Monday, November 3, 2025
Google search engine

Homeರಾಜ್ಯಸುದ್ದಿಜಾಲಸಂಘಗಳು, ಟ್ರಸ್ಟ್‌ಗಳು ನೊಂದವರ ಪರವಾಗಿ ಕೆಲಸ ಮಾಡಬೇಕು: ಕೆ.ಜೆ. ಶ್ರೀಧರನಾಯಕ

ಸಂಘಗಳು, ಟ್ರಸ್ಟ್‌ಗಳು ನೊಂದವರ ಪರವಾಗಿ ಕೆಲಸ ಮಾಡಬೇಕು: ಕೆ.ಜೆ. ಶ್ರೀಧರನಾಯಕ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಸಮಾಜ ಸೇವೆ ಮಾಡುವ ಉದ್ಧೇಶದಿಂದ ಸಂಘಗಳು ಮತ್ತು ಟ್ರಸ್ಟ್ಗಳನ್ನು ರಚಿಸಿಕೊಳ್ಳುವವರು ಸದಾ ನೊಂದವರು ಮತ್ತು ಬಡವರ ಪರವಾಗಿ ಕೆಲಸ ಮಾಡಬೇಕು ಎಂದು ಬೆಂಗಳೂರು ಉಪವಿಭಾಗದ ವಾಣಿಜ್ಯ ಆಯುಕ್ತ ಕೆ.ಜೆ.ಶ್ರೀಧರನಾಯಕ ಹೇಳಿದರು.

ಪಟ್ಟಣದ ಸುಭಾಷ್‌ನಗರದಲ್ಲಿರುವ ಪರ್ವ ಫಂಕ್ಷನ್ ಹಾಲ್‌ನಲ್ಲಿ ನಡೆದ ಎಸ್‌ಬಿಎಂ ಗೆಳೆಯರ ಬಳಗ ಚಾರಿಟಬಲ್ ಟ್ರೆಸ್ಟ್ ಉದ್ಘಾಟಿಸಿ ಮಾತನಾಡಿದ ಅವರು ಉಳ್ಳವರು ನೊಂದವರಿಗೆ ಮಾಡುವ ಸಹಾಯ ಶಾಶ್ವತವಾಗಿರುತ್ತದೆ ಎಂದರು.

ಕಳೆದ 30 ವರ್ಷಗಳ ಹಿಂದೆ ಪಟ್ಟಣದ ಮಧುವನಹಳ್ಳಿಯಲ್ಲಿರುವ ಟಿ.ಮರಿಯಪ್ಪ ವಿದ್ಯಾ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಜನಸೇವೆ ಮಾಡುವ ಉದ್ಧೇಶದಿಂದ ರಚಿಸಿಕೊಂಡಿರುವ ಚಾರಿಟಬಲ್ ಟ್ರಸ್ಟ್ ಇತರರಿಗೆ ಮಾದರಿಯಾಗಿದ್ದು, ನಿಮ್ಮ ಎಲ್ಲಾ ಜನಮುಖಿ ಕಾರ್ಯಗಳಿಗೆ ನಾನು ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.

ಟಿ.ಮರಿಯಪ್ಪ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರುವ ಸಾವಿರಾರು ವಿದ್ಯಾರ್ಥಿಗಳು ಸಮಾಜದ ಮುಖ್ಯವಾಹಿನಿಗೆ ಬಂದು ಉತ್ತಮ ಬದುಕು ಕಟ್ಟಿಕೊಂಡಿದ್ದು, ಅವರೆಲ್ಲರೂ ತಾವು ಓದಿದ ಶಾಲೆಯ ಋಣ ತೀರಿಸಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಟ್ರಸ್ಟ್ನ ವತಿಯಿಂದ ವಿಶೇಷ ಚೇತನರಿಗೆ ವೈದ್ಯಕೀಯ ಸಲಕರಣೆ ಮತ್ತು ಸಹಾಯದ ಪರಿಕರಗಳನ್ನು ವಿತರಣೆ ಮಾಡಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಬ್ಯಾಗು ಹಾಗೂ ಪಾಠೋಪಕರಣಗಳನ್ನು ನೀಡಿ ವಿಕಲಚೇತನರಿಗೆ ಆಹಾರದ ಕಿಟ್ ಕೊಡಲಾಯಿತು.

ಟ್ರೆಸ್ಟ್ ಕಾರ್ಯದರ್ಶಿ ಎಡತೊರೆ ಕೆ.ಲೋಕೇಶ್ ಮಾತನಾಡಿ ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಟ್ಟಿಗೆ ಸೇರಿ ನೊಂದವರು ಮತ್ತು ಸಂಕಷ್ಟಕ್ಕೀಡಾದವರ ಸೇವೆ ಮಾಡಲು ನಿರ್ಧಾರ ಮಾಡಿದ್ದು, ನಮ್ಮೊಂದಿಗೆ ಸಮಾಜದ ಸರ್ವರೂ ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.

ಮೈಸೂರಿನ ಯುವರಾಜ ಕಾಲೇಜಿನ ಪ್ರಾಧ್ಯಾಪಕಿ ಡಾ.ಕೋಕಿಲಾ, ಹಂಪಾಪುರ ಸುಭಾಷ್.ಎಂ.ರಾವ್ ಮೆಮೋರಿಯಲ್ ಟ್ರಸ್ಟ್ನ ಸ್ವರೂಪರಾಣಿ, ಮೈಸೂರಿನ ಶಕ್ತಿಧಾಮ ಟ್ರೇಸ್ಟ್ ಪದಾಧಿಕಾರಿಗಳಾದ ಲಕ್ಷ್ಮಿ, ಉಷಾ ಮಾತನಾಡಿದರು.

ಟ್ರಸ್ಟ್ ಗೌರವಾಧ್ಯಕ್ಷ ಹೆಚ್.ಮಂಜುನಾಥ್, ಅಧ್ಯಕ್ಷ ಕೆ.ಎಸ್.ರಾಘವೇಂದ್ರ, ಉಪಾಧ್ಯಕ್ಷರಾದ ಕೆ.ಆರ್.ಯೋಗೇಶ್, ಎಸ್.ಆರ್.ಶಿವಕುಮಾರ್, ಪ್ರಧಾನಕಾರ್ಯದರ್ಶಿ ಕೆ.ಎನ್.ಪ್ರಶಾಂತ್, ಕಾರ್ಯದರ್ಶಿ ಮಹಮದ್‌ಮುಜಾಮಿಲ್, ಸಹಕಾರ್ಯದರ್ಶಿ ಜಿ.ಎಸ್.ಪ್ರಸನ್ನ, ಖಜಾಂಚಿ ಸಿ.ಜೆ.ಸುಧೀಶ್‌ಕುಮಾರ್, ಗೌರವ ಸಲಹೆಗಾರರಾದ ಪಿ.ಜಗದೀಶ್, ಕೃಷ್ಣ, ಕಾನೂನು ಸಲಹೆಗಾರರಾದ ಶಂಕರ್, ಸೋಮೇಶ್, ಜಿ.ನಿರಂಜನ್‌ಕುಮಾರ್, ಶಕೀಲ್‌ಅಹಮದ್, ಕ್ರೀಡಾ ಕಾರ್ಯದರ್ಶಿಗಳಾದ ಜಿ.ಎ.ಮುರಳಿ, ಪಿ.ನಟರಾಜ ಹಾಜರಿದ್ದರು.

RELATED ARTICLES
- Advertisment -
Google search engine

Most Popular