Friday, August 1, 2025
Google search engine

Homeರಾಜ್ಯಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇಗೆ ಕೇಂದ್ರದಿಂದ ₹712 ಕೋಟಿ ಅನುದಾನ – ಹೆಚ್ಚುವರಿ ಸುರಕ್ಷತಾ ಕ್ರಮಕ್ಕೆ ನೆರವು

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇಗೆ ಕೇಂದ್ರದಿಂದ ₹712 ಕೋಟಿ ಅನುದಾನ – ಹೆಚ್ಚುವರಿ ಸುರಕ್ಷತಾ ಕ್ರಮಕ್ಕೆ ನೆರವು

ರಾಮನಗರ: ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಹೊಸ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ನಿರ್ಮಾಣ ಸೇರಿದಂತೆ ಹಲವು ಸುರಕ್ಷತಾ ಕ್ರಮಗಳಿಗಾಗಿ ಕೇಂದ್ರ ಸರ್ಕಾರ ₹712 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಸುಮಾರು ₹9,000 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಈ 118 ಕಿ.ಮೀ ಉದ್ದದ 6 ಪಥದ ಎಕ್ಸ್‌ಪ್ರೆಸ್‌ ವೇನಲ್ಲಿ ನಿತ್ಯ ಅಪಘಾತಗಳು ಸಾಮಾನ್ಯವಾಗಿದ್ದವು. 3 ವರ್ಷಗಳ ಹಿಂದೆ ಲೋಕಾರ್ಪಣೆಯಾದರೂ, ಮೂಲಭೂತ ಸುರಕ್ಷತಾ ಸೌಲಭ್ಯಗಳ ಕೊರತೆಯಿದ್ದವು.

ಈ ಅನುದಾನದಿಂದ 22 ಕಿ.ಮೀ ಉದ್ದದ ಹೊಸ ಸರ್ವೀಸ್ ರಸ್ತೆ, 14 ಎಂಟ್ರಿ–ಎಕ್ಸಿಟ್ ದ್ವಾರಗಳು, ಓವರ್‌ಪಾಸ್ ಹಾಗೂ ಅಂಡರ್‌ಪಾಸ್‌ಗಳ ನಿರ್ಮಾಣಗೊಳ್ಳಲಿದೆ. ಬಿಡದಿ ಮತ್ತು ಮಂಡ್ಯ ಭಾಗಗಳಲ್ಲಿ ಸರ್ವೀಸ್ ರಸ್ತೆಗಳ ಕೊರತೆ ಇದ್ದು, ಹೆದ್ದಾರಿ ಪ್ರವೇಶದ ಸ್ಥಳಗಳು ಅವೈಜ್ಞಾನಿಕವಾಗಿದ್ದುವು. ಇದರ ಪರಿಣಾಮವಾಗಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದ್ದವು.

ಈ ಹಿನ್ನಲೆಯಲ್ಲಿ ಪೋಲೀಸ್ ಹಾಗೂ ಹೆದ್ದಾರಿ ಪ್ರಾಧಿಕಾರಗಳು ನಡೆಸಿದ ಅಧ್ಯಯನದ ವರದಿಯನ್ನು ಆಧಾರವಿಟ್ಟು ಕೇಂದ್ರ ಸರ್ಕಾರ ಈ ಅನುದಾನ ಬಿಡುಗಡೆ ಮಾಡಿದೆ. ಪ್ರಯಾಣಿಸಿದ ದೂರಕ್ಕೆ ಅನುಗುಣವಾಗಿ ಟೋಲ್ ಪಾವತಿಯ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆ ಕೂಡ ಈ ಯೋಜನೆಯ ಭಾಗವಾಗಿದೆ.

ಇದೇ ವೇಳೆ, ಅಪಖ್ಯಾತಿಗೆ ಒಳಗಾಗಿದ್ದ ಎಕ್ಸ್‌ಪ್ರೆಸ್‌ ವೇ ಗೆ ಈಗ ಮರುಜೀವ ಸಿಕ್ಕಿದ್ದು, ಪ್ರಯಾಣಿಕರಲ್ಲಿ ಸಂತಸ ಮೂಡಿಸಿದೆ.

RELATED ARTICLES
- Advertisment -
Google search engine

Most Popular