Monday, March 9, 2026
Google search engine

Homeರಾಜ್ಯಸುದ್ದಿಜಾಲಬೆಳಗಾವಿಗೆ ಸಿಟೀಸ್ 2.0 ಯೋಜನೆ ಕೈ ತಪ್ಪುವ ಭೀತಿ..!

ಬೆಳಗಾವಿಗೆ ಸಿಟೀಸ್ 2.0 ಯೋಜನೆ ಕೈ ತಪ್ಪುವ ಭೀತಿ..!

ವರದಿ :ಸ್ಟೀಫನ್ ಜೇಮ್ಸ್.

ಬೆಳಗಾವಿಗೆ ಸಿಟೀಸ್ 2.0 ಯೋಜನೆ ಕೈ ತಪ್ಪುವ ಭೀತಿ..!

ಬೆಳಗಾವಿ:

ಪ್ರತಿಷ್ಠಿತ ಸಿಟೀಸ್ 2.0 ಯೋಜನೆ ಇದೀಗ ಬೆಳಗಾವಿಗೆ ಕೈ ತಪ್ಪುವ ಆತಂಕ ಎದುರಾಗಿದೆ. ಆಡಳಿತಾತ್ಮಕ ನಿರ್ಲಕ್ಷ್ಯ, ಹಣಕಾಸು ಹಂಚಿಕೆ ಕುರಿತ ಗೊಂದಲ ಹಾಗೂ ಕ್ರಮಬದ್ಧ ವಿಳಂಬಗಳಿಂದ ಯೋಜನೆ ಅಸ್ತವ್ಯಸ್ತವಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಸೋಮವಾರ ತುರ್ತು ವಿಶೇಷ ಸಾಮಾನ್ಯ ಸಭೆ ಕರೆಯಲು ತೀರ್ಮಾನಿಸಿದೆ. ಈ ಸಭೆಯಲ್ಲಿ ಯೋಜನೆ ಮುಂದುವರಿಸುವ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಸಿಟೀಸ್ 2.0 ಯೋಜನೆ ಏನು?

ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಆರಂಭಿಸಿದ ಮಹತ್ವದ ಯೋಜನೆ
ಆರಂಭ 2023

ಉದ್ದೇಶ:

3 (Circular Economy) ಉತ್ತೇಜನ, ಸಮಗ್ರ ಘನ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ನಗರಗಳಲ್ಲಿ ಸ್ಥಿರ ಮತ್ತು ನವೀನ ಅಭಿವೃದ್ಧಿ ಯೋಜನೆಗಳು

ಅನುದಾನ: ₹20 ಕೋಟಿ ರಿಂದ ₹135 ಕೋಟಿ

ಕರ್ನಾಟಕದಿಂದ ಆಯ್ಕೆಯಾದ ಏಕೈಕ ನಗರ –

ಬೆಳಗಾವಿ

ಬೆಳಗಾವಿ ಈ ಯೋಜನೆಗೆ ಕರ್ನಾಟಕದಿಂದ ಆಯ್ಕೆಯಾದ ಏಕೈಕ ನಗರವಾಗಿತ್ತು.

2024ರ ಫೆಬ್ರವರಿಯಲ್ಲಿ ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಜ್ಯೂರಿ ಸಭೆಯಲ್ಲಿ “ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಮತ್ತು ಸ್ಥಿರತೆಯ ಯೋಜನೆ ಜಾರಿಗೆ ದೃಷ್ಟಿಪಥ (ವೀಸ್‌ವಾಸ್)” ಎಂಬ ಪ್ರಸ್ತಾವನೆಯನ್ನು ಮಂಡಿಸಿದ ಬಳಿಕ ಈ ಅವಕಾಶ ದೊರಕಿತ್ತು.

₹165 ಕೋಟಿ ಯೋಜನೆ – ಹಣಕಾಸು ಹಂಚಿಕೆಯಲ್ಲಿ ಗೊಂದಲ

ಯೋಜನೆಯ ಒಟ್ಟು ವೆಚ್ಚ: ₹165.35 ಕೋಟಿ

ಹಣಕಾಸು ಹಂಚಿಕೆ:

40% – ಕೇಂದ್ರ ಸರ್ಕಾರ

40% – ರಾಜ್ಯ ಸರ್ಕಾರ

20% – ಮಹಾನಗರ ಪಾಲಿಕೆ

ಕೇಂದ್ರ ಸರ್ಕಾರ ಈಗಾಗಲೇ ₹7.5 ಕೋಟಿ ಮೊದಲ ಕಂತು ಬಿಡುಗಡೆ ಮಾಡಿದೆ.

ಆದರೆ ಇದೀಗ ರಾಜ್ಯ ಸರ್ಕಾರ ತನ್ನ ಪಾಲಿನ ಹಣವನ್ನು ರಾಜ್ಯ ಹಣಕಾಸು ಆಯೋಗದ ಅನುದಾನದಿಂದಲೇ ಪಾಲಿಕೆ ಭರಿಸಬೇಕು ಎಂದು ಸೂಚಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಈ ಕುರಿತು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ರಾಜ್ಯ ಸರ್ಕಾರ ತನ್ನ ಬದ್ಧತೆಯಿಂದ ಹಿಂದೆ ಸರಿಯುತ್ತಿದೆ ಎಂದು ಆರೋಪಿಸಿದ್ದಾರೆ. ಇದರಿಂದ ಯೋಜನೆ ರಾಜಕೀಯ ಚರ್ಚೆಯ ವಿಷಯವಾಗಿಯೂ ಪರಿಣಮಿಸಿದೆ.

ಮೂಲ ಪ್ರಸ್ತಾವನೆಯ ಕೆಲವು ಅಂಶಗಳನ್ನು ಕೇಂದ್ರ ತಿರಸ್ಕರಿಸಿದೆ.

ಹೊಸ ಯೋಜನಾ ಪಟ್ಟಿ ಸಿದ್ಧಪಡಿಸುವ ಅವಶ್ಯಕತೆ ಪರಿಸರ ಮತ್ತು ಸಾಮಾಜಿಕ ಪರಿಣಾಮ ಮೌಲ್ಯಮಾಪನಕ್ಕೆ ಸಲಹಾ ಸಂಸ್ಥೆ ನೇಮಕಾತಿ ವಿಳಂಬ

ಟೆಂಡ‌ರ್ ಪ್ರಕ್ರಿಯೆ ಹಲವು ಬಾರಿ ಪುನರಾವರ್ತನೆ ಇದೇ ವೇಳೆ ಟೆಂಡ‌ರ್ ರದ್ದುಪಡಿಸಿದ ಕ್ರಮವನ್ನು ಪ್ರಶ್ನಿಸಿ ಒಂದು ಸಲಹಾ ಸಂಸ್ಥೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ. ನ್ಯಾಯಾಲಯ ತಾತ್ಕಾಲಿಕ ತಡೆ ನೀಡಿದರೆ ಯೋಜನೆ ಇನ್ನಷ್ಟು ವಿಳಂಬವಾಗುವ ಆತಂಕವಿದೆ.

ಈ ಎಲ್ಲಾ ಅನಿಶ್ಚಿತತೆಗಳ ನಡುವೆ ಯೋಜನೆಯ ಮೊತ್ತವನ್ನು ₹75 ಕೋಟಿಗೆ ಇಳಿಸಿ, ಕೇಂದ್ರ ಅನುದಾನ ಹಾಗೂ ಪಾಲಿಕೆಯ ಪಾಲಿನಿಂದಲೇ ಮುಂದುವರಿಸುವ ಆಯ್ಕೆಯನ್ನೂ ಪರಿಗಣಿಸಲಾಗುತ್ತಿದೆ.

ಸೋಮವಾರ ತೀರ್ಮಾನ ಸಾಧ್ಯ

ಸೋಮವಾರ ನಡೆಯಲಿರುವ ಮಹಾನಗರ ಪಾಲಿಕೆಯ ತುರ್ತು ವಿಶೇಷ ಸಭೆಯಲ್ಲಿ ಯೋಜನೆಯ ಭವಿಷ್ಯ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಯೋಜನೆ ಉಳಿಯುತ್ತದೆಯೇ? ಅಥವಾ ಬೆಳಗಾವಿಗೆ ಕೈ ತಪ್ಪುತ್ತದೆಯೇ?

ಈ ಪ್ರಶ್ನೆಗೆ ಉತ್ತರ ಈ ಸಭೆಯಲ್ಲೇ ಸಿಗುವ ನಿರೀಕ್ಷೆ ಇದೆ.

RELATED ARTICLES
- Advertisment -
Google search engine

Most Popular