ಹುಣಸೂರು: ಪ್ರತಿನಿತ್ಯ ಒತ್ತಡದಲ್ಲಿ ಕೆಲಸ ಮಾಡುವ ಪತ್ರಕರ್ತರಿಗೆ ಅಪೋಲೊ ಆಸ್ಪತ್ರೆ ಉಚಿತ ಶಿಬಿರ ನೀಡುತ್ತಿರುವುದು ಅಮೂಲ್ಯವಾದದ್ದು ಎಂದು ತಾಲೂಕು ಕಾರ್ಯನಿರ್ವಾಣಾಧಿಕಾರಿ ಕೆ. ಹೊಂಗಯ್ಯ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಅಪೋಲೊ ಆಸ್ಪತ್ರೆ ವತಿಯಿಂದ ಹಮ್ಮಿಕೊಂಡಿದ್ದ ಪತ್ರಕರ್ತರಿಗೆ ಉಚಿತ ಹೃದಯ ತಪಾಸಣೆಯಲ್ಲಿ ಗಿಡಕ್ಕೆ ನೀರೆರೆದು ಮಾತನಾಡಿದ ಅವರು, ಪತ್ರಕರ್ತರು ನಿಷ್ಟುರತೆಯಿಂದ ಬದುಕುವುದರಿಂದ , ಅವರ ಬದುಕು ಕೂಡ ಕಷ್ಟಕರವಾಗಿದ್ದು, ಅವರಿಗೂ ಸರಕಾರದ ನೆರವಿನ ಅಗತ್ಯವಿದೆ ಎಂದರು.
ನಂತರ ಮಾತನಾಡಿದ ಅಪೋಲೊ ಆಸ್ಪತ್ರೆಯ ಹೃದಯ ತಜ್ಞ ಡಾ. ವಿನಯ್ ಎನ್. ಮುಗದೂರ್, ಪ್ರತಿ ಮನುಷ್ಯ ಆರೋಗ್ಯವಂತನಾಗಿ ಇರಬೇಕೆಂದರೆ, 40 ನಂತರ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಆಗ ಮಾತ್ರ ಮನುಷ್ಯನ ಆರೋಗ್ಯದ ಚಿತ್ರಣ ಅರಿವಾಗಲಿದೆ ಎಂದರು.
ಹೃದಯವಂತ ವ್ಯಕ್ತಿಯಾಗಿ ರೂಪಗೊಳ್ಳಬೇಕಾದರೆ, ಹೃದಯಘಾತಕ್ಕೆ ಒಳಗಾದ ನಾವುಗಳು ನಿಯಮಿತ ಆಹಾರ, ವ್ಯಾಯಾಮ, 45 ನಿಮಿಷಗಳ ನಡಿಗೆ ನಮಗೆ ಉತ್ತಮ ಆರೋಗ್ಯ ನೀಡಲಿದೆ. ಆದ್ದರಿಂದ ಎದೆ ನೋವು ಕಾಣಿಸಿಕೊಂಡ ಕೂಡಲೇ ನೀವೇ ಮಾತ್ರೆ ತೆಗದು ಕೊಳ್ಳುವ ಬದಲು ವೈದ್ಯರನ್ನು ಬೇಟಿಯಾಗಿ ಚಿಕಿತ್ಸೆ ಪಡೆಯುವುದು ಉತ್ತಮವೆಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಆರ್.ಕೃಷ್ಣ ಕುಮಾರ್ ಮಾತನಾಡಿ, ಪತ್ರಕರ್ತರು ಮತ್ತು ಕುಟುಂಬಕ್ಕೂ ಆರೋಗ್ಯ ಸಿಗಬೇಕು ಎಂಬ ಕಾರಣಕ್ಕೆ ವರುಷಕ್ಕೆ ಎರಡು ಮೂರು ಬಾರಿ ಉಚಿತ ಆರೋಗ್ಯ ಶಿಬಿರಕ್ಕೆ ಆದ್ಯತೆ ನೀಡಲಾಗುತ್ತಿದೆ. ಅದಕ್ಕೆ ಅಪೋಲೊ ಆಸ್ಪತ್ರೆ ಉಚಿತ ಶಿಬಿರ ನೀಡುತ್ತಿರುವುದು ನಮಗೆ ಸಹಕಾರಿಯಾಗಿದೆ ಎಂದರು.
ಶಿಬಿರದಲ್ಲಿ ಹುಣಸೂರಿನ ಅಪೋಲೊ ಆಸ್ಪತ್ರೆಯ ವ್ಯವಸ್ಥಾಪಕ ಕೇಶವ್, ಪತ್ರಕರ್ತರ ಸಂಘದ ಕಾರ್ಯದರ್ಶಿ ಶಂಕರ್, ಮೈ.ಜಿ.ಪ.ಕ.ಸಂಘದ ಕಾರ್ಯದರ್ಶಿ ದಾರಾ ಮಹೇಶ್, ಹಿರಿಯ ಪತ್ರಕರ್ತರಾದ ಎಚ್.ಕೆ.ಕೃಷ್ಣ, ಕೆ.ಕೃಷ್ಣ, ಕಾರ್ಯಕಾರಿ ಸಮಿತಿ ಸದಸ್ಯರಾದ ದಯಾಕರ್, ಅರುಣ್ ಕುಮಾರ್, ಮನುಕುಮಾರ್, ಯೋಗಾನಂದ್, ಗಜೇಂದ್ರ,ಜಯರಾಂ ಇದ್ದರು.