ಬೆಂಗಳೂರು: “ಒಳಮೀಸಲಾತಿ ವಿಷಯದಲ್ಲಿ ಬಿಜೆಪಿ ಜನರನ್ನು ದಾರಿ ತಪ್ಪಿಸುತ್ತಿದೆ,” ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ. ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಆಯೋಗ ವರದಿ ಸಲ್ಲಿಸಿದ್ದ 20 ದಿನಗಳೊಳಗೆ ಸರ್ಕಾರ ಒಳಮೀಸಲಾತಿ ಜಾರಿಗೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಮಹದೇವಪ್ಪ, “1992ರಲ್ಲಿ ಕಾಂಗ್ರೆಸ್ ಸರಕಾರ ಸದಾಶಿವ ಆಯೋಗ ರಚಿಸಿ ವರದಿ ಪಡೆದಿತ್ತು. ಆದರೆ ಬಿಜೆಪಿ ಅದನ್ನು ತಿರಸ್ಕರಿಸಿ ಕ್ರಮ ಕೈಗೊಂಡಿಲ್ಲ. ಇತ್ತೀಚೆಗೆ ಪ್ರತಿಭಟನೆ ಮಾತನಾಡುತ್ತಿರುವ ಗೋವಿಂದ ಕಾರಜೋಳ ಹಾಗೂ ಎ. ನಾರಾಯಣಸ್ವಾಮಿ ಅವರದೇ ಆದ ಸರ್ಕಾರಗಳಲ್ಲಿ ಮೀಸಲಾತಿಗೆ ಯಾವ ಕ್ರಮವೂ ಆಗಿಲ್ಲ,” ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ತಕ್ಷಣವೇ ಪ್ರಸ್ತಾವನೆ ಸಲ್ಲಿಸಿ ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ ಆಯೋಗ ರಚನೆ ಮಾಡಿದೆ. “ಇದು ರಾಜಕೀಯ ನಾಟಕವಲ್ಲ, ಬದ್ಧತೆಯಿಂದ ನಡೆಸುತ್ತಿರುವ ಕಾರ್ಯ,” ಎಂದು ಅವರು ಸ್ಪಷ್ಟಪಡಿಸಿದರು.
ಬಿಜೆಪಿಗೆ ನೈತಿಕ ಹಕ್ಕಿಲ್ಲವೆಂದೂ, ಅಭಿವೃದ್ಧಿಯಲ್ಲಿ ಸಿದ್ದರಾಮಯ್ಯ ಸರ್ಕಾರ ಸಾಧನೆ ಮಾಡಿದೆ ಎಂದು ಮಹದೇವಪ್ಪ ಹೇಳಿದರು.