ಮಂಗಳೂರು (ದಕ್ಷಿಣ ಕನ್ನಡ): ಧರ್ಮಸ್ಥಳದಲ್ಲಿ ಮೃತದೇಹ ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಎಸ್ಐಟಿ ಶೋಧ ನಡೆಸುವ ಸಾಧ್ಯತೆ ಇದ್ದು, ರೇಡಾರ್ ಯಂತ್ರದ ಬಳಕೆಯೂ ಅಂದಾಜಿಸಲಾಗಿದೆ.
ಆ.9ರಂದು ಬಾಹುಬಲಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ 16 ಮತ್ತು 16-ಅ ಗುರುತಿಸಿದ ಜಾಗಗಳಲ್ಲಿ ಶೋಧ ನಡೆದಿದೆ. ಆ.10ರಂದು ಯಾವುದೇ ಕಾರ್ಯಾಚರಣೆ ನಡೆದಿರಲಿಲ್ಲ. ದೂರುದಾರ ಗುರುತಿಸಿದ 13ನೇ ಸ್ಥಳದಲ್ಲಿ ಶೋಧ ನಡೆಯಬಹುದು. ಇಲ್ಲವಾದಲ್ಲಿ ಮತ್ತೆ ಹೊಸ ಸ್ಥಳವನ್ನು ಅನಾಮಿಕ ಗುರುತಿಸಿದಲ್ಲಿ 17ನೇ ಸ್ಥಳದ ಶೋಧ ನಡೆಯುವ ಸಾಧ್ಯತೆಇದೆ.