Monday, September 15, 2025
Google search engine

Homeರಾಜ್ಯಸುದ್ದಿಜಾಲಸೈಬರ್ ವಂಚನೆ ತಡೆಯಲು ಜಾಗೃತಿಯೇ ಅಸ್ತ್ರ : ಸೈಬರ್ ಕ್ರೈಮ್ ಎಸಿಪಿ ಸ್ನೇಹಾ ರಾಜ್

ಸೈಬರ್ ವಂಚನೆ ತಡೆಯಲು ಜಾಗೃತಿಯೇ ಅಸ್ತ್ರ : ಸೈಬರ್ ಕ್ರೈಮ್ ಎಸಿಪಿ ಸ್ನೇಹಾ ರಾಜ್

ಮೈಸೂರು: ಬಜಾಜ್ ಫೈನಾನ್ಸ್ ಲಿಮಿಟೆಡ್, ಡಿಜಿಟಲ್ ಬಳಕೆದಾರರಿಗೆ ವಿವಿಧ ರೀತಿಯ ಬೆದರಿಕೆಗಳು ಮತ್ತು ಹಣಕಾಸನ್ನು ಸಂರಕ್ಷಿಸಲು ಉತ್ತಮ ಅಭ್ಯಾಸಗಳ ಬಗ್ಗೆ ತಿಳಿಸುವ ಉದ್ದೇಶದಿಂದ ನಗರದ ಹೋಟೆಲ್ ಸಂದೇಶ್ ದಿ ದಿ ಪ್ರಿನ್ಸ್ ನಲ್ಲಿ ‘ನಾಕೌಟ್ ಡಿಜಿಟಲ್ ಫ್ರಾಡ್’ ಸೈಬರ್ ವಂಚನೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರು ಸೈಬರ್ ಕ್ರೈಮ್ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಸ್ನೇಹಾ ರಾಜ್ ಎನ್ , ನಿವೃತ್ತ ಎಸಿಪಿ ಜಿ.ಎನ್. ಮೋಹನ್ ಮತ್ತು ನಿವೃತ್ತ ಡಿವೈಎಸ್ಪಿ ರಮೇಶ್ ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿರುವ ವಿವಿಧ ರೀತಿಯ ವಂಚನೆಗಳ ಬಗ್ಗೆ ಅಧಿಕಾರಿಗಳು ಬೆಳಕು ಚೆಲ್ಲಿದರು. ನಕಲಿ ಒಟಿಪಿ ವಂಚನೆ, ಫಿಶಿಂಗ್ ವಂಚನೆ, ಡಿಜಿಟಲ್ ಬಂಧನ, ಸ್ಟಾಕ್ ಮಾರ್ಕೆಟ್ ಇನ್ವೆಸ್ಟ್ಮೆಂಟ್ ವಂಚನೆ, ಪಿಂಚಣಿ ವಂಚನೆ ಮತ್ತು ಇತರ ವಂಚನೆಗಳ ಬಗ್ಗೆ ಪ್ರೇಕ್ಷಕರಿಗೆ ಮಾಹಿತಿ ನೀಡಲಾಯಿತು.

“ಮೈಸೂರಿನಲ್ಲಿ ಸೈಬರ್ ವಂಚನೆ ವೇಗವಾಗಿ ಹೆಚ್ಚುತ್ತಿದೆ, ವಂಚನೆಗೊಳಗಾದವರು ಇದರಿಂದ ಹೊರಬರಲು ಕಷ್ಟಪಡುತ್ತಿದ್ದಾರೆ” ಎಂದು ಎಸಿಪಿ ಸ್ನೇಹಾ ರಾಜ್ ಹೇಳಿದರು. “2025 ರಲ್ಲಿ ಮಾತ್ರವೇ ವರದಿಯಾದ 128 ಪ್ರಕರಣಗಳಿಂದ ರೂ. 28 ಕೋಟಿಗೂ ಹೆಚ್ಚು ಹಣವನ್ನು ವಂಚಕರು ದೋಚಿದ್ದಾರೆ, ಆದರೆ ರಿಕವರಿ ಪ್ರಯತ್ನಗಳಿಂದ ಕೇವಲ ರೂ. 3 ಕೋಟಿ ಮಾತ್ರ ಹಿಂಪಡೆಯಲು ಸಾಧ್ಯವಾಗಿದೆ” ಎಂದು ತಿಳಿಸಿದರು.

ಸೈಬರ್ ಜಾಗೃತಿಯ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದ ಅವರು ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಎರಡು ಪ್ರಕರಣಗಳ ಕುರಿತು ಮಾಹಿತಿ ಹಂಚಿಕೊಂಡರು . ಒಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬರು ಡಿಜಿಟಲ್ ಅರೆಸ್ಟ್ ಮೂಲಕ ಸುಮಾರು ರೂ. 3 ಕೋಟಿ ಕಳೆದುಕೊಂಡರು. ಮತ್ತೊಂದು ಪ್ರಕರಣದಲ್ಲಿ ಹೂಡಿಕೆ ಹೆಸರಲ್ಲಿ ಮಹಿಳೆಯೊಬ್ಬರು ರೂ. 35 ಲಕ್ಷ ಕಳೆದುಕೊಂಡಿದ್ದಾರೆ. ಸಾರ್ವಜನಿಕ ಜಾಗೃತಿಯ ಜೊತೆಗೆ ಪ್ರಕರಣ ನಡೆದ ತಕ್ಷಣವೇ ಪೋಲೀಸರ ಗಮನಕ್ಕೆ ತರುವುದು ಅತ್ಯಗತ್ಯ ಎಂದು ವಿವರಿಸಿದರು.

“ಸೈಬರ್ ವಂಚನೆಯ ಬಗ್ಗೆ ನಾಗರಿಕರು ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡುವ ಮೂಲಕ ತಕ್ಷಣ ವರದಿ ಮಾಡಬೇಕು. ತ್ವರಿತ ಕ್ರಮವು ವಂಚನೆಯ ವಹಿವಾಟುಗಳನ್ನು ಸ್ಥಗಿತಗೊಳಿಸಲು ಮತ್ತು ಅಪರಾಧಿಗಳನ್ನು ಬೆನ್ನಟ್ಟಲು ನಮಗೆ ಅನುವು ಮಾಡಿಕೊಡುತ್ತದೆ. ಈ ಹೆಚ್ಚುತ್ತಿರುವ ವಂಚನೆಗೆ ಸಾರ್ವಜನಿಕ ಜಾಗೃತಿಯೊಂದೇ ಶಕ್ತಿಶಾಲಿ ಅಸ್ತ್ರ” ಎಂದು ಹೇಳಿದರು.

ಬಿಎಫ್ಎಲ್‌ ನ ವಕ್ತಾರ ವೆಂಕಟೇಶನ್ ವಿಎಸ್ ಮಾತನಾಡಿ ಭಾರತೀಯ ರಿಸರ್ವ್ ಬ್ಯಾಂಕ್ ನ 2024ರ ವಂಚನೆ, ಅಪಾಯ ನಿರ್ವಹಣೆ ಕುರಿತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಗೆ ಇವರುವ ಮಾರ್ಗಸೂಚಿಯಂತೆ ನಾಕೌಟ್ ಡಿಜಿಟಲ್ ಫ್ರಾಡ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮತ್ತು ನಾಗರಿಕರೊಂದಿಗೆ ಸಂವಹನಗಳ ಮೂಲಕ ನಿರಂತರವಾಗಿ ಆನ್ ಲೈನ್ ಮತ್ತು ಆಫ್ ಲೈನ್ ಸಲಹೆಗಳನ್ನು ನೀಡುತ್ತಿದ್ದೇವೆ. ಪ್ರತಿಯೊಬ್ಬರೂ ಸೈಬರ್ ವಂಚನೆಗಳಿಂದ ಸುರಕ್ಷಿತವಾಗಿರಲು ಜಾಗೃತಿ ಮೂಡಿಸುತಿದ್ದೇವೆ. ನಾಗರಿಕರು ಅನುಮಾನಾಸ್ಪದ ಇಮೇಲ್ಗಳು, ಎಸ್ಎಂಎಸ್ಗಳು, ಲಿಂಕ್ಗಳು, ಕ್ಯೂಆರ್ ಕೋಡ್ಗಳನ್ನು ಕ್ಲಿಕ್ ಮಾಡುವುದು ಮತ್ತು ಅಪರಿಚಿತ ಮೂಲಗಳಿಂದ ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡುವುದನ್ನು ನಿಲ್ಲಿಸಬೇಕು. ದೇಶದ 100 ಪ್ರಮುಖ ನಗರಗಳಲ್ಲಿ ಡಿಜಿಟಲ್ ಜಾಗೃತಿ ಅಭಿಯಾನ ಕಾರ್ಯಕ್ರಮಗಳ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular