ಮೈಸೂರು: ನಗರದಲ್ಲಿ ಕಳೆದ ಎರಡು ತಿಂಗಳಿಂದ ವಿದ್ಯಾರಣ್ಯಪುರಂನಲ್ಲಿ 4 ಸರಗಳ್ಳತನಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ವಿದ್ಯಾರಣ್ಯಪುರಂ ಸುತ್ತಮುತ್ತ ಮಾಜಿ ನಗರಪಾಲಿಕ ಸದಸ್ಯರಾದ ಮ ವಿ ರಾಮಪ್ರಸಾದ್ ನೇತೃತ್ವದಲ್ಲಿ ವಿದ್ಯಾರಣ್ಯಪುರಂನ ಅಂದಾನಿ ಸರ್ಕಲ್ ನಿಂದ ಮನೆ, ಮನೆಗೆ ತೆರಳಿ ಮಹಿಳೆಯರು, ವೃದ್ಧರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆರಂಭಿಸಿದ್ದಾರೆ.

ವಿದ್ಯಾರಣ್ಯಂ ಪೊಲೀಸ್ ಠಾಣೆ, ಮತ್ತು ಮಾ ವಿ ರಾಮಪ್ರಸಾದ್ ಸ್ನೇಹ ಬಳಗ ವತಿಯಿಂದ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಕರಪತ್ರಗಳನ್ನು ವಿತರಿಸಿದರು. ಅಲ್ಲದೇ, ಜನರು ಹೆಚ್ಚಾಗಿ ಸೇರುವ ಉದ್ಯಾನ, ಯೋಗಾಸನ ಕೇಂದ್ರಗಳು, ವಾಯು ವಿಹಾರ ಮಾಡುವ ಸ್ಥಳಗಳ ಬಳಿ ತೆರಳಿ ಸರಗಳ್ಳತನದಿಂದ ಪಾರಾಗುವುದು ಹೇಗೆ ಎಂಬುದರ ಬಗ್ಗೆ ಜನರಿಗೆ ಮಾಹಿತಿ ನೀಡಿದರು.
ನಂತರ ಮಾತನಾಡಿದ ಮಾಜಿನಗರ ಪಾಲಿಕೆ ಸದಸ್ಯರಾದ ಮಾವಿ ರಾಮ್ ಪ್ರಸಾದ್ ಸರಗಳ್ಳರು ಹೆಚ್ಚಾಗಿ ಬೆಳಗ್ಗೆ ಹಾಗೂ ಸಂಜೆ ವೇಳೆಯೇ ಸಕ್ರಿಯವಾಗುವ ಕಾರಣ ಮಹಿಳೆಯರು ಹಾಗೂ ವೃದ್ಧರು ಹೊರಗೆ ಓಡಾಡುವಾಗ ಆಭರಣ ಪ್ರದರ್ಶನವನ್ನು ಮಾಡಬಾರದು. ಹಾಗೆ ಮಾಡುವುದರಿಂದ ಸರಗಳ್ಳರಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಯಾರಾದರೂ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರೆ ಪೊಲೀಸ್ ಸಹಾಯವಾಣಿ 100ಕ್ಕೆ ಕರೆ ಮಾಡಬೇಕು. ಒಂಟಿಯಾಗಿ ಓಡಾಡದೆ ಇಬ್ಬರಿಗಿಂತ ಹೆಚ್ಚಿನ ಜನರ ಗುಂಪಿನಲ್ಲಿ ಓಡಾಡಬೇಕು. ವಾಯು ವಿಹಾರ ಮಾಡುವಾಗ ನೆರೆಹೊರೆಯವರ ಜತೆ ಹೋಗಬೇಕು ಎಂದು ಜಾಗೃತಿ ಮೂಡಿಸಿ ಕರಪತ್ರಗಳನ್ನು ಹಂಚಲಾಗಿದೆ.
”ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಆದರೂ, ಅದನ್ನು ಮಹಿಳೆಯರು ಸರಿಯಾಗಿ ಅರ್ಥ ಮಾಡಿಕೊಳ್ಳದ ಕಾರಣ ಸರಗಳ್ಳತನ ನಿಯಂತ್ರಣ ಕಷ್ಟವಾಗುತ್ತಿದೆ. ಕಳ್ಳರಿಗೆ ಹಣ ಮಾಡಲು ಸರ ಅಪಹರಣ ಸುಲಭದ ದಾರಿಯಾಗಿದೆ,” ಹೇಳಿದರು.
ಈ ಜಾಗೃತಿ ಅಭಿಯಾನವು ಮುಂದಿನ ದಿನಗಳಲ್ಲಿ ಚಾಮುಂಡಿಪುರಂ ವಿದ್ಯಾರಣ್ಯಪುರಂ ಸೇರಿದಂತೆ ಪ್ರತಿಯೊಂದು ಪ್ರಮುಖ ವೃತದಲ್ಲಿ ಬೀದಿ ನಾಟಕ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು
ಸರಗಳ್ಳರ ವಿರುದ್ಧ ಕಠಿಣ ಕಾನೂನು ಶಿಕ್ಷೆ ವಿಧಿಸಬೇಕು, ಹಾಗೆಯೇ ಪೊಲೀಸ್ ಇಲಾಖೆ ಮೊಹಲ್ಲಾ ಗಳಲ್ಲಿ ಹೆಚ್ಚಿನ ಭದ್ರತೆಗಳನ್ನು ನೀಡಬೇಕು, ಹಾಗೂ ಪೊಲೀಸ್ ಇಲಾಖೆ ಪ್ರತಿ ಮೊಹಲ್ಲಾ ಗಳಲ್ಲಿ ಸರಗಳ್ಳತನದ ಜಾಗೃತಿ ಮೂಡಿಸಬೇಕು.
ಇದೇ ಸಂದರ್ಭದಲ್ಲಿ ಮಾಜಿನಗರ ಪಾಲಿಕಾ ಸದಸ್ಯರಾದ ಮ ವಿ ರಾಮಪ್ರಸಾದ್, ವಿದ್ಯಾ ಅರಸು,
ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ ಸಿಬ್ಬಂದಿಗಳದ ಬೇಬಿ, ರಾಜು ಎಚ್ ಸಿ, ಕಿರಣ್ ಕುಮಾರ್ಮಂಜುನಾಥ್, ಸೋಮೇಶ್, ಧರ್ಮೇಂದ್ರ, ಶಿವು, ಮಂಜುಳಾ, ದೇವೇಂದ್ರ ಸ್ವಾಮಿ, ದೇವಲಾಂಬಿಕ, ಸೂರ್ಯ, ಮುರುಗೇಶ್, ಮಹೇಶ್, ದ್ರಾಕ್ಷಾಯಿಣಿ, ಮಧು ಕುಮಾರ್, ಗುರುಮಲ್ಲಪ್ಪ, ರವಿಶಂಕರ್ ಹಾಗೂ ಇನ್ನಿತರರು ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು