Monday, June 9, 2025
Google search engine

Homeರಾಜ್ಯಸುದ್ದಿಜಾಲಅನಂತ್ ನಾಗ್‌ ಅವರಿಗೆ ಪದ್ಮಭೂಷಣ ಪ್ರಶಸ್ತಿ: ಕನ್ನಡಿಗರ ಹೃದಯ ವೈಶಾಲ್ಯ ಮತ್ತು ಮಾನವೀಯ ಮೌಲ್ಯಗಳ ಪ್ರತೀಕ-...

ಅನಂತ್ ನಾಗ್‌ ಅವರಿಗೆ ಪದ್ಮಭೂಷಣ ಪ್ರಶಸ್ತಿ: ಕನ್ನಡಿಗರ ಹೃದಯ ವೈಶಾಲ್ಯ ಮತ್ತು ಮಾನವೀಯ ಮೌಲ್ಯಗಳ ಪ್ರತೀಕ- ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಅನಂತ್ ನಾಗ್ ಪದ್ಮಭೂಷಣ ಪ್ರಶಸ್ತಿಯನ್ನು ಸಮಸ್ತ ಕನ್ನಡಿಗರಿಗೆ ಅರ್ಪಿಸುವ ಮೂಲಕ ತಮ್ಮ ವಿಶೇಷ ಹೃದಯ ವೈಶಾಲ್ಯ ಹಾಗೂ ಶ್ರೇಷ್ಠ ಕನ್ನಡ ಮನಸ್ಸಿನ ಮಾನವೀಯ ಮೌಲ್ಯದ ವ್ಯಕ್ತಿಯು ಪ್ರತೀಕವಾಗಿ ಹೊರಹೊಮ್ಮಿದ್ದಾರೆ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ,ಸಂಸ್ಕೃತಿ ಚಿಂತಕ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ನಟ ,ಪದ್ಮಭೂಷಣ ಅನಂತನಾಗ್ ಅಭಿನಂದನಾ ನುಡಿ ಹಾಗೂ ಚಲನಚಿತ್ರ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳು, ಸಿಹಿ ಹಂಚಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹಿರಿಯರು, ಗೌರವಾನ್ವಿತರು ,ಶ್ರೇಷ್ಠ ನಟ ಅನಂತನಾಗ್ ಅವರಿಗೆ ಅವರ ಸುದೀರ್ಘ ಕಲಾ ಸೇವೆಯನ್ನು ಗುರುತಿಸಿ ಭಾರತ ಸರ್ಕಾರವು ಪದ್ಮಭೂಷಣವನ್ನು ನೀಡಿ ಸಮಸ್ತ ಕನ್ನಡಿಗರಿಗೆ ಅಲ್ಲದೆ ಭಾರತೀಯ ಚಿತ್ರರಂಗಕ್ಕೆ ಗೌರವವನ್ನು ಸಲ್ಲಿಸಿರುವುದು ತಮಗೆಲ್ಲರಿಗೂ ಬಹಳ ಸಂತೋಷವನ್ನು ಉಂಟು ಮಾಡಿದೆ.

ಅನಂತ್ ನಾಗ್ ರವರು ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ,4 ಬಾರಿ ಅತ್ಯುತ್ತಮ ಶ್ರೇಷ್ಠ ರಾಜ್ಯ ಪ್ರಶಸ್ತಿಯನ್ನು ,ಆರು ಬಾರಿ ಫಿಲಂ ಫೇರ್ ಪ್ರಶಸ್ತಿಯನ್ನು ಗಳಿಸಿ ಕನ್ನಡ, ತಮಿಳು, ಮರಾಠಿ ,ತೆಲುಗು ,ಹಿಂದಿ ಇಂಗ್ಲಿಷ್ ,ಮಲಯಾಳಂ ಹೀಗೆ ಹಲವು ಭಾಷೆಗಳಲ್ಲಿ ಅಲ್ಲದೆ ರಂಗಭೂಮಿಯಲ್ಲಿ ವಿಶೇಷ ಪಾತ್ರಗಳಲ್ಲಿ ನಟಿಸಿ ಜೀವಂತಿಕೆಯನ್ನು ತಂದು ಪ್ರತಿಯೊಬ್ಬ ಮನುಷ್ಯನಲ್ಲೂ ಸಿನಿಮಾವನ್ನು ಒಂದು ಜೀವನ ಮತ್ತು ಆದರ್ಶ ಪಥದಲ್ಲಿ ತೆಗೆದುಕೊಂಡು ಹೋಗುವ ಶ್ರೇಷ್ಠವಾದ ಮನೋಜ್ಞ ಅಭಿನಯ ನಾವ್ಯಾರು ಮರೆಯಲು ಸಾಧ್ಯವಿಲ್ಲ. ಅನಂತನಾಗ್ ರವರ ಮಿಂಚಿನ ಓಟ ಹೊಸ ನೀರು ,ಅವಸ್ಥೆ ,ಹಂಸಗೀತೆ, ಸಂಕಲ್ಪ , ಉದ್ಭವ ,ಕನ್ನೇಶ್ವರ ರಾಮ, ಆಕ್ಸಿಡೆಂಟ್, ಬೆಳದಿಂಗಳ ಬಾಲೆ, ಮತದಾನ ಚಿತ್ರಗಳು ಇಂದಿಗೂ ಜನರಲ್ಲಿ ಭಾರಿ ಪರಿಣಾಮವನ್ನು ಉಂಟು ಮಾಡಿರುವುದನ್ನು ಕಾಣಬಹುದು. ನಟ ರಾಗಿ ,ಸಮಾಜ ಸೇವೆಯಲ್ಲಿ ತೊಡಗಿ, ರಾಜಕಾರಣ ಪ್ರವೇಶಿಸಿ ಶಾಸಕರಾಗಿ, ಮಂತ್ರಿಯಾಗಿ ಸೇವೆ ಸಲ್ಲಿಸಿದರು .ತಮ್ಮ ಸರಳ ಸೌಜನ್ಯ ಪ್ರೀತಿ ,ವಿಶ್ವಾಸ ,ಸಹಕಾರ, ನಡವಳಿಕೆಯ ಮೂಲಕ ಕನ್ನಡಿಗರ ಗೌರವವನ್ನು ಹೆಚ್ಚಿಸಿದ್ದಾರೆ. ಪದ್ಮಭೂಷಣ ಪ್ರಶಸ್ತಿಗೆ ಪಾತ್ರರಾಗಿರುವ ಅನಂತನಾಗ್ ರವರಿಗೆ ಸಮಸ್ತ ಕನ್ನಡಿಗರ ಪರವಾಗಿ ಹೃದಯಪೂರ್ವಕವಾದ ಧನ್ಯವಾದಗಳು ಅರ್ಪಿಸುವ ಮೂಲಕ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಾರ್ವಜನಿಕರಿಗೆ ಸಿಹಿ ಸಂಭ್ರಮಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಹೆಮ್ಮೆ ಯಾಗಿದೆ. ಕನ್ನಡಿಗರಿಗೆ ಮತ್ತಷ್ಟು ವಿಶೇಷ ಪ್ರಶಸ್ತಿಗಳು ಸದಾಕಾಲ ದೊರೆಯಲಿ ಎಂದು ಋಗ್ವೇದಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಪದ್ಮ ಪುರುಷೋತ್ತಮ್ ಮಾತನಾಡಿ ಅನಂತನಾಗ್ ರವರು ತಮ್ಮ ಅಭಿನಯದ ಮೂಲಕ ವಿಶೇಷವಾಗಿ ಮಹಿಳೆಯರಿಗೆ ಬಹಳ ನೆಚ್ಚಿನ ನಟರಾಗಿದ್ದಾರೆ. ಅವರ ಪಾತ್ರಗಳು ವಿಶೇಷ ಪ್ರಭಾವವನ್ನು ಬೀರಿದೆ. ಅನಂತ್ ನಾಗ್ ರವರಿಗೆ ಪದ್ಮಭೂಷಣ ಪ್ರಶಸ್ತಿ ದೊರೆತಿರುವುದು ಕನ್ನಡಿಗರಾದ ನಮ್ಮೆಲ್ಲರಿಗೂ ಮತ್ತಷ್ಟು ಖುಷಿಯನ್ನು ತಂದಿದೆ ಎಂದರು.

ಬರಹಗಾರ ಎಸ್ ಲಕ್ಷ್ಮೀನರಸಿಂಹ ಮಾತನಾಡಿ ಅನಂತ್ ನಾಗ್ ರವರ ಬರ ಹಂಸಗೀತೆ ,ಅವಸ್ಥೆ ,ಮತದಾನ, ಹೊಸ ನೀರು, ಕನ್ನೇಶ್ವರ ರಾಮ ,ಮಿಂಚಿನ ಓಟ ಮಾಲ್ಗುಡಿ ಡೇಸ್ ನ ಪಾತ್ರಗಳು ಇಡೀ ಭಾರತದ ಶ್ರೇಷ್ಠ ನಟ ಎಂದು ಗುರುತಿಸಿದೆ. ಅನಂತ್ ನಾಗ್ ರವರು ಕನ್ನಡಿಗರಾಗಿ ಇಡೀ ರಾಷ್ಟ್ರದಲ್ಲಿ ತಮ್ಮ ಪ್ರತಿಭೆಯನ್ನು ಹೊರಹೊಮ್ಮಿಸಿರುವುದು ವಿಶೇಷ ಎಂದು ಚಾಮರಾಜನಗರದ ಕನ್ನಡ ಸಾಹಿತ್ಯ ಪರಿಷತ್ತು ವಿಶೇಷವಾಗಿ ಅಭಿನಂದನೆ ಸಿಹಿ ಹಂಚಿಕೆ ಹಾಗೂ ಅವರ ಕೊಡುಗೆಗಳ ಕುರಿತು ಕಾರ್ಯಕ್ರಮ ರೂಪಿಸಿರುವ ಋಗ್ವೇದಿ ರವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದರು.

ಹಿರಿಯ ಕನ್ನಡ ಚಳುವಳಿಗಾರ ರಾಜಗೋಪಾಲ್, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಶಿವಲಿಂಗ ಮೂರ್ತಿ , ಸರಸ್ವತಿ, ಮುರಳಿ, ರಾಮ್ ಪ್ರಸಾದ್, ಕುಮಾರ್ ಇದ್ದರು. ಶ್ರೀ ಚಾಮರಾಜೇಶ್ವರ ದೇವಸ್ಥಾನದಮುಂಭಾಗದಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಪದ್ಮಭೂಷಣ ದೊರೆತಿರುವ ಸಂಭ್ರಮ ಸಂತೋಷವನ್ನು ಹಂಚಿಕೊಳ್ಳ ಲಾಯಿತು.

RELATED ARTICLES
- Advertisment -
Google search engine

Most Popular