Thursday, January 29, 2026
Google search engine

Homeರಾಜ್ಯಸುದ್ದಿಜಾಲಹಿಂದೂ ಧರ್ಮದ ಕುರಿತು ಜಾಗೃತಿ : ಫೆಬ್ರವರಿ 1ರಂದು ಸಮ್ಮೇಳನ

ಹಿಂದೂ ಧರ್ಮದ ಕುರಿತು ಜಾಗೃತಿ : ಫೆಬ್ರವರಿ 1ರಂದು ಸಮ್ಮೇಳನ

ಬಾಗೇಪಲ್ಲಿ : ಹಿಂದೂ ಸಮಾಜವು ಕೇವಲ ಧರ್ಮವಲ್ಲದೆ ಸಮಾಜದ ಏಕತೆ, ಸಂಸ್ಕøತ ಉಳಿವು ಮತ್ತು ಎಲ್ಲರಲ್ಲೂ ವಿಶಾಲ ಮನೋಭಾವ ಮೂಡಿಸುವ ಧರ್ಮವಾಗಿದ್ದು, ಭಾರತದ ಅಖಂಡತೆ ಕಾಪಾಡುವ ಆಶಾ ಭಾವನೆಯೂ ಹೊಂದಿದೆ. ಇದೇ ನಿಟ್ಟಿನಲ್ಲಿ ಹಿಂದೂ ಧರ್ಮದ ಜಾಗೃತಿ ಮೂಡಿಸುವ ಉದ್ದೇಶದಿಂದ ಫೆಬ್ರವರಿ 1 ರಂದು ಅದ್ದೂರಿಯಾಗಿ ಹಿಂದೂ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಬಾಗೇಪಲ್ಲಿ ತಾಲೂಕು ಹಿಂದೂ ಸಮ್ಮೇಳನ ಆಯೋಜನೆ ಸಮಿತಿ ಅಧ್ಯಕ್ಷ ಕೆ.ನರಸಿಂಹಪ್ಪ ತಿಳಿಸಿದರು.

ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಸಮ್ಮೇಳನಕ್ಕೆ ಸಂಪೂರ್ಣ ತಯಾರಿ ಮಾಡಲಾಗಿದ್ದು, ಅಂದು ಬೆಳಿಗ್ಗೆ 11 ಗಂಟೆಗೆ ನ್ಯಾಷನಲ್ ಕಾಲೇಜು ನಿಂದ ಸಮ್ಮೇಳನದ ಶೋಭಾಯಾತ್ರೆಯ ಭವ್ಯ ಮೆರವಣಿಗೆ ಪ್ರಾರಂಭವಾಗಲಿದೆ.

ಈ ಮೆರವಣಿಗೆಯಲ್ಲಿ ಎತ್ತಿನ ಗಾಡಿಗಳು, ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ಡೊಳ್ಳು ಕುಣಿತ ಹಾಗೂ ವಾದ್ಯಗಳ ಮೂಲಕ ಎತ್ತಿನ ಗಾಡಿಗಳಲ್ಲಿ ಭಾರತ ಮಾತೆಯ ಭಾವಚಿತ್ರ ಮತ್ತು ವಿವಿಧ ಮಹಾ ಪುರುಷರ ಭಾವಚಿತ್ರಗಳ ಕಟೌಟ್‌ಗಳನ್ನು ಪ್ರದರ್ಶಿಸಲಾಗುವುದು. ಅಲ್ಲದೆ ಈ ಮೆರವಣಿಗೆಯಲ್ಲಿ ಮಠಾಧೀಶರು, ಗಣ್ಯರು, ಸಾರ್ವಜನಿಕರು, ಮಹಿಳೆಯರು ಸೇರಿದಂತೆ ಹಲವರು ಈ ವೇಳೆ ಪಾಲ್ಗೊಳ್ಳಲಿದ್ದಾರೆ. ನಂತರ ಮೆರವಣಿಗೆ ಸಮ್ಮೇಳನ ನಡೆಯುವ ಕೆ.ಹೆಚ್.ಬಿ. ಲೇಔಟ್ ಟೊಮೆಟೊ ಮಾರುಕಟ್ಟೆ ಆವರಣದಲ್ಲಿ ಸಮಾಪ್ತಿಗೊಳ್ಳುವುದು ಎಂದು ತಿಳಿಸಿದರು.

ನಂತರ ಮಧ್ಯಾಹ್ನ 1 ಗಂಟೆಗೆ ನಡೆಯುವ ಸಮ್ಮೇಳನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಲು ಕೈವಾರ ಕ್ಷೇತ್ರ ಧರ್ಮಾಧಿಕಾರಿಗಳಾದ ಎಂ.ಆರ್.ಜಯರಾಮ್ ದೇವಾನಂದ, ಡಾ.ಪುಷ್ಪಲತ.ಪಿ.ಜಿ, ಶ್ವೇತಾ ಗಂಜಮ್, ಎ.ಅಪ್ಪಯ್ಯ ಶ್ರೀನಿವಾಸ್ ಬಾಬು, ಬಂಗಾರು ಬದ್ರಿನಾರಾಯಣ, ಮುನಿರಾಮಯ್ಯ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದರು. ಕಾರ್ಯಕ್ರಮದ ನಂತರ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗುವುದು. ಈ ಸಮ್ಮೇಳನದಲ್ಲಿ ಸುಮಾರು 10 ಸಾವಿರ ಜನರು ಸೇರುವ ನೀರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮುನಿರಾಮಯ್ಯ, ವೈ.ಶ್ರೀನಿವಾಸ್ ರೆಡ್ಡಿ, ಆರ್.ಪ್ರತಾಪ್ ಹಾರ್ಡವೇರ್ ಕೃಷ್ಣಪ್ಪ, ಬಂಗಾರು ಬದ್ರಿ ನಾರಾಯಣ ಹಾಗೂ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular