ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ: ಪಿರಿಯಾಪಟ್ಟಣ ಕೆಎಸ್ಆರಟಿಸಿ ಘಟಕದಿಂದ ಬೆಟ್ಟದಪುರ ಚಪ್ಪರದಹಳ್ಳಿ ಕುಶಾಲನಗರ ಮಾರ್ಗವಾಗಿ ಹೊಸದಾಗಿ ಬಿಟ್ಟಿರುವ ಬಸ್ಸನ್ನು ಚಪ್ಪರದಹಳ್ಳಿ ಗ್ರಾಮಸ್ಥರು ಗ್ರಾಮದ ಶ್ರೀ ಕೊಳ್ಳಿ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಬಳಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಆಂಜನಿಗೌಡ ಮಾತನಾಡಿ ನಮ್ಮ ಗ್ರಾಮಕ್ಕೆ ೧೨ ಗಂಟೆ ಸಮಯದಲ್ಲಿ ಬರುತ್ತಿದ್ದ ಬಸ್ಸನ್ನು ನಿಲ್ಲಿಸಿ ೧೫ ವರ್ಷಗಳು ಕಳೆದಿವೆ, ಈಗ ಅದೇ ಸಮಯಕ್ಕೆ ಬಸ್ ಹಾಕಿಸಿಕೊಡಿ ಎಂದು ಗ್ರಾಮಸ್ಥರು ಸಚಿವ ಕೆ.ವೆಂಕಟೇಶ್ರವರಿಗೆ ಮನವಿ ಮಾಡಿದಾಗ, ಸಚಿವರು ಸ್ಪಂದಿಸಿ ಅದೇ ಸಮಯಕ್ಕೆ ಶುಕ್ರವಾರದಿಂದ ಬಸ್ಸನ್ನು ಘಟಕ ವ್ಯವಸ್ಥಾಪಕರು ಕಳಿಸಿದ್ದಾರೆ, ಇದಕ್ಕಾಗಿ ಗ್ರಾಮಸ್ಥರ ಪರವಾಗಿ ಸಚಿವರಿಗೆ ಹಾಗೂ ಘಟಕದ ಅಧಿಕಾರಿಗಳಿಗೆ ದನ್ಯವಾದಗಳು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚಾಲಕ ಯೋಗೇಶ್ ಈ ಬಸ್ನ ರೂಟ್ ನಂ. ೫೩ ಆಗಿದ್ದು, ಬೆಟ್ಟದಪುರದಿಂದ ಮದ್ಯಾಹ್ನ ೧೨ ಗಂಟೆಗೆ ಹೊರಟು, ಚಪ್ಪರಹಳ್ಳಿ ಗ್ರಾಮದ ಮಾರ್ಗವಾಗಿ ಕುಶಾಲನಗರ ತಲುಪಿ ಪುನಃ ಅದೇ ಮಾರ್ಗವಾಗಿ ೧.೩೦ ಸಮಯಕ್ಕೆ ವಾಪಸ್ ಬಂದು ಬೆಟ್ಟದಪುರ ತಲುಪಲಾಗುತ್ತದೆ. ಪುನಃ ಬೇರೆ ಮಾರ್ಗ ಹೋಗುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನಿರ್ವಾಹಕ ನಟರಾಜು ಹಾಗೂ ಗ್ರಾಮದ ಯಜಮಾನರುಗಳು, ಯುವಕರು ಪೂಜೆಯಲ್ಲಿ ಪಾಲ್ಗೊಂಡಿದ್ದರು.