ಮಂಡ್ಯ: ನಾಗಮಂಗಲ ವಿಧಾನಸಭಾ ಕ್ಷೇತ್ರದಾದ್ಯಂತ ಕೃಷಿ ಸಚಿವ ಚಲುವರಾಯಸ್ವಾಮಿ ಅವರೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಭರ್ಜರಿ ಪ್ರಚಾರ ನಡೆಸಿದರು.
ನಾಗಮಂಗಲ ಕ್ಷೇತ್ರ ಸ್ಟಾರ್ ಚಂದ್ರು ಹಾಗೂ ಕೃಷಿ ಸಚಿವರ ತವರು ಕ್ಷೇತ್ರವಾಗಿದ್ದು, ಕದಬಹಳ್ಳಿ, ಲಾಳನಕೆರೆ, ಬಿಂಡಿಗನವಿಲೆ, ಹೊನ್ನಾವರ, ದೇವಲಾಪುರ ಸೇರಿ 18 ಗ್ರಾಮಗಳಲ್ಲಿ ಮಿಂಚಿನ ಸಂಚಾರ ನಡೆಸಿದರು.
ಹೋದಲೆಲ್ಲ ಜನರು ಪಟಾಕಿ ಸಿಡಿಸಿ, ಬೃಹತ್ ಹೂವಿನ ಹಾರ ಹಾಕಿ ಸ್ಟಾರ್ ಚಂದ್ರು ಅವರಿಗೆ ಅದ್ದೂರಿ ಸ್ವಾಗತ ಕೋರಿದರು.

ಗ್ಯಾರಂಟಿ ಯೋಜನೆಯಿಂದ ಬರಗಾಲದಲ್ಲಿಯೂ ಬಡವರ ಕೈ ಹಿಡಿಯುತ್ತಿರುವ ಬಗ್ಗೆ ಮನವರಿಕೆ ಮಾಡಲಾಯಿತು.
ತಾಲೂಕಿನವರೇ ಆದ ಕೈ ಅಭ್ಯರ್ಥಿ ಸ್ಟಾರ್ ಚಂದ್ರು ಗೆಲ್ಲಿಸುವಂತೆ ಸಚಿವ ಚಲುವರಾಯಸ್ವಾಮಿ ಮತಯಾಚನೆ ಮಾಡಿದರು
ನಾನು ಈ ಜಿಲ್ಲೆಯವನು, ಈ ಮಣ್ಣಿನವನು. ನಾಗಮಂಗಲದ ಕನ್ನಘಟ್ಟ ಗ್ರಾಮದವನು. ದಯಮಾಡಿ ಈ ಬಾರಿ ನನ್ನ ಕೈ ಹಿಡಿಯಿರಿ ಎಂದು ಸ್ಟಾರ್ ಚಂದ್ರು ಮತಯಾಚನೆ ಮಾಡಿದರು.