Monday, June 9, 2025
Google search engine

Homeರಾಜ್ಯಸುದ್ದಿಜಾಲಮದುವೆ ಕಾರ್ಯ ಮುಗಿಸಿ ಮತದಾನ ಮಾಡಿದ ಮದುಮಗ

ಮದುವೆ ಕಾರ್ಯ ಮುಗಿಸಿ ಮತದಾನ ಮಾಡಿದ ಮದುಮಗ

ಮಂಗಳೂರು (ದಕ್ಷಿಣ ಕನ್ನಡ) : ಮದುವೆ ಸಂಭ್ರಮ ಮುಗಿಸಿ ಮಂಗಳೂರಿಗೆ ಆಗಮಿಸಿ ಮತದಾನ ಮಾಡುವ ಮೂಲಕ ಮದುಮಗನೊಬ್ಬ ಸಮಾಜಕ್ಕೆ ಮಾದರಿಯಾಗಿದ್ದಾರೆ. ಮಂಗಳೂರು ಹಂಪನಕಟ್ಟೆಯ ಗಣಪತಿ ಹೈಸ್ಕೂಲಿನ ಬೂತ್ ನಂಬ್ರ ೧೨೬ ರಲ್ಲಿ ಕುಟುಂಬ ಸಮೇತ ಬಂದು ಮತ ಚಲಾಯಿದ್ದಾರೆ, ನಗರದ ರಥ ಬೀದಿಯ ರಘುವೀರ್ ಕಾಮತ್ ಮತ್ತು ಚೇತನಾ ಕಾಮತ್ ಅವರ ಸುಪುತ್ರ ಮೋಹನ್ ಅವರ ವಿವಾಹ ಉಡುಪಿಯ ಶ್ರುತಿಕಾ ಅವರೊಂದಿಗೆ ಹೋಟೆಲ್ ಕಿದಿಯೂರಿನಲ್ಲಿ ಆಯೋಜಿಸಲಾಗಿತ್ತು. ಮದುವೆ ಸಮಾರಂಭ ಮುಗಿಸಿದ ಮದುಮಗ ಮೋಹನ್ ತಂದೆ ರಘುವೀರ್ , ತಾಯಿ ಚೇತನಾ ಕಾಮತ್, ಹಿರಿಯ ಮಗ ಜಯರಾಂ ಕಾಮತ್ ಅವರೊಂದಿಗೆ ಸಂಜೆ ನೇರವಾಗಿ ಮಂಗಳೂರು ನಗರದ ಗಣಪತಿ ಶಾಲೆಯ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಿ ಮಾದರಿಯಾದರು.

ಇನ್ನು ಉಳ್ಳಾಲ: ಮಂಗಳೂರಿನ ಲೇಡಿ ಹಿಲ್ ಚರ್ಚ್ ಹಾಲ್ ನಲ್ಲಿ ವಿವಾಹವಾದ ಉಳ್ಳಾಲದ ಧೀರಜ್ ಎಮ್.ಕಾಂಚನ್ ಅವರು ಮದುವೆ ಸಭಾಂಗಣದಿಂದ ನೇರವಾಗಿ ಉಳ್ಳಾಲದ ಬಿ.ಎಂ.ಪ್ರೌಢ ಶಾಲೆಗೆ ತೆರಳಿ ಮತ ಚಲಾಯಿಸಿದ್ದಾರೆ. ಧೀರಜ್ ಅವರ ಪತ್ನಿ ಸುರತ್ಕಲ್ ನಲ್ಲಿ ಮತ ಚಲಾಯಿಸಿದ್ದಾರೆ.

RELATED ARTICLES
- Advertisment -
Google search engine

Most Popular