Wednesday, June 11, 2025
Google search engine

Homeಸ್ಥಳೀಯಸಮಾನತೆಯ ಸಂದೇಶ ಸಾರಿದ್ದ ಬಸವಣ್ಣ

ಸಮಾನತೆಯ ಸಂದೇಶ ಸಾರಿದ್ದ ಬಸವಣ್ಣ

ಮೈಸೂರು: ಬಸವಣ್ಣನವರುಅನುಭವ ಮಂಟಪದಲ್ಲಿಎಲ್ಲರಿಗೂ ಸ್ಥಾನಮಾನ ನೀಡುವ ಮೂಲಕ ಸಮಾನತೆಯ ಸಂದೇಶ ಸಾರಿದರುಎಂದು ಶಾಸಕ ಜಿ.ಟಿ.ದೇವೆಗೌಡಅಭಿಪ್ರಾಯಪಟ್ಟರು.
ಮೈಸೂರು ಶರಣ ಮಂಡಳಿ ವತಿಯಿಂದ ನಗರದರಾಜೇಂದ್ರ ಭವನದಲ್ಲಿ ಬಸವ ಜಯಂತಿ ಹಾಗೂ ಬಸವ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದಅವರು, ದೇಶದಕಟ್ಟಕಡೆಯ ವ್ಯಕ್ತಿಯಉನ್ನತಿಗಾಗಿದುಡಿಯುತ್ತಿದ್ದಎಲ್ಲಾ ವರ್ಗದ ಸುಧಾರಕರನ್ನುಅನುಭವ ಮಂಟಪ ಎಂಬ ಒಂದೆ ವೇದಿಕೆಯಡಿತರುವಲ್ಲಿ ಬಸವಣ್ಣ ಯಶಸ್ವಿಯಾದರು. ಹನ್ನೆರಡೆನೇ ಶತಮಾನದಲ್ಲೇ ಮಹಿಳೆಯರಿಗೆ ಉನ್ನತ ಸ್ಥಾನ ದೊರಬೇಕುಎಂದುಧ್ವನಿ ಎತ್ತಿ ಸಾಮಾಜಿಕ ಹರಿಕಾರಎಂದು ಕರೆಸಿಕೊಂಡರು. ದುರಂತವೆಂದರೆ, ಅವರ ವಿಚಾರಗಳನ್ನು ಗುರುತಿಸುವಲ್ಲಿ ಹಾಗೂ ಅರ್ಥ ಮಾಡಿಕೊಳ್ಳುವಲ್ಲಿ ಇಂದಿಗೂ ಸಾಧ್ಯವಾಗಿಲ್ಲಎಂದು ಬೇಸರ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಶಾಸಕ ಡಾ.ತಿಮ್ಮಯ್ಯ ಮಾತನಾಡಿ, ಪ್ರಪಂಚಕ್ಕೆ ಬಸವಣ್ಣನ ತತ್ವಗಳು,ವಚನಗಳ ಕಾಣಿಕೆ ಅಮೋಘ. ಅದರೆ, ಬೆರಳೆಣಿಕೆ ಮಂದಿ ಮಾತ್ರಅವರ ತತ್ವಗಳನ್ನು ಮೈಗೂಡಿಸಿಕೊಂಡಿದ್ದಾರೆ. ಬಸವಣ್ಣ ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿದರೂ ಸಮಾಜದಅಸಮಾನತೆ ಅಳಿಸಲು ಶ್ರಮಿಸಿದರು. ಆದರೆ ಇಂದಿಗೂ ನಮ್ಮಲಿ ಜಾತಿ ಪ್ರವೃತ್ತಿ ಮಾತ್ರಕಡಿಮೆಆಗಿಲ್ಲ. ಇವ ನಮ್ಮವ, ಇವ ನಮ್ಮವಎಂದು ಹೇಳುತ್ತೆಲೇ ಆತಯಾವಜಾತಿಎಂದು ಕೇಳುವ ಪರಿಸ್ಥಿತಿ ಇದೆ. ಜಗಜ್ಯೋತಿ ಬಸವಣ್ಣ, ಮಡಿವಾಳ ಮಾಚಯ್ಯ, ಅಂಬಿಗರಚೌಡಯ್ಯರಂತರಕಾಯಕ ಜೀವಿಗಳು ನಮಗೆ ಆದರ್ಶವಾಗಬೇಕುಎಂದು ಹೇಳಿದರು.
ಬಸವ ರತ್ನ ಪ್ರಶಸ್ತಿ ಸ್ವೀಕರಿಸಿ ಹಿರಿಯ ಪತ್ರಕರ್ತಕೆ.ಶಿವಕುಮಾರ್ ಮಾತನಾಡಿ, ಬಸವಣ್ಣನ ಹೆಸರು ಕೇಳಿದರೆ ಮೈ ರೋಮಾಚಂನವಾಗುತ್ತದೆ. ಪತ್ರಕರ್ತರ ಕೆಲಸ ಸಾಧಕರ ಬಗ್ಗೆ ಜಗತ್ತಿಗೆ ತಿಳಿಸುವುದು ಅಷ್ಟೇ. ಆದರೆ, ನಂಜಪ್ಪರಂತಹ ಹಿರಿಯರಜೊತೆ ಸನ್ಮಾನಿಸುತ್ತಿರುವುದು ಸಂತಸದ ಸಂಗತಿಎಂದು ಹೇಳಿದರು.
ದಲಿತಪರ, ಬಂಡಾಯ, ಕನ್ನಡಪರ ಹೋರಾಟ ಹಾಗೂ ವಚನ ಚಳುವಳಿ ಎಂದರೆ ನನಗೆ ಹೆಚ್ಚು ಆಸಕ್ತಿ. ನಾನು ಕೆಜಿಎಫ್‌ನಲ್ಲಿ ವಿದ್ಯಾಥ್ಯಿಗಿದಾಗಿನಿಂದಲೂ ಈ ಎಲ್ಲಾ ಹೋರಾಟಗಳನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜು, ಮೂಗೂರು ನಂಜುಡಸ್ವಾಮಿಯಂತಹ ಅನೇಕ ಹೋರಾಟಗಾರರುಕನ್ನಡ ಭಾಷೆಗಾಗಿ ಸಾಕಷ್ಟು ಹೋರಾಟ ಮಾಡಿದ್ದಾರೆಎಂದು ಸ್ಮರಿಸಿದರು.
ಇಂದು ಚಳವಳಿಗಳನ್ನು ಜನರುಅಸಹಾಯಕ ಸ್ಥಿತಿಯಲ್ಲಿ ನೋಡುವುದು ಹೆಚ್ಚಾಗಿದೆ. ಆದರೆ, ಗಡಿಭಾಗದಲ್ಲಿಕನ್ನಡಿಗರ ಪರಿಸ್ಥಿತಿ ಹೇಗಿದೆಎಂದುಇಂತಹಜನರಿಗೆ ತಿಳಿದಿಲ್ಲ. ತಮಿಳುನಾಡಿನಲ್ಲಿ ಸುಮಾರು ೧೫ ಲಕ್ಷಕ್ಕೂ ಅಽಕ ಕನ್ನಡಿಗರಿದ್ದಾರೆ. ಅಲ್ಲಿನ ತಾಳವಾಡಿಯಲ್ಲಿ ಹೆಚ್ಚಿನಜನರಿದ್ದು, ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಕ ಮಾಡದೇ ತಮಿಳು ಸರ್ಕಾರ ಮಕ್ಕಳ ಭವಿಷ್ಯಕ್ಕೆಅಡ್ಡಿಪಡಿಸುತ್ತಿದೆ. ಆದ್ದರಿಂದಕೂಡಲೇರಾಜ್ಯ ಸರ್ಕಾರ ತಮಿಳುನಾಡು ಸೇರಿದಂತೆಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರದಂತಹ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತನಾಡಿಕನ್ನಡಿಗರ ಸಮಸ್ಯೆಗಳನ್ನು ಬಗೆಹರಿಸಬೇಕುಎಂದುರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಬಸವ ರತ್ನ ಪುರಸ್ಕೃತ ಲಯನ್ ವೆಂಕಟೇಶ್ ಮಾತನಾಡಿ, ನಾವು ಸಮಾಜದಲ್ಲಿಯಾರಜೋಬಿಗೂಕೈಹಾಕದೆ ಬದುಕು ಕಟ್ಟಿಕೊಳ್ಳಬೇಕು. ಮಾತಿಗಿಂತ ಕೆಲಸ ಮುಖ್ಯ.ಸಮಾಜದಲ್ಲಿ ಮಾತನಾಡುವವ ಸಂಖ್ಯೆ ಹೆಚ್ಚಿದೆ, ಆದರೆ, ಕೆಲಸ ಮಾಡುವವರ ಸಂಖ್ಯೆಕಡಿಮೆ. ಇಂತಹ ಸನ್ಮಾಗಳು , ಪುರಸ್ಕಾರಗಳು ಅನ್ನದಾತರಿಗೆ ಹೆಚ್ಚು ಗೌರವ ಸಲ್ಲಬೇಕುಎಂದರು.
ಬಸವರತ್ನ ಪ್ರಶಸ್ತಿ ಪುರಸ್ಕೃತರಾದಕೆ,ಎಚ್ ನಂಜಪ್ಪ, ಎ.ಪಿ ನಾಗೇಶ್, ವೈ.ವೀರಭದ್ರ, ಕಸಾಪ ಜಿಲ್ಲಅಧ್ಯಕ್ಷ ಮಡ್ಡಿಗೆರೆಗೋಪಾಲ್, ಶರಣ ಮಂಡಳಿಯ ಗೌರವಅದ್ಯಕ್ಷ ಮೂಗೂರು ನಂಜುಂಡಸ್ವಾಮಿ, ಹೊಯ್ಸಳ ಕಲಾಕೂಟದಎಂ.ಚಂದ್ರಶೇಖರ್‌ಇದ್ದರು.

RELATED ARTICLES
- Advertisment -
Google search engine

Most Popular