Wednesday, June 25, 2025
Google search engine

Homeರಾಜ್ಯಕಾವೇರಿ ಆರತಿ ವೈಭವದಿಂದ ನಡೆಸಲಾಗುವುದು : ಡಿಸಿಎಂ ಡಿಕೆ ಶಿವಕುಮಾರ್

ಕಾವೇರಿ ಆರತಿ ವೈಭವದಿಂದ ನಡೆಸಲಾಗುವುದು : ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಕೆಆರ್‌ಎಸ್ ಜಲಾಶಯದಿಂದ ಬಹಳ ದೂರದಲ್ಲಿ ಕಾವೇರಿ ಆರತಿ ವೈಭವದಿಂದ ನಡೆಸಲು ನಿರ್ಧಾರವಾಗಿದ್ದು, ಈ ಕುರಿತು ಇಂದು ಡಿಸಿಎಂ ಡಿಕೆ ಶಿವಕುಮಾರ್ ರೈತರೊಂದಿಗೆ ಸಭೆ ನಡೆಸಿದರು.

ರೈತರಿಂದ ವ್ಯಕ್ತವಾದ ವಿರೋಧದ ಹಿನ್ನೆಲೆಯಲ್ಲಿ ಮಾತನಾಡಿದ ಡಿಸಿಎಂ, “ಮಂಡ್ಯ ರೈತರ ಆತಂಕಗಳನ್ನು ಗೌರವಿಸುತ್ತೇವೆ. ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಗಂಗಾ, ತುಂಗಾ ನದಿಗಳಂತೆ ಕಾವೇರಿಯ ಮೇಲೂ ಆರತಿ ನಡೆಸುವುದು ನಮ್ಮ ಉದ್ದೇಶ” ಎಂದು ಹೇಳಿದರು.

ಕಾವೇರಿ ಎಲ್ಲರ ಆಸ್ತಿ. ಇದರಿಂದ ಪ್ರವಾಸೋದ್ಯಮವನ್ನು ಉತ್ತೇಜಿಸಿ ಉದ್ಯೋಗ ಸೃಷ್ಟಿ ಮಾಡಬಹುದು. ಬೆಂಗಳೂರಿಗೂ ಕಾವೇರಿಯೇ ನೀರಿನ ಮೂಲ.

ಅದನ್ನು ಗೌರವಿಸಲು ಕಾವೇರಿ ಆರತಿಯ ಕಾರ್ಯಕ್ರಮ ನಡೆಸಲಾಗುತ್ತಿದೆ. ಕೆಲವು ಜನರು ತಪ್ಪು ಗ್ರಹಿಕೆಯಿಂದ ವಿರೋಧಿಸುತ್ತಿದ್ದಾರೆ.

ಆದರೂ ನಾವು ವೈಭವದಿಂದ ಈ ಕಾರ್ಯಕ್ರಮ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ. “ಅಪಸ್ವರಗಳಿಂದ ತಲೆಕೆಡಿಸಿಕೊಳ್ಳೋದೆ ಇಲ್ಲ” ಎಂದೂ ಡಿಕೆಶಿ ಸ್ಪಷ್ಟಪಡಿಸಿದರು.

RELATED ARTICLES
- Advertisment -
Google search engine

Most Popular