Saturday, June 28, 2025
Google search engine

Homeರಾಜ್ಯಸುದ್ದಿಜಾಲಇತಿಹಾಸದಲ್ಲಿ ಅಮರವಾದ ನಾಡಪ್ರಭು ಕೆಂಪೇಗೌಡರು ಯುವ ಆಡಳಿತಗಾರರಿಗೆ ಮಾದರಿ ವ್ಯಕ್ತಿತ್ವ: ಸುರೇಶ್ ಎನ್ ಋಗ್ವೇದಿ

ಇತಿಹಾಸದಲ್ಲಿ ಅಮರವಾದ ನಾಡಪ್ರಭು ಕೆಂಪೇಗೌಡರು ಯುವ ಆಡಳಿತಗಾರರಿಗೆ ಮಾದರಿ ವ್ಯಕ್ತಿತ್ವ: ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ನಾಡಪ್ರಭು ಕೆಂಪೇಗೌಡರು ಇತಿಹಾಸದಲಅಮರ ಪುರುಷರು. ಕಲೆ, ಸಾಹಿತ್ಯ ,ಸಂಗೀತ, ದೇವಾಲಯಗಳು, ಕೆರೆ ,ನಗರ, ಹಾಗು ಪೇಟೆ ನಿರ್ಮಾಣ ಕ್ಷೇತ್ರಗಳಲ್ಲಿ ಅಭೂತಪೂರ್ವ ಸೇವೆ ಮಾಡಿ ,ಬೆಂಗಳೂರು ನಗರವನ್ನು ವಿಶ್ವಖ್ಯಾತಿಗೊಳಿಸಿದ ಕೆಂಪೇಗೌಡರವರ ಚಿಂತನೆ ಯುವ ಆಡಳಿತಗಾರರಿಗೆ ಮಾದರಿಯಾದದ್ದು. ರಾಷ್ಟ್ರದ ನೇತಾರರಿಗೆ ಕೆಂಪೇಗೌಡರ ಇತಿಹಾಸ ,ಅಭಿವೃದ್ಧಿ ,ಉತ್ತಮ ಮಾರ್ಗದರ್ಶನವನ್ನು ಸದಾ ನೀಡುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಕೆಂಪೇಗೌಡರ ಜಯಂತಿ ಹಾಗೂ ಅವರ ಕೊಡುಗೆಗಳ ಕುರಿತು ಮಾತನಾಡುತ್ತಾ ಕೆಂಪೇಗೌಡರವರ ಇತಿಹಾಸ ,ಕನ್ನಡ ,ಸಂಸ್ಕೃತಿ ಪರಂಪರೆಯಲ್ಲಿ ಸದಾ ಕಾಲ ಸ್ಮರಿಸುವ ಹಾಗೂ ಗೌರವಿಸುವ ವ್ಯಕ್ತಿತ್ವ ಹೊಂದಿದೆ. ಇಂದು ವಿಶ್ವ ಪ್ರಸಿದ್ಧ ವಾಗಿರುವ ಬೆಂಗಳೂರು ವಿಶ್ವದ ಎಲ್ಲೆಡೆ ಜನರನ್ನು ಆಕರ್ಷಿಸುತ್ತಿದೆ .ಸರ್ವ ಕ್ಷೇತ್ರಗಳಲ್ಲೂ ಅಭಿವೃದ್ಧಿ ಸಾಧಿಸುತ್ತಿರುವ ಹಿನ್ನೆಲೆ ಕೆಂಪೇಗೌಡರ ಪರಿಶ್ರಮವನ್ನು ಇತಿಹಾಸ ಮರೆಯಲಾಗದು. ಕೆಂಪೇಗೌಡ ರವರು ಸರ್ವರಿಗೂ ಮಾದರಿಯಾದ ಜೀವನವನ್ನು ನಡೆಸಿದವರು. ವಿಜಯನಗರದ ಸಾಮ್ರಾಜ್ಯದ ನಂಬಿಕಸ್ತರಾಗಿದ್ದ ಕೆಂಪೇಗೌಡರವರು ನಂಬಿಕೆಗೆ ಪರ್ಯಾಯವೆಂದು ತಿಳಿಸಿ ಅವರ ದೇಶಭಕ್ತಿ, ದೂರ ದೃಷ್ಟಿ, ಅಭಿವೃದ್ಧಿ, ಹಾಗೂ ಚಿಂತನೆಗಳು ನಮಗೆಲ್ಲರಿಗೂ ಸ್ಪೂರ್ತಿಯನ್ನು ತರುತ್ತದೆ. ಕರ್ನಾಟಕದ ರಾಜಧಾನಿ ಬೆಂಗಳೂರು ನಿರ್ಮಿಸುವ ಮೂಲಕ ಕರ್ನಾಟಕದ ಕಲೆ, ಸಾಹಿತ್ಯ, ಸಂಗೀತ ,ವಿಜ್ಞಾನ ,ಬಾಹ್ಯಾಕಾಶ, ಕೃಷಿ, ಕೈಗಾರಿಕೆ ,ತಂತ್ರಜ್ಞಾನ ಸರ್ವ ಕ್ಷೇತ್ರಗಳಲ್ಲೂ ಅಭಿವೃದ್ಧಿಯ ಪತಾಕೆ ಸಾಧಿಸಲು ಹಾಗೂ ವಿಶ್ವದ ಕೊಡುಗೆಯಾಗಿ ನಿರ್ಮಾಣ ಮಾಡಿರುವುದು ಕೆಂಪೇಗೌಡರವರ ಸಾಧನೆ.ಕನ್ನಡ ಸಾಹಿತ್ಯ ಪರಿಷತ್ತು ಅವರ ಕೊಡುಗೆಗಳನ್ನು ಸ್ಮರಿಸಿಕೊಳ್ಳಲು ಹೆಮ್ಮೆ ಪಡುತ್ತದೆ ಎಂದರು.

ಕನ್ನಡ ಸಂಘಟನೆಗಳ ಹಿರಿಯ ಹೋರಾಟಗಾರರಾದ ಮಹೇಶ್ ಗೌಡ ರವರು ಕಾರ್ಯಕ್ರಮದಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಹೆಮ್ಮೆಯ ಪುರುಷರನ್ನು ಸದಾ ಕಾಲ ಗೌರವಿಸಿ ಅವರ ಬಗ್ಗೆ ಕಾರ್ಯಕ್ರಮಗಳನ್ನು ರೂಪಿಸಿ ಸಮಾಜಕ್ಕೆ ತಿಳಿಸುವ ಕಾರ್ಯಗಳನ್ನು ನಡೆಸುತ್ತಿರುವುದು ಬಹಳ ಸಂತೋಷವಾದುದು. ಕೆಂಪೇಗೌಡರ ಆಡಳಿತ ಸರ್ವರಿಗೂ ಮಾದರಿಯಾಗಿದೆ. ಕರ್ನಾಟಕ ಸರ್ಕಾರ ಕೆಂಪೇಗೌಡರ ಜಯಂತಿಯನ್ನು ವಿಶೇಷವಾಗಿ ಆಚರಿಸಿ ಅವರ ಕೊಡುಗೆಗಳನ್ನು ಸ್ಮರಿಸಿಕೊಳ್ಳುತ್ತಿರುವುದು ಮುಂದಿನ ಪೀಳಿಗೆಗೆ ಅವರ ಸಮಗ್ರ ಇತಿಹಾಸ ತಿಳಿಯಲು ಸಹಾಯವಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರಪ್ರಸಾದ್ ರವರು ಶ್ರೀ ಕೆಂಪೇಗೌಡರ ಇತಿಹಾಸವನ್ನು ಸಭೆಗೆ ಪರಿಚಯಿಸಿ ನೂರಾರು ಕೆರೆಗಳ ನಿರ್ಮಾಣವನ್ನು ಮಾಡಿ ಕೃಷಿ, ಕೈಗಾರಿಕೆಗಳ ಬೆಳವಣಿಗೆಗೆ ಪೂರ್ಣ ದೃಷ್ಟಿಕೋನದ ಮೂಲಕ ಅಭಿವೃದ್ಧಿ ಸಾಧಿಸಿದ ಕೆಂಪೇಗೌಡರವರಿಗೆ ಕನ್ನಡಿಗರು ಸದಾ ಕಾಲ ಚಿರಋಣಿಯಾಗಿದ್ದಾರೆ ಎಂದರು.

ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಿ ಕೆ ಆರಾಧ್ಯ, ಪದ್ಮಾಪುರುಷೋತ್ತಮ್, ಸರಸ್ವತಿ, ವಾಸಂತಿ ,ಶಿವಲಿಂಗ ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular