Sunday, June 8, 2025
Google search engine

Homeಅಪರಾಧವಿಜಯೋತ್ಸವದ ವೇಳೆ ಕಬ್ಬನ್ ಪಾರ್ಕಿನ ಗಿಡ-ಮರಗಳಿಗೂ ಹಾನಿ: RCB ವಿರುದ್ಧ ಮತ್ತೊಂದು ದೂರು ದಾಖಲು

ವಿಜಯೋತ್ಸವದ ವೇಳೆ ಕಬ್ಬನ್ ಪಾರ್ಕಿನ ಗಿಡ-ಮರಗಳಿಗೂ ಹಾನಿ: RCB ವಿರುದ್ಧ ಮತ್ತೊಂದು ದೂರು ದಾಖಲು

ಬೆಂಗಳೂರು : ಆರ್ ಸಿಬಿ ವಿಜಯೋತ್ಸವದ ವೇಳೆ ಕಬ್ಬನ್ ಪಾರ್ಕಿನ ಗಿಡ ಮರಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ವಾಕರ್ಸ್ ಅಸೋಸಿಯೇಷನ್​​ ಇಂದು  ಕಮಿಷನರ್ ಗೆ ದೂರು ನೀಡಿದೆ.

ಆರ್​ಸಿಬಿ ವಿಜಯೋತ್ಸವಕ್ಕೆ ಬಂದ್ದಿದ್ದ ಜನರ ಕಾಲ್ತುಳಿತದಿಂದ ನೆಲಮಟ್ಟದ ಗಿಡಗಳು ನೆಲಸಮವಾಗಿವೆ. ಕಬ್ಬನ್​ ಪಾರ್ಕ್​​ನ ಗಿಡ, ಮರಗಳಿಗೂ ಹಾನಿ ಉಂಟಾಗಿದೆ. ಹೀಗಾಗಿ ವಾಕರ್ಸ್ ಅಸೋಸಿಯೇಷನ್​​ನಿಂದ ಇಂದು ಕಮಿಷನರ್ ​ಗೆ ದೂರು ನೀಡಿದೆ. ಆರ್ ಸಿಬಿ, ಡಿಎನ್ ಎ ಕಂಪನಿ, ಕೆ ಎಸ್ ಸಿಎ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದಿದ್ದ ಕಾಲ್ತುಳಿತದಿಂದ 11 ಜನರು ಸಾವನ್ನಪ್ಪಿದ್ದು, ವಿಧಾನಸೌಧ ಹಾಗೂ ಹೈಕೋರ್ಟ್ ಮುಂಭಾಗದಲ್ಲಿ ‌ಸೇರಿದ ಭಾರಿ ಜನರ ದಟ್ಟಣೆಯಿಂದಾಗಿ ಬ್ಯಾರಿಕೇಡ್​ಗಳು, ನೆಲಮಟ್ಟದ ಗಿಡಗಳನ್ನು ಜನ ತುಳಿದು ಹಾಕಿದ್ದಾರೆ. ಇದರಿಂದಾಗಿ ವಿಧಾನಸೌಧ ಮುಂಭಾಗದ ಗಿಡಗಳೆಲ್ಲಾ ಮುರಿದು ಒಣಗಿ ಹೋಗಿ ಸರ್ವನಾಶವಾಗಿದೆ.

RELATED ARTICLES
- Advertisment -
Google search engine

Most Popular