ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಇ – ಸ್ವತ್ತು ಮಾಡಿಸಲು ಲಂಚ ಸ್ವೀಕರಿಸುವ ವೇಳೆಯಲ್ಲಿ ಲೋಕಾಯುಕ್ತರ ಬಲೆಗೆ ಗ್ರಾ ಪಂ ಪಿಡಿಒ ಬಿದ್ದಿದ್ದಾರೆ
ತಾಲೂಕಿನ ಕರ್ಪೂರವಳ್ಳಿ ಗ್ರಾಮ ಪಂಚಾಯತಿ ಪಿಡಿಒ ಕುಳ್ಳೇಗೌಡ ಇವರು ಭಾಸ್ಕರ್ ಹಾಗು ಗೌರಮ್ಮ ಎಂಬುವರಿಗೆ ಇ – ಸ್ವತ್ತು ಮಾಡಿಸಲು ತಲಾ ೪ ಸಾವಿರ ರೂ ಗಳಂತೆ ಇಬ್ಬರಿಂದ ಒಟ್ಟು ೮ ಸಾವಿರ ರೂ ಗಳನ್ನು ಲಂಚ ಸ್ವೀಕರಿಸುವ ವೇಳೆಯಲ್ಲಿ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವುದಾಗಿ ಲೋಕಾಯುಕ್ತ ರು ತಿಳಿಸಿದ್ದಾರೆ.
ಲೋಕಾಯುಕ್ತರಾದ ಡಿ ವೈ ಎಸ್ ಪಿ ಮಾಲತೇಶ್, ಸಬ್ ಇನ್ಸೆಕ್ಟರ್ ಗಳಾದ ಅಶೋಕ್ ಕುಮಾರ್, ರವಿಕುಮಾರ್,ರೂಪ ಶ್ರೀ, ಸಿಬ್ಬಂದಿಯವರಾದ ಲೋಕರಾಜ್ ಅರಸ್, ಮೋಹನ್ ಕುಮಾರ್, ದಿನೇಶ್, ಗೋಪಿ, ಮೋಹನ್ ಕುಮಾರ್, ಶೇಖರ್, ಪರಶುರಾಮ್, ನೇತ್ರಾವತಿ, ತ್ರಿವೇಣಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು