ಮೈಸೂರು : ಬಜೆಟ್ ಮಂಡನೆ ಆರಂಭದಲ್ಲಿ ನಿರ್ಮಲ ಸೀತಾರಾಮನ್ ಅನ್ನದಾತನ ಗುಣಗಾನ ಮಾಡಿ ಕೃಷಿ ಕ್ಷೇತ್ರದ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡಿದ್ದಾರೆ. ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್, ಟೀಕಿಸಿದ್ದಾರೆ.
ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು, ಕೃಷಿ ಸಾಲ ನೀತಿ ತಿದ್ದುಪಡಿ ಮಾಡುವ ಬಗ್ಗೆ ಯಾವುದೇ ಪ್ರಸ್ತಾಪ ಮಾಡದೆ ಒಂದು ಪರ್ಸೆಂಟ್ನಷ್ಟು ಉಪಯೋಗವಿಲ್ಲದ ರೈತರಿಗೆ ಕಿಸಾನ್ ಕಾರ್ಡ್ ಕೊಡುತ್ತೇವೆ ಎನ್ನುವುದು ಕೇಂದ್ರ ಸರ್ಕಾರದ ಢೋಂಗಿ ನೀತಿಯಾಗಿದೆ. ರೈತನ ನೈಜ ಸಂಕಷ್ಟ ಅರಿಯದೆ ರೈತರ ಬಗ್ಗೆ ಮಾತನಾಡುವುದು ಶೋಭೆ ತರುವಂತದ್ದಲ್ಲ. ಕೃಷಿ ಕ್ಷೇತ್ರಕ್ಕೆ ರೈತರಿಗೆ ಸಂಪೂರ್ಣ ಬಜೆಟ್ ನಿರಾಸೆ ತಂದಿದೆ.