ಇಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯರನ್ನು ಅವರ ನಿವಾಸ ಕೃಷ್ಣಾದಲ್ಲಿ ಭೇಟಿ ಮಾಡಿ ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಮನವಿ ಪತ್ರ ಸಲ್ಲಿಸಲಾಯಿತು.
ಬಹಳ ವರ್ಷಗಳಿಂದ ಕೊಡಗು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ ಆನೆ ಹುಲಿ ಹಾವಳಿ ಇರಬಹುದು, ಕೊಡಗು ವಿಶ್ವವಿದ್ಯಾಲಯ, ರೈತರ ಸಂಕಷ್ಟ ಇರಬಹುದು ಅದಕ್ಕಾಗಿ ವಿಶೇಷ ಪ್ಯಾಕೇಜ್ ನೀಡಲು ಮನವರಿಕೆ ಮಾಡಲಾಯಿತು.
ಇತ್ತೀಚೆಗೆ ಮೇ ತಿಂಗಳಿನಲ್ಲಿ ಸುರಿದ ಮಳೆಯಿಂದ ಭಾರೀ ಪ್ರಮಾಣದಲ್ಲಿ ಜನಸಾಮಾನ್ಯರು ಕಷ್ಟ ನಷ್ಟ ಅನುಭವಿಸುವಂತಾಗಿದೆ ವಿದ್ಯುತ್ ಕಂಬಗಳು, ಮರಗಳು ಬಿದ್ದಿದೆ , ರಸ್ತೆಗಳು ಹದಗೆಟ್ಟಿದೆ,ಪ್ರವಾಹ ಬಂದು ಮನೆಯ ಗೊಡೆಗಳು ಹಾನಿಯಾಗಿದೆ. ಜೊತೆಗೆ ರೈತರ ಫಸಲು ಉದುರಿ ತೋಟಗಳಲ್ಲಿ ನಷ್ಟ ಉಂಟಾಗಿದೆ. ಈ ಎಲ್ಲಾ ಅಂಶಗಳನ್ನು ಒಳಗೊಂಡು ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಆಮ್ ಆದ್ಮಿ ಪಕ್ಷದ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.