Friday, June 20, 2025
Google search engine

Homeರಾಜ್ಯಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಎಚ್ಚೆತ್ತುಕೊಂಡು ಪ್ರಜ್ಞಾವಂತರಾಗಿ ಮತದಾನ ಮಾಡಿ: ಪಕ್ಷೇತರ ಅಭ್ಯರ್ಥಿ ಡಿ.ರಾಮಯ್ಯ

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಎಚ್ಚೆತ್ತುಕೊಂಡು ಪ್ರಜ್ಞಾವಂತರಾಗಿ ಮತದಾನ ಮಾಡಿ: ಪಕ್ಷೇತರ ಅಭ್ಯರ್ಥಿ ಡಿ.ರಾಮಯ್ಯ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ದಲಿತರಿಂದ ಮತ ಹಾಕಿಸಿಕೊಂಡು ಎಲ್ಲ ಪಕ್ಷದಲ್ಲೂ ಅವರವರು ಆಳ್ವಿಕೆ ಮಾಡಿದ್ದಾರೆ. ಆದರೆ ದಲಿತರನ್ನು ಯಾವುದೇ ಪಕ್ಷಗಳು ಮುಖ್ಯಮಂತ್ರಿಯಾಗಲಿ, ಪ್ರಧಾನ ಮಂತ್ರಿಯಾಗಲಿ ಇದುವರೆಗೂ ಮಾಡಿಲ್ಲ ಏಕೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಿ.ರಾಮಯ್ಯ ಪ್ರಶ್ನಿಸಿದರು.

ಪಟ್ಟಣದ ಪತ್ರಕರ್ತ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದಲಿತರ ಶಕ್ತಿ ಏನೆಂದು ರಾಜಕೀಯ ಪಕ್ಷಗಳಿಗೆ ಗೋತಾಗಬೇಕೆಂದರೆ ಪ್ರತಿ ಚುನಾವಣೆಯಲ್ಲಿ ದಲಿತರು ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು. ಆಗ ಇತರೆ ಪಕ್ಷಗಳಿಗೂ ದಲಿತರ ಶಕ್ತಿ ತಿಳಿಯುತ್ತದೆ. ಎಲ್ಲ ಪಕ್ಷದಲ್ಲೂ ದಲಿತರು ರಾಜಕೀಯವಾಗಿ ಬೇರುರೂತ್ತಾರೆ. ಇದನ್ನ ಪ್ರತಿಯೊಬ್ಬ ದಲಿತರು ಅರ್ಥ ಮಾಡಿಕೊಳ್ಳುವ ಮೂಲಕ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಎಚ್ಚೆತ್ತುಕೊಂಡು ಪ್ರಜ್ಞಾವಂತರಾಗಿ ಮತದಾನ ಮಾಡಿ ಎಂದರು.

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ ನಮ್ಮ ಗುರಿ ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟಂತ ಸಂವಿಧಾನ ಉಳಿಸುವುದು ಮತ್ತು ಅದರಂತೆ ಎಲ್ಲಾ ಕಾಯಕ ಸಮಾಜದಗಳಿಗೂ ಸಮನ ನ್ಯಾಯ ಒದಗಿಸಿ ಕೊಡುವಂತ ಕೆಲಸ ಮಾಡುವುದು ಹಾಗಾಗಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳನ್ನು ದೂರವಿಟ್ಟು ನನ್ನಗೆ ಹೆಚ್ಚು ಮತ ಕೊಡುವ ಮೂಲಕ ಗೆಲ್ಲಿಸುವಂತೆ ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದರು.

ಕಳೆದ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದು ರಾಜಕೀಯ ಪಕ್ಷಗಳ ಭರವಸೆಯ ಕುತಂತ್ರಕ್ಕೆ ಮೊಸ ಹೋಗಿ ನಾಮ ಪತ್ರ ಹಿಂಪಡೆದಿದೆ ಆ ನಂತರ ಭರವಸೆ ಕೊಟ್ಟಂತವರು ನಮ್ಮನ ಕಡೆಗಣಿಸಿದರು ಇದು ನನ್ನ ಒಬ್ಬನ ಗೂಳಲ್ಲ ರಾಜಕೀಯ ತುಳಿತಕ್ಕೆ ಒಳಗಾದ ಕಾಯಕ ಸಮಾಜಗಳ ಮತ್ತು ದಲಿತರ ಗೋಳಾಗಿರುತ್ತದೆ ಎಂದು ಮನನೊಂದು ಮಾತನಾಡಿದರು.

ನನ್ನಂತ ವಿದ್ಯಾವಂತರಿಂದಲೇ ದಲಿತರ ಮೊದಲ ಶತ್ರುಗಳು. ಇಂತಹ ಮನಸ್ಥಿತಿ ಇರುವವರು ಆದಷ್ಟು ಬದಲಾಗಬೇಕು. ಮತ್ತು ದಲಿತ ಸಮುದಾಯದ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸಲು ಈಗಿನ ಯುವ ಮಿತ್ರರು ಮುಂದೆ ಬರುವುದು ಒಳ್ಳೆಯದು.

ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ದಲಿತ ಸಮುದಾಯದ ಬಂಧುಗಳು ಹಿಂದುಳಿದ ಅಲ್ಪಸಂಖ್ಯತ ಸಮುದಾಯದ ಬಂಧುಗಳು ಕಾಯಕ ಸಮುದಾಯದ ಬಂಧುಗಳು, ಬಡವರು ರೈತ ಬಂಧುಗಳು ಸರ್ಕಾರಿ ನೌಕರರು, ನಿವೃತ್ತಿ ನೌಕರರು, ಬೀದಿಬದಿ ವ್ಯಾಪಾರಸ್ಥರು, ಎಲ್ಲಾ ವಾಹನ ಚಾಲಕರು ಆತ್ಮೀಯ ಸ್ನೇಹಿತರು, ಬಂಧುಗಳು, ನನ್ನ ಗುರುತಾದ “ಕಬ್ಬಿನ ರೈತನ” ಗುರುತಿಗೆ ಮತ ಹಾಕುವುದರ ಮೂಲಕ ನನಗೆ ಆರ್ಶಿವಾದ ಮಾಡಿ ನನ್ನನ್ನು ಜಯಶೀಲರಾನ್ನಾಗಿ ಮಾಡಬೇಕಾಗಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ತಾವು ಗೆದ್ದರೆ ತಾಲ್ಲೋಕಿಗೆ ಈ ಕೆಳಕಂಡ ಅಭಿವೃದ್ದಿ ಭರವಸೆಯನ್ನು ನೀಡಿದರು.

ಈ ಸುದ್ದಿಗೋಷ್ಠಿಯಲ್ಲಿ ಬೋರಯ್ಯ, ಗೋವಿಂದಯ್ಯ ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular