Tuesday, May 20, 2025
Google search engine

Homeಅಪರಾಧಬೈಕ್ ಹಿಂಬದಿಗೆ ಗುದ್ದಿದ ಕಾರು: ಬೈಕ್ ಸವಾರ ಸಾವು

ಬೈಕ್ ಹಿಂಬದಿಗೆ ಗುದ್ದಿದ ಕಾರು: ಬೈಕ್ ಸವಾರ ಸಾವು

ಗುಂಡ್ಲುಪೇಟೆ: ಬೈಕ್ ಹಿಂಬದಿಗೆ ಕಾರು ಗುದ್ದಿದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಸವಾಪುರ ಸಮೀಪದ ಒಂಟೆ ಫಾಂ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.

ಬೈಕ್ ಸವಾರ ಬೊಮ್ಮಲಾಪುರ ಗ್ರಾಮದ ನಿವೃತ್ತ ಶಿಕ್ಷಕ ಕಿಟ್ಟರಾಚನಾಯಕ(66) ಮೃತ ದುರ್ದೈವಿ. ಇವರು ಕೆಲಸದ ನಿಮಿತ್ತ  ಕಲ್ಲಿಗೌಡನಹಳ್ಳಿ ಹೋಗಿ ವಾಪಸ್ ಬೈಕ್ ನಲ್ಲಿ ಬರುತ್ತಿದ್ದ ವೇಳೆ ಕಾರೊಂದು ಬೈಕ್ ಹಿಂಬದಿಗೆ ಗುದ್ದಿದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿದೆ ಎನ್ನಲಾಗುತ್ತಿದೆ.

ಮೃತ ಕಿಟ್ಟರಾಚನಾಯಕ.

ಇನ್ನೂ ಮಾಹಿತಿ ಅರಿತ 112 ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಗಾಯಾಳುವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ಧಾರೆ. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸುವ ಮಾರ್ಗ ಮಧ್ಯೆದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.  

ಇನ್ನೂ ಗುಂಡ್ಲುಪೇಟೆ ಠಾಣೆ ಪೊಲೀಸರು ಎರಡು ವಾಹನಗಳನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular