Monday, June 30, 2025
Google search engine

Homeಸ್ಥಳೀಯಜೆ.ಕೆ. ಟೈರ್ಸ್ ಕಾರ್ಮಿಕರಿಂದ ಪೋಸ್ಟ್ ಕಾರ್ಡ್ ಚಳುವಳಿ: ಖಾಯಂ ನೌಕರಿ ಸೇರಿದಂತೆ ಹತ್ತು ಬೇಡಿಕೆಗಳಿಗೆ ಒತ್ತಾಯ

ಜೆ.ಕೆ. ಟೈರ್ಸ್ ಕಾರ್ಮಿಕರಿಂದ ಪೋಸ್ಟ್ ಕಾರ್ಡ್ ಚಳುವಳಿ: ಖಾಯಂ ನೌಕರಿ ಸೇರಿದಂತೆ ಹತ್ತು ಬೇಡಿಕೆಗಳಿಗೆ ಒತ್ತಾಯ

ಮೈಸೂರು: ನೌಕರಿ ಖಾಯಂ ಸೇರಿದಂತೆ ಹತ್ತು-ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜೆ.ಕೆ.ಟೈರ್ಸ್ ನ ಕಾರ್ಮಿಕ ವರ್ಗ ತಮ್ಮ ಕುಟುಂಬಸ್ಥರ ಜೊತೆಗೂಡಿ ಪೋಸ್ಟ್ ಕಾರ್ಡ್ ಚಳುವಳಿ ನಡೆಸಿದರು.

ಭಾನುವಾರ ಬೆಳಗ್ಗೆ ಇಲ್ಲಿನ ನಗರ ಭಾರತೀಯ ಅಂಚೆ ಕಚೇರಿ ಬಳಿ ನಡೆದ ಪೋಸ್ಟ್ ಕಾರ್ಡ್ ಚಳುವಳಿಯಲ್ಲಿ ಪಾಲ್ಗೊಂಡ ಕಾರ್ಮಿಕರು, ಆಡಳಿತ ಮಂಡಳಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಸಾಕಷ್ಟು ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.ಜೆ.ಕೆ.ಟೈರ್ಸ್ ಆಡಳಿತ ಮಂಡಳಿಯ ಈ ನಿರ್ಧಾರದ ವಿರುದ್ದ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು.ವಿಚಾರಣೆ ನಡೆಸಿದ ನ್ಯಾಯಾಲಯ ಕಾರ್ಮಿಕರ ಪರ ತೀರ್ಪಿನ ಆದೇಶ ನೀಡಿದಲ್ಲದೇ, ವಜಾಗೊಳಿಸಿದ ಎಲ್ಲಾ ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು. ಹಿರಿತನವನ್ನು ಕಾಪಾಡಬೇಕು.ಸಮಾಲೋಚನೆ ಮಾಡುವಂತಿಲ್ಲ ಎಂಬಿತ್ಯಾದಿ ಸೂಚನೆಗಳನ್ನು ನೀಡಿದ್ದರೂ, ಆಡಳಿತ ವರ್ಗವೂ ವಿನಾಕಾರಣ ಕಾರಣವಿಲ್ಲದೇ ಮತ್ತೆ ಕಾರ್ಮಿಕರನ್ಮು ಕೆಲಸದಿಂದ ವಜಾಗೊಳಿಸುತ್ತಿದೆ.ಮತ್ತು ಕೆಲವು ಬದಲಿ ಕಾರ್ಮಿಕರಿಗೆ ಸುಖಾಸುಮ್ಮನೆ ಸಮಾಲೋಚನೆಯ ನೋಟಿಸ್ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಜೆ.ಕೆ.ಟೈರ್‌ನ ಆಡಳಿತ ವರ್ಗವು ನ್ಯಾಯಾಲಯದ ಆದೇಶವನ್ನು ಗೌರವದಿಂದ ಪಾಲಿಸಬೇಕು.ನ್ಯಾಯಾಲಯದ ಆದೇಶದ ಸಂಖ್ಯೆ : IID-97/2020 and Ref No.27/2021 5 ಆದೇಶವು 2024 ರಲ್ಲಿ ಸಮಾಲೋಚನೆ ಮಾಡದೆ ಕೆಲಸವನ್ನು ನೀಡಬೇಕು. ನಮ್ಮ ಬಿ.ಎಂ.ಎಸ್ ಸಂಯೋಜಿತ ಜೆ.ಕೆ.ಟೈಗ್ (ವಿಕ್ರಾಂತ್) ಬದಲಿ ಮತ್ತು ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ಮಾನ್ಯತೆ ನೀಡಿ ಸಮಸ್ಯೆಯನ್ನು ಬಗೆಹರಿಸಲು ಆಡಳಿತ ವರ್ಗ ಮಾತುಕತೆಗೆ ಆಹ್ವಾನಿಸಬೇಕು. ನ್ಯಾಯಾಲಯದ ಆದೇಶದಂತೆ ಖಾಯಂಮಾತಿ ಮತ್ತು ವೇತನದ ವ್ಯತ್ಯಾಸವನ್ನು ಸರಿಸಮನಾಗಿ ನೀಡಬೇಕು.ಬದಲಿ ಕಾರ್ಮಿಕರಿಗೆ ಅನಗತ್ಯವಾಗಿ ನೀಡಿದಂತಹ ಸಮಾಲೋಚನೆಯ ನೋಟಿಸ್ ಅನ್ನು ವಾಪಸ್ ಪಡೆಯಬೇಕು.ಬದಲಿ ಕಾರ್ಮಿಕರಿಗೆ ಶೋಷಣೆ ಮತ್ತು ದೌರ್ಜನ್ಯ ಮತ್ತು ಬೆದರಿಕೆ ತಕ್ಷಣ ನಿಲ್ಲಬೇಕು.ಅಧಿಕ ಸಮಯ ಓ.ಟಿ ಮಾಡಿದಲ್ಲಿ ಕಾನೂನಿನಂತೆ ದುಪ್ಪಟ್ಟು ವೇತನ ನೀಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಲಾಯಿತು.

ಜೆಕೆ ಟೈಯರ್. ಲಿ. ವಿಕ್ರಾಂತ್ ಬದಲಿ ಮತ್ತು ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ
ಗೌರವಾಧ್ಯಕ್ಷ ಇಂದ್ರೇಶ್ ಜಿ, ಅಧ್ಯಕ್ಷ ಚಂದ್ರು, ಉಪಾಧ್ಯಕ್ಷ ಮಧು. ಸಿ. ಎಸ್., ಉಪಾಧ್ಯಕ್ಷ ಮೋಹನ್ ಕುಮಾರ್ ಎಸ್, ಪ್ರಧಾನ ಕಾರ್ಯದರ್ಶಿ ಬಾನು ಚಂದ್ರ, ಸಹ ಕಾರ್ಯದರ್ಶಿ ಮಂಜಪ್ಪ ಗೌಡ, ಸಂಘಟನಾ ಕಾರ್ಯದರ್ಶಿ ವಿಜಯ್ ಕುಮಾರ್, ಖಜಾಂಜಿ ಶಿವ್‌ಕುಮಾರ್, ಬಿ. ಎಂ. ಎಸ್. ಸಿ. ಭಾರತೀಯ ಮಜ್ದೂರ್ ಸಂಘ ರಾಜ್ಯ ಉಪಾಧ್ಯಕ್ಷರು ವಾಸುದೇವ್, ರಾಜ್ಯ ಕಾರ್ಯದರ್ಶಿ ಶಾಂತಕುಮಾರ್, ಮಜ್ದೂರ್ ಮೈಸೂರು ಜಿಲ್ಲಾ ಅಧ್ಯಕ್ಷರು ಗುರುರಾಜ್, ರೈತ ಮುಖಂಡರು ಶ್ರೀರಂಗಪಟ್ಟಣ, ನಂಜುಂಡೇಗೌಡ್ರು, ಬಿಜೆಪಿ ಮುಖಂಡರು ಶ್ರೀಧರ್ ಸೇರಿದಂತೆ ಹಲವಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular