ಹೊಸದಿಲ್ಲಿ: ಗುಜರಾತ್ನ ಅಹ್ಮದಾಬಾದ್ನಲ್ಲಿ ಲಂಡನ್ಗೆ ತೆರಳುತ್ತಿದ್ದ ಟಾಟಾ ಗ್ರೂಪ್ ಮಾಲಕತ್ವದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 1 ಕೋಟಿ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ಟಾಟಾ ಗ್ರೂಪ್ ಘೋಷಿಸಿದೆ. ಈ ದುರಂತದಲ್ಲಿ 241 ಮಂದಿ ಸಾವಿಗೀಡಾಗಿದ್ದಾರೆ ಎಂದು ಎಪಿ(ಅಸೋಸಿಯೇಟೆಡ್ ಪ್ರೆಸ್) ಸುದ್ದಿ ಸಂಸ್ಥೆ ವರದಿ ಮಾಡಿದೆ.
ವಿಮಾನ ಪತನದಲ್ಲಿ ಗಾಯಗೊಂಡವರಿಗೆ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಭರಿಸಲಾಗುವುದು. ಜೊತೆಗೆ ವಿಮಾನ ಬಿದ್ದ ಬಿಜೆ ಮೆಡಿಕಲ್ ಹಾಸ್ಟೆಲ್ ಪುನರ್ನಿರ್ಮಾಣಕ್ಕೂ ಸಹಾಯ ಮಾಡುವುದಾಗಿ ಟಾಟಾ ಸನ್ಸ್ ನ ಅಧ್ಯಕ್ಷರಾದ ಎನ್. ಚಂದ್ರಶೇಖರನ್ ಹೇಳಿದ್ದಾರೆ.