ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಪಟ್ಟಣದ ಕಾಳೆನಹಳ್ಳಿ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಬಕ್ರೀದ್ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು.
ಪ್ರವಾದಿ ಇಬ್ರಾಹಿಂ ಅವರ ತ್ಯಾಗ-ಬಲಿದಾನ, ಅಚಲ ದೈವ ಭಕ್ತಿ ಹಾಗೂ ಅವರ ಪುತ್ರ ಹಜ್ರತ್ ಇಸ್ಮಾಯಿಲ್ ಅವರ ದೈಬ ಭಕ್ತಿಯನ್ನು ಸಂಕೇತಿಸುವ ಹಬ್ಬವೇ ಈದುಲ್ ಅದ್ಹಾ(ಬಕ್ರೀದ್ ಹಬ್ಬ) ವಿಶ್ವಾದ್ಯಂತ ಆಚರಣೆ ಮಾಡಲಾಗುತ್ತಿದೆ ಎಂದು ಖ್ಯಾತ ಮೂಳೆ ತಜ್ಞ ಹಾಗೂ ಸಮಾಜದ ಮುಖಂಡ ಡಾ.ಮಹೆಬೂಬ್ ಖಾನ್ ಹಬ್ಬದ ಬಗ್ಗೆ ವಿವರಿಸಿದ್ದರು.

ಪಟ್ಟಣದ ಜಾಮಿಯಾ ಮಸೀದಿ ಮುಂಭಾಗದಿಂದ ಜಮಾವಣೆಗೊಂಡು ಮೆರವಣಿಗೆ ಚಾಲನೆ ನೀಡಿ ಮಾತನಾಡಿದ ಅವರು ಪುಣ್ಯ ಸಂಪಾದಿರುವ ರಂಜಾನ್ ತಿಂಗಳ ಉಪವಾಸದ ಬಳಿಕ ‘ಈದ್ ಉಲ್ ಫಿತ್ರ್’ ಹಬ್ಬ ಆಚರಿಸುವುದಾದರೆ, ಇಸ್ಲಾಮಿಕ್ ಕ್ಯಾಲೆಂಡರಿನ ‘ದುಲ್ ಹಜ್’ ತಿಂಗಳಲ್ಲಿ ಬಕ್ರೀದ್ಹಬ್ಬ ಆಚರಣೆ ನಡೆಯುತ್ತದೆ. ನಾಲ್ಕು ಸಾವಿರ ವರ್ಷಗಳಿಗೂ ಹಿಂದೆ ಹುಟ್ಟಿದ್ದ ಪ್ರವಾದಿ ಇಬ್ರಾಹಿಂ ಅವರ ತ್ಯಾಗವನ್ನು ನೆನಪಿಸುವುದು ‘ಬಕ್ರೀದ್’ನ ಮುಖ್ಯ ಆಶಯ. ಇಬ್ರಾಹಿಂ ಅವರು ಪ್ರವಾದಿ ಮುಹಮ್ಮದ್ ಅವರಿಗಿಂತ ಎರಡೂವರೆ ಸಾವಿರ ವರ್ಷಗಳ ಹಿಂದೆ ಹುಟ್ಟಿದ್ದರು ಎಂದು ಮುಸ್ಲಿಂ ಬಾಂಧವರ ಪವಿತ್ರ ಗ್ರಂಥಗಳಲ್ಲಿ ಉಲ್ಲೇಖವಾಗಿದೆ ಎಂದು ತಿಳಿಸಿದರು.
ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವುದು, ಸೋದರತ್ವ ಬೆಳೆಸಿಕೊಳ್ಳುವುದು, ಅಲ್ಲಾಹುವಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ ಎಂದು ಹೇಳಿದರು.
ಜಾಮೀಯ ಮಸ್ಜೀದಿಯ ದರ್ಮಗುರುಗಳಾದ ಮೊಹಮ್ಮದ್ ಜೈನೂಲ್ ಅಬಿದಿನ್ ಮಾತನಾಡಿ ವಿಶ್ವ ಪ್ರಸಿದ್ದ ತ್ಯಾಗಬಲಿದಾನ ಸಂಖ್ಯಾತವಾದ ಬಕ್ರೀದ ಹಬ್ಬವನ್ನು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಆಚರಿಸಲಾಯಿತು.
ಪಟ್ಟಣ ಹಾಗೂ ಗ್ರಾಮಾಂತರ ಸೇರಿದಂತೆ ಚಿನ್ನರು ಮತ್ತು ದೊಡ್ಡವರು ಎಲ್ಲಾ ತಾರತಮ್ಯವಿಲ್ಲದೆ ಒಬ್ಬರನ್ನನೂಬ್ಬರು ಆಲಂಗಿಸುವ ಮೂಲಕ ತಮ್ಮ ಆರಾಧ್ಯ ದೈವ ಅಲ್ಲಾನನ್ನು ಸ್ಮರಿಸುವ ಮುಖಾಂತಾರ ಬಕ್ರೀದ್ ಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಾರ್ಥನಾ ಸ್ಥಳಕ್ಕೆ ಆಗಮಿಸಿದ ಪುರಸಭೆಯ ಅಧ್ಯಕ್ಷ ಶಿವು ನಾಯಕ್ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ, ಶಾದಿ ಮಹಲ್ ನಿರ್ಮಾಣ ಕಾಮಗಾರಿಗೆ ವೈಯಕ್ತಿಕವಾಗಿ ಒಂದು ಲಕ್ಷ ದೇಣಿಗೆ ನೀಡಿ ಮಾತನಾಡಿದ ಅವರು ಸಮಸ್ತ ಮುಸ್ಲಿಂ ಕುಲಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು ಕೋರಿದರು.
ಈ ಹಬ್ಬದ ಬಗ್ಗೆ ಮುಸ್ಲಿಂ ಭಾಂದವರಿಗೆ ಅರಿವು ಮೂಡಿಸುವುದರ ಜೊತೆಗೆ ರಾಜ್ಯದ ಮತ್ತು ದೇಶದ ಜನತೆ ಸಹಬಾಳ್ವೆ ಸಮೃದ್ದಿ ಹಾಗೂ ಅ ಅಲ್ಲಾ ಹಿಂದೂ-ಮುಸ್ಲೀಂ ಎಂಬ ಭೇಧಭಾವವಿಲ್ಲದೇ ಒಂದಾಗಿ ಹೋಗುವಂತಾಗಲಿ ಎಂದು ಪ್ರಾರ್ಥಿಸಿ ಜೊತೆಗೆ ಎರಡು ದಿನಗಳ ಹಿಂದೆ ನಡೆದ ಆರ್.ಸಿ.ಬಿ ಕ್ರಿಕೆಟ್ ತಂಡ ವಿಜಯದ ಸನ್ಮಾನ ಕಾರ್ಯಕ್ರಮದಲ್ಲಿ ಕಾಲ್ತುಳಿತಕ್ಕೆ 11ಮಂದಿ ಮೃತಪಟ್ಟಿದ್ದು ಅವರ ಕುಟುಂಬಕ್ಕೆ ಅಲ್ಲಾಹು ದುಃಖ ವನ್ನು ತಡೆಯುವಂತಹ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಕೆ ಆರ್ ನಗರ ಪಟ್ಟಣದ ಪೊಲೀಸ್ ಠಾಣೆಯ ಪೋಲಿಸ್ ನಿರೀಕ್ಷಕ ಶಿವಪ್ರಕಾಶ್ ರವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಜಾಮೀಯಾ ಮಸ್ಜೀದಿ ಕಿರಿಯ ಧರ್ಮಗುರುಗಳಾದ ಮೌಲನ ಅರ್ಷದ್, ಹುಸೇನ್, ಜಾಮೀಯಾ ಮಸ್ಜೀದಿ ಅಧ್ಯಕ್ಷ ಅಫ್ಸರ್ ಬಾಬು, ಕಾರ್ಯದರ್ಶಿ ತಸ್ಸವರ್ ಪಾಷ, ಮಸ್ಜೀದಿ ಸದಸ್ಯರುಗಳಾದ ಇರ್ಷಾದ್, ನಸೀರ, ಮುಜಾಹಿದ್, ವಸೀಂ, ಫರೋಕ್ ಮುಬಾರಕ್ ಪುರಸಭಾ ಸದಸ್ಯರಾದ ಜಾವೀದ್ ಪಾಷ, ಸೈಯಾದ್ ಸಿದ್ದೀಕ್, ಸಮಾಜದ ಮುಖಂಡರಾದ ಸೈಯದ್ ಜಾಬೀರ್, ಸೈಯದ್ ಅಸ್ಲಂ, ಶಾಕಿರ್, ಮುಬಾರಕ್, ಮೊಹಮ್ಮದ್ ರಫೀ, ಮೊಹಮ್ಮದ್ ಶಫೀ, ನವೀದ್, ಸೇರಿದಂತೆ ಇನ್ನಿತರರು ಹಾಜರಿದ್ದರು.