ಭರಮಸಾಗರ: ಬೇಕರಿಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಇಡೀ ಬೇಕರಿ ಬೆಂಕಿಗೆ ಆಹುತಿಯಾಗಿರುವ ಘಟನೆ ಇಲ್ಲಿನ ಮುಖ್ಯ ರಸ್ತೆಯ ಬೇಕರಿಯಲ್ಲಿ ಮಾ.30ರ ಶನಿವಾರ ತಡರಾತ್ರಿ ನಡೆದಿದೆ.
ಅದೃಷ್ಟವಶಾತ್ ಬೇಕರಿಯಲ್ಲಿ ಯಾರು ಇರಲಿಲ್ಲ. ಜೊತೆಗೆ ಸಿಲೆಂಡರ್ ಸಿಡಿಯದೆ ಇರುವ ಕಾರಣ ಆಗಬಹುದಾದದ ದೊಡ್ಡ ದುರಂತ ತಪ್ಪಿದೆ. ಬೇಕರಿಯಲ್ಲಿ ಸುಮಾರು 15 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗೆ ತುತ್ತಾಗಿದೆ ಎಂದು ಹಾಸನ ಮೂಲದ ಬೇಕರಿ ಮಾಲೀಕ ಪ್ರತಾಪ್ ಪತ್ರಿಕೆಗೆ ತಿಳಿಸಿದ್ದಾರೆ.
ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಬೇಕರಿ ಹೊತ್ತಿ ಉರಿಯುತ್ತಿರುವುದನ್ನು ಕಂಡು ಮಾಲೀಕರಿಗೆ ಕರೆ ಮಾಡಿ ಕರೆಸಿಕೊಂಡು ಆಗಬಹುದಾದ ಮತ್ತಷ್ಟು ದುರಂತವನ್ನು ತಡೆದಿದ್ದಾರೆ.
ಭಾನುವಾರ ಬೆಳಗ್ಗೆ ಬೇಕರಿಗೆ ಬೆಂಕಿ ಬಿದ್ದ ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಆಗಮಿಸಿ ದುರಂತ ವೀಕ್ಷಿಸಿ ಘಟನೆ ಕುರಿತು ಮರುಕ ವ್ಯಕ್ತಪಡಿಸಿದರು.
ಭರಮಸಾಗರ ಪೊಲೀಸರು ಬೆಳ್ಳಂಬೆಳ್ಳಗ್ಗೆ ಘಟನ ಸ್ಥಳದಲ್ಲಿ ಮಹಜರು ಪ್ರಕ್ರಿಯೆ ಆರಂಭಿಸಿದ್ದಾರೆ. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.