ರಾಮನಗರ: ಭಗೀರಥರ ಪೂರ್ವಜರಿಗೆ ಶಾಪವಿಮೋಚನೆ ಮಾಡಲು ತಪಸ್ಸು ಮಾಡಿ ಗಂಗೆಯನ್ನು ಭೂಮಿಗೆ ತಂದವರು ಭಗೀರಥ ಋಷಿಗಳು ಎಂದು ಉಪ್ಪಾರ ಸಮುದಾಯದ ಮುಖಂಡ ವೆಂಕಟೇಶ್ ಮೂರ್ತಿ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಭಗೀರಥರು ಸೂರ್ಯವಂಶಕ್ಕೆ ಸೇರಿದವರು ಮತ್ತು ರಾಮನ ಪೂರ್ವಜರಾಗಿದ್ದು ಅವರ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಭಗೀರಥರ ೬೦ ಸಾವಿರ ಚಿಕ್ಕಪ್ಪಂದಿರು ಶಾಪದಿಂದ ಬಿಡುಗಡೆ ಮಾಡಲು ಸಾವಿರ ವರ್ಷಗಳ ಕಾಲ ತಪಸ್ಸು ಮಾಡಿದರು. ಗಂಗೆಯು ನೇರವಾಗಿ ಭೂಮಿಗೆ ಇಳಿದರೆ ತನ್ನ ಬಲವು ಭೂಮಿಯನ್ನು ನಾಶಪಡಿಸುತ್ತದೆ ಎಂದು ಗಂಗಾ ಭಗೀರಥನಿಗೆ ಹೇಳಿದಳು ನಂತರ ಭಗೀರಥನು ಶಿವನನ್ನು ಕುರಿತು ತೀವ್ರ ತಪಸ್ಸು ಮಾಡಿ ಗಂಗೆಯನ್ನು ಭೂಮಿಗೆ ಇಳಿಸುವಂತೆ ಕೇಳಿದನು. ಶಿವನು ಅವನಿಗೆ ವರವನ್ನು ನೀಡಿದನು. ಗಂಗಾ ದೇವಿಯು ಗಂಗಾ ನದಿಯ ರೂಪದಲ್ಲಿ ಭೂಮಿಗೆ ಇಳಿಯಲು ಕಾರಣವಾಯಿತು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಬಾಬು, ಉಪ್ಪಾರ ಸಮುದಾಯದ ಮುಖಂಡ ಕೆ. ಟಿ. ಆಂಜನಪ್ಪ ಹಾಗೂ ಇತರರು ಉಪಸ್ಥಿತರಿದ್ದರು.