Wednesday, June 25, 2025
Google search engine

Homeರಾಜ್ಯಸುದ್ದಿಜಾಲಬಜ್ಪೆ ಹಾಗೂ ಕುಡುಪು ಹತ್ಯೆ ಪ್ರಕರಣ: ವೈಜ್ಞಾನಿಕ ತನಿಖೆಯಲ್ಲಿ ನಿರತರಾದ ಪೊಲೀಸರು: ಸುಧೀರ್ ಕುಮಾರ್ ರೆಡ್ಡಿ...

ಬಜ್ಪೆ ಹಾಗೂ ಕುಡುಪು ಹತ್ಯೆ ಪ್ರಕರಣ: ವೈಜ್ಞಾನಿಕ ತನಿಖೆಯಲ್ಲಿ ನಿರತರಾದ ಪೊಲೀಸರು: ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ

ಮಂಗಳೂರು (ದಕ್ಷಿಣ ಕನ್ನಡ) ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಹಾಗೂ ಕುಡುಪುವಿನ ಅಶ್ರಫ್ ಸಾಮೂಹಿಕ ಹತ್ಯೆ ಕೇಸ್ ಗಳಲ್ಲಿ ಪೊಲೀಸರು ವೈಜ್ಞಾನಿಕ ಸಾಕ್ಷ್ಯಾಧಾರ ಇಟ್ಕೊಂಡು ತನಿಖೆ ಮಾಡ್ತಿದ್ದಾರೆ.

ಯಾವುದೇ ರೀತಿಯ ಸಾಕ್ಷ್ಯಿ ಇದ್ದಲ್ಲಿ ಸಾರ್ವಜನಿಕರು ಅದನ್ನು ನೇರವಾಗಿ ಒದಗಿಸಬಹುದು ಎಂದು ಮಂಗಳೂರು ನಗರದ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ. ಅವರು ಮಂಗಳೂರು ನಗರದ ಪಾಂಡೇಶ್ವರದಲ್ಲಿರೋ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಸುಹಾಸ್ ಶೆಟ್ಟಿ ಪ್ರಕರಣ ಸದ್ಯ ಎನ್‌ಐಎಗೆ ವಹಿಸಲಾಗಿದೆ. ಕೇರಳದ ಅಶ್ರಫ್ ಕೇಸಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

ಈ ಪ್ರಕರಣದಲ್ಲಿ ಈಗಾಗಲೇ 100ಕ್ಕೂ ಅಧಿಕ ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ. ಹೀಗಾಗಿ ಸಾರ್ವಜನಿಕರಿಗೆ ಯಾವುದೇ ರೀತಿಯ ಅನುಮಾನ, ಸಂಶಯ ಬೇಡ. ಪೊಲೀಸರ ತನಿಖೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವುದು ಬಿಟ್ಟು, ಸಾಕ್ಷ್ಯಾಧಾರಗಳಿದ್ದಲ್ಲಿ ನೇರವಾಗಿ ನಮಗೆ ತಂದು ಕೊಡಿ. ಕಾನೂನಿಗಿಂತ ಯಾರೂ ಮೇಲಲ್ಲ. ನಾವು ಯಾವುದೇ ಪುರಾವೆಗಳನ್ನು ಕಡೆಗಣಿಸುವುದಿಲ್ಲ. ಆದರೆ ತನಿಖೆಗೆ ದಿಕ್ಕು ತಪ್ಪಿಸುವ ರೀತಿಯಲ್ಲಿ, ಸಾರ್ವಜನಿಕರನ್ನು ತಪ್ಪು ದಾರಿಗೆ ಎಳೆಯುವ ಕಾರ್ಯವನ್ನು ಯಾರಾದರೂ ನಡೆಸಿದರೂ ಅವರೂ ಕಾನೂನಿನ ಪ್ರಕಾರ ಆರೋಪಿಗಳಾಗುತ್ತಾರೆ ಎಂದರು.

RELATED ARTICLES
- Advertisment -
Google search engine

Most Popular