ಬೆಂಗಳೂರು: ಆರ್ ಸಿ ಬಿ ವಿಜಯೋತ್ಸವ ಕಾರ್ಯಕ್ರಮದ ವೇಳೆಯಲ್ಲಿ ಕಾಲ್ತುಳಿತ ದುರಂತ ಉಂಟಾಗಿ 11 ಮಂದಿ ಸಾವನ್ನಪ್ಪಿದ್ದಾರೆ. ಇದಕ್ಕೂ ಮುನ್ನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಲ್ಲಿ ಓರ್ವ ಆರ್ ಸಿ ಬಿ ಅಭಿಮಾನಿ ಸಾವನ್ನಪ್ಪಿದಂತ ವಿಷಯ ತಿಳಿದಂತ ಸಿಎಂ ಸಿದ್ಧರಾಮಯ್ಯ ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಿದ್ದಂತ ಸನ್ಮಾನ ಕಾರ್ಯಕ್ರಮವನ್ನೇ ರದ್ದುಗೊಳಿಸೋದಕ್ಕೆ ಮುಂದಾಗಿದ್ದರು ಎನ್ನುವಂತ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
11 ಮಂದಿ ಸಾವಿನ ಸುದ್ದಿ ಕೇಳಿ ಸಿಎಂ ಶಾಕ್ ಆಗಿದ್ದರು. ಕಿವಿಗೆ ಸುದ್ದಿ ಬೀಳುತ್ತಲೇ ತೀರ್ವ ನೋವಿಗೊಳಗಾಗಿದ್ದರು. ವಿಧಾನಸೌಧದ ಮುಂಭಾಗದ ಕಾರ್ಯಕ್ರಮವನ್ನೇ ಕ್ಯಾನ್ಸಲ್ ಮಾಡೋಕೆ ಹೊರಟಿದ್ರು ಎನ್ನುವ ವಿಚಾರ ತಿಳಿದು ಬಂದಿದೆ.
ಈ ಕಾರ್ಯಕ್ರಮಕ್ಕೂ ಮೊದಲೇ ಸಾವಿನ ಸುದ್ದಿ ಕಿವಿಗೆ ಬಿದ್ದಿದ್ದರೆ ಕಾರ್ಯಕ್ರಮವನ್ನೇ ರದ್ಧು ಮಾಡಲು ಹೊರಟಿದ್ರಂತೆ. ಆದರೆ ಸಾವಿನ ಸುದ್ದಿ ಸಿಎಂ ಕಿವಿಗೆ ಬಿದ್ದಿದ್ದೇ ತುಂಬಾ ವಿಳಂಬವಾಗಿತ್ತಂತೆ. ಆ ಕಾರಣಕ್ಕೇ ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಅವರ ಅಮಾನತು ಮಾಡಿದ್ದಂತೆ. ಸಾವಿನ ಸುದ್ದಿ ವಿಳಂಬವಾಗಿ ನೀಡಿದ್ದಕ್ಕೆ ಕೋಪಗೊಂಡೇ ಸಸ್ಪೆಂಡ್ ಮಾಡಿದ್ದಂತೆ. ಇಲ್ಲವಾಗಿದ್ದ ಆಯುಕ್ತರ ಸಸ್ಪೆಂಡ್ ಮಾಡುವಷ್ಟರ ಮಟ್ಟಿಗೆ ಹೋಗ್ತಿಲಿಲ್ಲವೆಂಬ ಮಾಹಿತಿ ತಿಳಿದು ಬಂದಿದೆ.
ಹಾಗಾದ್ರೆ ಅಂದು ಆಗಿದ್ದೇನು?
ವಿಧಾನಸೌಧದ ಮುಂಭಾಗ ಕಾರ್ಯಕ್ರಮ ಇದ್ದಿದ್ದು ಸಂಜೆ 4 ಗಂಟೆಗೆ. ಕಾಲ್ತುಳಿತಕ್ಕೆ ಮೊದಲ ಬಲಿಯಾಗಿದ್ದು ಮಧ್ಯಾಹ್ನ 3.45ಕ್ಕೆ. ವೈದೇಹಿ ಆಸ್ಪತ್ರೆಯಲ್ಲಿ ಮೊದಲ ಸಾವಿನ ಸುದ್ದಿ ಪೊಲೀಸರಿಗೆ ಸಿಗುತ್ತೆ. ಈ ವೇಳೆ ಸಿಎಂ ವಿಧಾನಸೌಧದ ಕೊಠಡಿಯಲ್ಲೇ ಇದ್ದರಂತೆ. ಸಂಜೆ 4.15ಕ್ಕೆ ಕಾರ್ಯಕ್ರಮ ಶುರುವಾಗುತ್ತೆ, ಮಳೆ ಬರುತ್ತೆ ಕಾರ್ಯಕ್ರಮ ಅಲ್ಲಿಗೆ ಮುಗಿಯುತ್ತೆ.
ಸಿಎಂ ಸಿದ್ಧರಾಮಯ್ಯ ವಿಧಾನಸೌಧದ ಮುಂದೆ ಸರ್ಕಾರದಿಂದ ಆಯೋಜಿಸಿದ್ದಂತ ಆರ್ ಸಿ ಬಿ ತಂಡದ ಆಟಗಾರರಿಗೆ ಸನ್ಮಾನಿಸಿದ ಬಳಿಕ ಅಲ್ಲಿಂದ ನೇರ ಜನಾರ್ಧನ ಹೊಟೇಲ್ ಗೆ ತೆರಳುತ್ತಾರೆ. ಅಲ್ಲಿ ಮಸಾಲೆ ದೋಸೆಯ ರುಚಿಯನ್ನ ಸವಿಯುತ್ತಿರುತ್ತಾರೆ. ದೋಸೆಯನ್ನ ತಿಂದು ಅಲ್ಲಿಂದ ಹೊರಡಬೇಕು ಅನ್ನೋವಷ್ಟರಲ್ಲಿ ಪೊಲೀಸರಿಂದ ಕಾಲ್ ಬರುತ್ತದೆ. ಸಾರ್ ಚಿನ್ನಸ್ವಾಮಿ ಬಳಿ ಕಾಲ್ತುಳಿತವಾಗಿ ಸಾವಾಗಿದೆ ಎಂಬ ಮಾಹಿತಿ ನೀಡಲಾಗುತ್ತದೆ.
ತಕ್ಷಣ ಸಿಎಂ ಅಲ್ಲಿಂದ ನೇರ ಮನೆಗೆ ತೆರಳ್ತಾರೆ. ಅಷ್ಟರಲ್ಲಿ ಗೃಹ ಸಚಿವರು ಕಾವೇರಿಗೆ ಬರ್ತಾರೆ. ಗೃಹ ಸಚಿವರು ಕಾವೇರಿಗೆ ಬರುವ ವೇಳೆ ಐವರು ಸಾವಿಗೀಡಾಗಿರುತ್ತಾರೆ. ಆಗ ಸಿಎಂಗೆ ಗೃಹ ಸಚಿವರು ಸಾವಿನ ಫುಲ್ ಡಿಟೇಲ್ಸ್ ನೀಡ್ತಾರೆ. ಆ ವೇಳೆ ಈ ರೀತಿ ಆಗಿದ್ದು ನನಗೆ ಗೊತ್ತಾಗಲಿಲ್ಲ. ಇದ್ದಿದ್ದರೆ ಕಾರ್ಯಕ್ರಮ ರದ್ಧು ಮಾಡ್ತಿದ್ದೆ ಎಂದರಂತೆ.
ಮರು ದಿನ ಬಿಜೆಪಿ ನಾಯಕರ ಜಂಟಿ ಸುದ್ದಿಗೋಷ್ಠಿಯಾಗುತ್ತೆ. ಸಿಎಂ ಸಾವಿಗಿಂತ ಜನಾರ್ಧನ ಹೊಟೇಲ್ ದೋಸೆ ಮುಖ್ಯವಾಯ್ತೇ ಅಂತ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸುತ್ತಾರೆ. ಇದು ಸಿಎಂ ಸಿದ್ದರಾಮಯ್ಯನವರ ಕೋಪಕ್ಕೆ ಕಾರಣವಾಗುತ್ತೆ. ನಂತರ ಮರು ದಿನ ಕ್ಯಾಬಿನೆಟ್ ನಲ್ಲಿ ಗಂಭೀರ ಚರ್ಚೆಯಾಗುತ್ತೆ. ಆಗ ಪೊಲೀಸ್ ಆಯುಕ್ತರನ್ನ ಕರೆಸಲಾಗುತ್ತೆ. ದಯಾನಂದ ಸಾವಿನ ಸುದ್ದಿ ಲೇಟಾಗಿ ನೀಡಿದ ಬಗ್ಗೆ ವಿವರಣೆ ನೀಡ್ತಾರೆ. ಲಕ್ಷಾಂತರ ಜನ ಸೇರಿದ್ದರಿಂದ ನೆಟ್ ವರ್ಕ್ ಸಂಪೂರ್ಣ ಸ್ಥಗಿತವಾಗಿತ್ತು. ಹಾಗಾಗಿ ನಿಮಗೆ ಸುದ್ದಿ ಮುಟ್ಟಿಸಲು ವಿಳಂಬವಾಯ್ತು ಎಂಬ ವಿವರಣೆ ಸಿಗುತ್ತೆ. ಈ ಕಾರಣಕ್ಕೆ ದಯಾನಂದ್ ಸಸ್ಪೆಂಡ್ ಗೆ ಕಾರಣವಾಗುತ್ತೆ. ಇದು ಕಾರ್ಯಕ್ರಮದ ದಿನ ನಡೆದ ಕಂಪ್ಲೀಟ್ ಡಿಟೇಲ್ಸ್ ಆಗಿದೆ.