ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಸಮೀಪದಲ್ಲೇ ಹಾಡಹಗಲೇ ಕಳ್ಳನೊಬ್ಬ ಕಂಪೌಂಡ್ ಜಿಗಿದು ಸಂಪ್ ಮುಚ್ಚಳವನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಕುಮಾರ ಕೃಪಾ ವೆಸ್ಟ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕಳ್ಳನೊಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಿಂದ ಕೇವಲ ಕೆಲವೇ ಅಂತರದಲ್ಲಿರುವ ಮನೆಯೊಂದರ ಕಾಂಪೌಂಡ್ ಜಿಗಿದು ಪ್ರವೇಶಿಸಿ, ಕಳ್ಳತನ ಮಾಡಿದ್ದ ಸಂಪ್ ಮುಚ್ಚಳವನ್ನ ಮನೆಯ ಮರೆಯಲ್ಲಿಟ್ಟಿದ್ದ ಆರೋಪಿ, ಜನರ ಓಡಾಟ ಕಡಿಮೆಯಾದ ನಂತರ ತೆಗೆದುಕೊಂಡು ಪರಾರಿಯಾಗಿದ್ದಾನೆ. ಸದ್ಯ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.