Tuesday, November 4, 2025
Google search engine

Homeಸ್ಥಳೀಯದಸರಾ ಯಶಸ್ವಿ ಹಿನ್ನೆಲೆ ಅಧಿಕಾರಿಗಳಿಗೆ ಅಭಿನಂದನೆ

ದಸರಾ ಯಶಸ್ವಿ ಹಿನ್ನೆಲೆ ಅಧಿಕಾರಿಗಳಿಗೆ ಅಭಿನಂದನೆ

ಮೈಸೂರು : ಮೈಸೂರಿನಲ್ಲಿ 2025ನೇ ನಾಡಹಬ್ಬ ದಸರಾವನ್ನು ಶಾಂತಿಯುತವಾಗಿ, ಅದ್ದೂರಿಯಾಗಿ ನಡೆದುಕೊಟ್ಟ ಜಿಲ್ಲಾ ಮಟ್ಟದ ಅಧಿಕಾರಿಗಳಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್ ಸಿ ಮಹದೇವಪ್ಪ ಅವರು ಅಭಿನಂದಿಸುವ ಸಮಾರಂಭ ಹಮ್ಮಿಕೊಂಡಿದ್ದರು.

ಈ ಸಂದರ್ಭದಲ್ಲಿ ಉದ್ಯಮಿ ಬಾಲಾಜಿ ಹೋಟೆಲ್ ಮಾಲೀಕ ಬಾಪೂಜಿ ಅವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ,ಸಮಾಜ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್. ಸಿ ಮಹದೇವಪ್ಪ ಅವರನ್ನು ಸನ್ಮಾನಿಸಿ ಗೌರವಿಸಿದರು.

ಜಿಲ್ಲಾಧಿಕಾರಿ ರಶ್ಮಿಕಾಂತ್ ರೆಡ್ಡಿ, ಜಿಲ್ಲಾ ಪೊಲೀಸ್ ಅಧಿಕಾರಿ ವಿಷ್ಣುವರ್ಧನ್. ಡಿಎಚ್ಒ ಕುಮಾರಸ್ವಾಮಿ, ಡಿಡಿಪಿಐ ರಾಮೇಗೌಡ, ತಹಶೀಲ್ದಾರ್ ಮಹೇಶ್ ಕುಮಾರ್, ಶಿಕ್ಷಕ ಯಶ್ವಂತ್ ಕುಮಾರ್, ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular