗಾ ಮೈದಾನಕ್ಕೆ ಸಾವಿರಾರು ಮುಸ್ಲಿಂ ಬಾಂದವರು ಪ್ರಾರ್ಥನೆಗೆ ಬರುತ್ತಾರೆ ಹಾಗಾಗಿ ಬರುವಂತಹ ಎಲ್ಲಾ ಭಕ್ತರಿಗೆ ಸುಗಮ ಸಂಚಾರ, ವಾಹನಗಳಿಗೆ ನಿಲ್ಲುಗಡೆಯ ಸ್ಥಳ ಮತ್ತು ಶುದ್ಧ ಕುಡಿಯುವ ನೀರಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಜಾಮೀಯ ಮಸೀದಿಯಿಂದ ಜಮಾವಣೆಗೊಂಡು ಮೆರವಣಿಗೆಯ ಮೂಲಕ ಗರಡು ಗಂಭ ವೃತ್ತ, ಹುಣಸೂರು ರಸ್ತೆ ಹಾಗೂ ಕಾಳೇನಹಳ್ಳಿ ರಸ್ತೆ ಮಾರ್ಗವಾಗಿ ಮೆರವಣಿಗೆ ಸಾಗುತ್ತದೆ ಆದ್ದರಿಂದ ಸಂಚಾರಿಸುವ ರಸ್ತೆ ಕಿರಿದ್ದರಿಂದ ಉದ್ದಾಗಲಕ್ಕೂ ರಸ್ತೆಯ ಪಕ್ಕದಲ್ಲಿರು ಮಣ್ಣು ಗುಡ್ಡೆಗಳನ್ನು ಜೆಸಿಬಿ ಮುಖಂತಾರ ನೆಲಸಮ ಮಾಡಿ ಸುಗಮ ಸಂಚಾರಕ್ಕೆ ಅದ್ಯತೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಸಿದ್ದಿಕ್, ಪುರಸಭಾ ಅಧಿಕಾರಿಗಳಾದ ರಿಚಿvಚಿ ಸಿಂಗ್, ರಾಜೇಂದ್ರ, ಲೋಕೇಶ್ ಪೌರಕಾರ್ಮಿಕರಾದ ಶ್ರೀರಾಮ, ಕರ್ಪ, ಹೇಮಂತ್, ಲೋಕೇಶ್, ಪಾಪಾಮ್ಮ, ಕೃಷ್ಣ, ರಂಗಸ್ವಾಮಿ, ಕುಮಾರ್, ರಾಜು ಮತ್ತು ಮಹದೇವ ಸೇರಿದಂತೆ ಇನ್ನಿತರರು ಇದ್ದರು.
