ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಮೈಸೂರಿನ ಯುವರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಚಿಕ್ಕಕೊಪ್ಪಲು ಗ್ರಾಮದವರಾದ ಡಾ.ಸಿ.ಡಿ.ಪರುಶುರಾಮ್ ರಚಿಸಿರುವ ಬಡವರ ಬಂಧು ಗಂಧನಹಳ್ಳಿ ಎಂ ಬಸವರಾಜು ಕೃತಿ ಬಿಡುಗಡೆ ಗೊಂಡಿತು. ಬೆಂಗಳೂರಿನ ಸಿ.ಎಂ.ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃತಿ ಬಿಡುಗಡೆ ಮಾಡಿ ಪರುಶುರಾಮ್ ಅವರ ಕೃತಿ ಓದಿ ತಮ್ಮ ಶುಭ ಹಾರೈಸಿದರು.
ನಂತರ ಮಾತಾಡಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ 1967 ರಿಂದ 71 ರ ವರಿಗೆ ಕೆ.ಆರ್.ನಗರದ ಶಾಸಕರಾಗಿ
1980ರಲ್ಲಿ ರಾಜ್ಯ ಸಭೆ ಸದಸ್ಯರಾಗಿ ಸೇವೆ ಸಲ್ಲಿದ ವೇಳೆ ರಾಜ್ಯಸಭೆಯಲ್ಲಿ 1200 ಪ್ರಶ್ನೆಗಳನ್ನು ಕೇಳುವ ಮೂಲಕ ಬಸವರಾಜು ಅವರು ಅತ್ಯುತ್ತಮ ಸಂಸದೀಯ ಪಟುವಾಗಿದ್ದರು ಎಂದರು.
ಬಸವರಾಜು ಅವರು ಮೈಸೂರು ಚಲೋ ಚಳುವಳಿಯ ಮೂಲಕ ವಿದ್ಯಾರ್ಥಿ ದಿಸೆಯಲ್ಲಿ ಸ್ವಾತಂತ್ರ್ಯದ ಹೋರಾಟ ಮಾಡಿ ಜೈಲು ವಾಸ ಅನುಭವಿಸಿದ್ದ ಇವರು ಎಂದಿಗೂ ರಾಜಕೀಯವನ್ನು ತಮ್ಮ ಸ್ವಾರ್ಥಕ್ಕೆ ಬಳಸದೇ ಸಾರ್ವಜನಿಕ ಸೇವೆಗಾಗಿ ಮುಡಾಪಾಗಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿ ಕೆ.ಆರ್.ನಗರ ಕ್ಷೇತ್ರದ ಅಭಿವೃದ್ದಿಗೆ ತಮ್ಮದೇ ಅದ ಕೊಡುಗೆ ನೀಡಿದ್ದ ಇವರ ಸೇವೆಯನ್ನ ಕೃತಿ ಮೂಲಕ ಇಂದಿನ ಯುವ ಜನತೆಗೆ ತಿಳಿಸುವ ಪ್ರಯತ್ನ ಮಾಡಿರುವ ಲೇಖಕ ಸಿ.ಡಿ. ಪರುಶುರಾಮ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೃತಿಯಲ್ಲಿ ಕೆ.ಆರ್.ನಗರ ಇತಿಹಾಸ ಪರಂಪರೆ, ಸ್ವಾತಂತ್ರ್ಯ ಹೋರಾಟಕ್ಕೆ ಕೆ.ಆರ್.ನಗರ ಕ್ಷೇತ್ರದ ಕೊಡುಗೆ, 1952 ರಿಂದ 2024 ರ ವರಿಗೆ ಶಾಸಕರ ರಾಜಕೀಯ ಜೀವನ ಚರಿತ್ರೆಯ ಜತಗೆ ಬಸವರಾಜು ಅವರ ರಾಜಕೀಯವನ್ನು ಅಳವಡಿಸಲಾಗಿದೆ.
ಸಚಿವರಾದ ಡಾ. ಎಂ.ಸಿ. ಸುಧಾಕರ್, ಭೈರತಿ ಸುರೇಶ್, ಈಶ್ವರ್ ಖಂಡ್ರೆ ಶಾಸಕ ಡಿ. ರವಿಶಂಕರ್, ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ, ಡಿ. ಬನುಮಯ್ಯ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ. ಕೆ. ಮೂರ್ತಿ, ಲೇಖಕ ಡಾ. ಸಿ. ಡಿ. ಪರಶುರಾಮ ಉಪಸ್ಥಿತರಿದ್ದರು.