ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ :ಯುಗಾದಿ ಹಬ್ಬದ ಅಂಗವಾಗಿ ಹುಣಸೂರಿನ ಜನಧ್ವನಿ ಫೌಂಡೇಶನ್ ವತಿಯಿಂದ ಕೆ.ಆರ್.ನಗರ ತಾಲೂಕಿನ ಹಂಪಾಪುರ ಗೋ ಶಾಲೆಯಲ್ಲಿ ಗೋವುಗಳಿಗೆ ಬಾಳೆ ಹಣ್ಣು ಹಾಗೂ ಬೆಲ್ಲ ಇನ್ನಿತರ ಆಹಾರ ಪದಾರ್ಥಗಳನ್ನು ಗೋವುಗಳಿಗೆ ತಿನ್ನಿಸುವ ಮೂಲಕ ವಿಶೇಷವಾಗಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಫೌಂಡೇಶನ್ ಅಧ್ಯಕ್ಷರಾದ ವಕೀಲ ಆಯರಹಳ್ಳಿ ಪ್ರವೀಣ್ ಅವರು ಗೋವುಗಳು ದೇವರ ಸ್ವರೂಪ,ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಿ ರೈತರ ಮೊಗದಲ್ಲಿ ಹರ್ಷೋದಾರ ಮೂಡಲಿ ಎಂದು ಗೋಪೂಜೆ ಮಾಡುವ ಮೂಲಕ ಯುಗಾದಿ ಹಬ್ಬವನ್ನು ಆಚರಣೆ ಮಾಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಫೌಂಡೇಶನ್ ಕಾರ್ಯದರ್ಶಿ ಕಲ್ಕುಣಿಕೆ ಭಾಸ್ಕರ್,ಗೌರವಾಧ್ಯಕ್ಷರಾದ ಸುನೀಲ್, ಖಜಾಂಚಿ ಅಭಿನಾಗಮಂಗಲ, ರಾಜು, ಲೋಕೇಶ್, ಗಿರೀಶ್ ಕಾನೂನು ಸಲಹೆಗಾರರಾದ ಮೂಡಲಕೊಪ್ಪಲು ಪ್ರವೀಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.