Tuesday, May 20, 2025
Google search engine

Homeರಾಜ್ಯಲಸಿಕೆ ಪಡೆದ ಮರುದಿನ 2 ವರ್ಷದ ಮಗು ಸಾವು

ಲಸಿಕೆ ಪಡೆದ ಮರುದಿನ 2 ವರ್ಷದ ಮಗು ಸಾವು

ಧಾರವಾಡ:  ಅಂಗನವಾಡಿ ಕೇಂದ್ರದ ಸಿಬ್ಬಂದಿಯಿಂದ ಲಸಿಕೆ ಪಡೆದ ಮರುದಿನ 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿ ನಗರದ ಉಣಕಲ್‌ ನಲ್ಲಿ ನಡೆದಿದೆ.‌

ಹುಬ್ಬಳ್ಳಿಯ ಸಾಯಿನಗರದ ಚಿರು ಮೃತ ಬಾಲಕ. 

ಪ್ರತಿ ಗುರುವಾರ ಮಕ್ಕಳಿಗೆ ಆರೋಗ್ಯ ಇಲಾಖೆಯಿಂದ ಲಸಿಕೆ ಹಾಕಲಾಗುತ್ತದೆ. ತಮಗೆ ಲಸಿಕೆ ಹಾಸಿಕಲು ಇಷ್ಟವಿಲ್ಲ ಎಂದರೂ ಆಶಾ ಕಾರ್ಯಕರ್ತೆಯರು ಬಲವಂತವಾಗಿ ಲಸಿಕೆ ಹಾಕಿಸಿದ್ದಾರೆ ಎಂದು ಹೇಳಲಾಗಿದೆ.

ಗುರುವಾರ ಆಟವಾಡುತ್ತಿದ್ದ ಮಗು ಹಠಾತ್ ಸಾವನ್ನಪ್ಪಿದೆ.  ಗುರುವಾರ ಮರಣೋತ್ತರ ಪರೀಕ್ಷೆಗೆ ಒತ್ತಾಯಿಸಿದ ಬಾಲಕನ ಕುಟುಂಬದವರು ಶುಕ್ರವಾರ ಮರಣೋತ್ತರ ಪರೀಕ್ಷೆಗೆ ನಿರಾಕರಿಸಿ ಶವವನ್ನು ತಮ್ಮೊಂದಿಗೆ ಕೊಂಡೊಯ್ದರು.

ಅದೇ ಲಸಿಕೆಯನ್ನು ಇತರ ಮಕ್ಕಳಿಗೆ ನೀಡಲಾಗಿದೆ, ಅವರಲ್ಲಿ ಯಾರಿಗೂ  ಯಾವುದೇ ತೊಂದರೆ ಆಗಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಸಾವಿಗೆ ಕಾರಣ ತಿಳಿದುಬಂದಿಲ್ಲ, ಆದರೆ ಘಟನೆಯ ಬಗ್ಗೆ ತನಿಖೆ ನಡೆಸಲು ಇಲಾಖೆ ಸಿದ್ಧವಾಗಿದೆ ಎಂದು ಹೇಳಿದೆ.

ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಡಾ.ಶಶಿ ಪಾಟೀಲ ಮಾತನಾಡಿ, ಬುಧವಾರವೇ ಲಸಿಕೆ ಹಾಕಲಾಗಿದ್ದು, ಗುರುವಾರ ಮಗು ಆರೋಗ್ಯವಾಗಿದ್ದು, ಇತರ ಮಕ್ಕಳೊಂದಿಗೆ ಆಟವಾಡುತ್ತಿದೆ ಎಂದು ತಿಳಿದು ಬಂದಿದೆ. ಏಕಾಏಕಿ ಕೆಳಗೆ ಬಿದ್ದ ಬಾಲಕನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿನ ವೈದ್ಯರು ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿಸಿದರು.

ನಾವು ಮರಣೋತ್ತರ ಪರೀಕ್ಷೆ ನಡೆಸಲು ಒಪ್ಪಿಕೊಂಡೆವು. ಆದರೆ ಶುಕ್ರವಾರ ಬೆಳಗ್ಗೆ ಬಾಲಕನ ಕುಟುಂಬದವರು ನಿರಾಕರಿಸಿದರು ಮತ್ತು ಶವವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular