Saturday, June 7, 2025
Google search engine

Homeರಾಜ್ಯಸುದ್ದಿಜಾಲಆಧ್ಯಾತ್ಮ, ಪ್ರೀತಿ, ಮಾನವೀಯತೆ ಪ್ರತಿಬಿಂಬಿಸಿದ ಕನ್ನಡದ ಸಜ್ಜನ ಕವಿ ಎಚ್.ಎಸ್.ವಿ ಗೆ ನುಡಿ-ಗಾನ ನಮನ

ಆಧ್ಯಾತ್ಮ, ಪ್ರೀತಿ, ಮಾನವೀಯತೆ ಪ್ರತಿಬಿಂಬಿಸಿದ ಕನ್ನಡದ ಸಜ್ಜನ ಕವಿ ಎಚ್.ಎಸ್.ವಿ ಗೆ ನುಡಿ-ಗಾನ ನಮನ

ಚಾಮರಾಜನಗರ: ಪ್ರಸಿದ್ಧ ಕವಿ ಹೆಚ್ ಎಸ್ ವೆಂಕಟೇಶ್ ಮೂರ್ತಿ ರವರ ಭಾವಗೀತೆ ಗಳಲ್ಲಿ ಆಧ್ಯಾತ್ಮ, ಪ್ರೀತಿ,ಕರುಣೆ, ಭಾವನೆ, ಪ್ರಕೃತಿ, ಮಾನವ ಸಂಬಂಧ, ನೋವು ಹತ್ತುಹಲವು ಸೂಕ್ಷ್ಮತೆಯನ್ನು ಅರಿಯಬಹುದು. ಕನ್ನಡ ಸಾಹಿತ್ಯ, ಸುಗಮ ಸಂಗೀತ, ಭಾವನಾಜೀವಿಗಳಿಗೆ ಅಪಾರ ನೋವು ಹಾಗು ನಷ್ಟವಾಗಿದೆ ಎಂದು ಸಂಸ್ಕೃತಿ ಚಿಂತಕ ,ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಸಭಾಂಗಣದಲ್ಲಿ ಜರುಗಿದ ಹೆಚ್ ಎಸ್ ವಿ ನುಡಿ ಹಾಗು ಗಾನ ನಮನ ಕಾರ್ಯಕ್ರಮದಲ್ಲಿ.ಮಾತನಾಡಿ ಎಚ್ಎಸ್ ವೆಂಕಟೇಶ್ ಮೂರ್ತಿರವರು ಕವಿಗಳಾಗಿ, ಸಾಹಿತಿಗಳಾಗಿ ,ವಿಮರ್ಶ ಕ, ಕಾದಂಬರಿಕಾರರಾಗಿ ,ನಾಟಕಕಾರರು ಹಾಗೂ ಚಲನಚಿತ್ರ, ಕಿರುತರೆ ಗಳ ಮೂಲಕ ಜನಪ್ರಿಯರಾಗಿ ಎಂಟು ದಶಕಗಳ ಕಾಲ ಭಾವಗೀತೆಗಳ ಕವಿಯಾಗಿ ಜನರ ಮನದಲ್ಲಿ ಉಳಿದ ಸಾತ್ವಿಕ ಸಜ್ಜನರು. ಶಿಕ್ಷಣ, ಬೋಧನೆ, ಸಾಹಿತ್ಯಲೋಕದ ವಿಶೇಷ ವ್ಯಕ್ತಿಯಾಗಿ ಆದರ್ಶ ಜೀವನ ನಡೆಸಿದವರು. ಇಷ್ಟು ಕಾಲ ಒಟ್ಟಿಗಿದ್ದು , ಎಷ್ಟು ಬೆರೆತರು ಅರಿತವೇನು ನಾವು. ನಮ್ಮ ಅಂತರಾಳವ, ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಗೀತೆಗಳ ಸಾರವನ್ನು ಮಾನವ ಅರಿತರೆ ಅಧ್ಯಾತ್ಮ ಜೀವನ ಹಾಗೂ ನೆಮ್ಮದಿಯ ಜೀವನವನ್ನು ನಾವು ಕಾಣಬಹುದು. ಇವರ ಮುಕ್ತ ಮುಕ್ತ ಶೀರ್ಷಿಕೆಯು ನಾಡಿನ ಮನೆ ಮಾತಾಗಿರುವುದನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಬಿಕೆ ಆರಾಧ್ಯರವರು ಎಚ್ಎಸ್ ವೆಂಕಟೇಶ್ ಮೂರ್ತಿ ಅವರ ಜೀವನ ಮತ್ತು ಬದುಕು ಕನ್ನಡ ಸಾಹಿತ್ಯದ ಚಿಂತನೆಗಳನ್ನು ಸಭೆಗೆ ಪರಿಚಯಿಸಿ ಎಚ್ ಎಸ್ ವಿ ರವರ ಮರಣವು ಕನ್ನಡ ಸಾಹಿತ್ಯ ಲೋಕದ ಕನ್ನಡಿಗರಿಗೆ ಅಪಾರ ನೋವನ್ನು ತಂದಿರುವುದು ನಿಜವಾದರೂ, ಕಾಲಘಟ್ಟದಲ್ಲಿ ಅವರ ಸಾಹಿತ್ಯದಿಂದ ನಾವು ನಮ್ಮ ಜೀವನವನ್ನು ಶ್ರೇಷ್ಠತೆಗೆ ಮತ್ತು ಜೀವನ ಮುಕ್ತಿ ,ಸರಳತೆ, ಸೌಂದರ್ಯ ಪ್ರಜ್ಞೆ ಹಾಗೂ ವಿವೇಕದಿಂದ ಬದುಕಲು ಸಾಧ್ಯವಿದೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ರವಿಚಂದ್ರ ಪ್ರಸಾದ್ ರವರು ಎಚ್ ಎಸ್ ವೆಂಕಟೇಶಮೂರ್ತಿ ಅವರ ಭಾವಗೀತೆಗಳನ್ನು ಹಾಡಿ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಬರಹಗಾರ ಲಕ್ಷ್ಮಿ ನರಸಿಂಹ, ಕನ್ನಡ ಸಾಹಿತ್ಯ ಪರಿಷತ್ತಿನ ಸರಸ್ವತಿ, ಶಿವಲಿಂಗ ಮೂರ್ತಿ , ಕರ್ನಾಟಕ ಗಮಕ ಕಲಾ ಪರಿಷತ್ತಿನ ವಾಸಂತಿ ವಸುಪಾಲ್ ಇದ್ದರು.

RELATED ARTICLES
- Advertisment -
Google search engine

Most Popular