ಮೈಸೂರು: ನಿಧಿ ಎಂ ಕಾಮತ್ ಅವರು ಇಂದು ಕುವೆಂಪುನಗರದ 62ನೇ ವಾರ್ಡ್ ನಲ್ಲಿ ಮೊದಲ ಬಾರಿಗೆ ಮತ ಚಲಾಯಿಸಿದರು.
ಮತ ಚಲಾಯಿಸಿ ಸಂತಸ ಹಂಚಿಕೊಂಡ ನಿಧಿ ಎಂ ಕಾಮತ್, ಸುಭದ್ರ ಭಾರತ ನಿರ್ಮಾಣಕ್ಕೆ ಒಂದು ಓಟು. ದ್ವೇಷ ರಾಜಕಾರಣ ಬರಬಾರದು ಸ್ನೇಹಮಯ ಸರ್ಕಾರ ರಚನೆಯಾಗಬೇಕು. ಭಾರತ ವಿಶ್ವ ಗುರು ಆಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.