ಮೈಸೂರು : ತಾಲ್ಲೂಕಿನ ರಮ್ಮನಹಳ್ಳಿ ಪಕ್ಕದ ಕಾಳಸಿದ್ದನಹುಂಡಿ ಗ್ರಾಮದ ಬಾರ್ ಮುಂದೆ ವ್ಯಕ್ತಿಯೊಬ್ಬರ ಶವ ಪತ್ತೆ ಪತ್ತೆಯಾಗಿದ್ದು, ಮೃತನ ಕುಟುಂಬದವರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ರಮ್ಮನಹಳ್ಳಿ ಗ್ರಾಮದ ಬಸವರಾಜು (೪೫) ಮೃತ ವ್ಯಕ್ತಿ. ಈತ ವಿವಾಹಿತನಾಗಿದ್ದು, ಪತ್ನಿ, ಇಬ್ಬರು ಮಕ್ಕಳು ಇದ್ದಾರೆ.
ಬಸವರಾಜು ನಾಡ ಹೆಂಚು ಕೈಯಾಡಿಸುವ ಕೂಲಿ ಕಾರ್ಮಿಕನಾಗಿದ್ದು, ಮಧ್ಯರಾತ್ರಿ ಸುಮಾರು ಒಂದು ಗಂಟೆಗೆ ಇಬ್ಬರು ಪೊಲೀಸ್ ಸಮವಸ್ತ್ರದಲ್ಲಿರುವ ವ್ಯಕ್ತಿಗಳು ಬಸವರಾಜು ಅವರ ಕೈ ಕಾಲು ಹಿಡಿದು ಬಾರ್ ಮುಂದೆ ಮಲಗಿಸುತ್ತಿರುವ ದೃಶ್ಯ ಬಾರ್ನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಾಳಸಿದ್ದನಹುಂಡಿ ಗ್ರಾಮವು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಗೆ ಬರಲಿದ್ದು, ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿ ಲಭ್ಯವಿರುವ ವಸ್ತುಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.