Wednesday, November 26, 2025
Google search engine

Homeಅಪರಾಧಸೇಹಿತರಿಂದಲೇ ಯುವಕನ ಹತ್ಯೆ

ಸೇಹಿತರಿಂದಲೇ ಯುವಕನ ಹತ್ಯೆ

ಮೈಸೂರು: ಮೈಸೂರಿನ ಶಾಂತಿ ನಗರದಲ್ಲಿ ಮುಂಜಾನೆ 5.40 ರ ಸುಮಾರಿಗೆ ಘಟನೆ ನಡೆದಿದ್ದು, ಟೀ ಕುಡಿಯಲೆಂದು ಹೋದ ಯುವಕನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ. ಕೊಲೆಯ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರು ಸ್ನೇಹಿತರಿಂದಲೇ ಕೊಲೆಯಾಗಿದ್ದು, ಮದ್ಯ ವ್ಯಸನಿಯಾಗಿದ್ದ ಯುವಕರು ಪರಸ್ಪರ ಹೊಡೆದಾಡಿಕೊಂಡು ರಸ್ತೆಯಲ್ಲಿ ಅಟ್ಟಾಡಿಸಿ ಎದೆ ಹಾಗೂ ಬೆನ್ನಿನ ಭಾಗಕ್ಕೆ ಚಾಕುವಿನಿಂದ ಚುಚ್ಚಿ ಕೊಲೆಗೈದಿದ್ದಾರೆ.

19 ವರ್ಷದ ಸಯ್ಯದ್ ಸೂಫಿಯನ್ ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಶೋಚನೀಯ ಎಂಬಂತೆ ಕೊಲೆ ನಡೆಯುವ ವೇಳೆ ಯುವಕ ಸಹಾಯ ಬೇಡಿದರೂ ಯಾರು ಸಹಾಯ ಮಾಡದ ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದು, ರಸ್ತೆಯಲ್ಲೇ ನರಳಾಡಿ ಪ್ರಾಣ ಬಿಟ್ಟಿದ್ದಾನೆ.

ಈ ಸಂಬಂಧ ಉದಯಗಿರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular